ಆ್ಯಪ್ನಗರ

ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದು

ಹಾರೂಗೇರಿ: ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದು...

Vijaya Karnataka 27 Jul 2019, 5:00 am
ಹಾರೂಗೇರಿ : ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದು. ದೇಶ ರಕ್ಷಣೆಗಾಗಿ ವೀರಮರಣ ಹೊಂದಿದ ಹುತಾತ್ಮ ಯೋಧರನ್ನು ಸ್ಮರಿಸುವುದೇ ಒಂದು ದೇಶಾಭಿಮಾನ ಎಂದು ಪ್ರಾಚಾರ್ಯ ಟಿ.ಎಸ್‌.ವಂಟಗೂಡಿ ಹೇಳಿದರು.
Vijaya Karnataka Web BEL-26ARAKERI-1


ಇಲ್ಲಿನ ಡಾ. ರಾಮಮನೋಹರ ಲೋಹಿಯಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯ ಶ್ರೀ ಸಿದ್ದೇಶ್ವರ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಕಾರ್ಗಿಲ್‌ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶ ರಕ್ಷಕ ಸೈನಿಕರು, ಅನ್ನ ನೀಡುವ ರೈತ ಮತ್ತು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕ ಈ ತ್ರಿಶಕ್ತಿಯ ಮೇಲೆ ದೇಶದ ಭವಿಷ್ಯ ನಿಂತಿದೆ ಎಂದರು.

ಸಂಸ್ಥೆ ಅಧ್ಯಕ್ಷ ಎನ್‌.ಎಸ್‌.ಚೌಗಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹುತಾತ್ಮ ಯೋಧರನ್ನು ಸ್ಮರಿಸಿದರು. ಮುಖ್ಯಾಧ್ಯಾಪಕಿ ಎಂ.ಎನ್‌.ಚೌಗಲಾ, ಪ್ರಾಚಾರ್ಯ ವೈ.ಬಿ.ಪಾಟೀಲ, ಪ್ರೊ.ಎಂ.ಬಿ.ಮಾನೆ, ಪ್ರೊ. ಕೆ.ಪಿ. ಕೆಂಗಾರೆ, ಪ್ರೊ. ಪಿ.ಎಂ. ಕಾಂಬಳೆ, ಪ್ರೊ. ಶಶಿಕಾಂತ ವಗ್ಗಾ, ಪ್ರೊ. ಪಿ.ಎಂ. ಪಟ್ಟಣಶೆಟ್ಟಿ, ಪ್ರೊ. ಕವಿತಾ ಘಟಕಾಂಬಳೆ, ಮಲ್ಲೇಶ ಕಾಂಬಳೆ, ಎಸ್‌.ಆರ್‌.ಶಿರಹಟ್ಟಿ ಉಪಸ್ಥಿತರಿದ್ದರು.

ಪ್ರೊ. ಕೆ.ಆರ್‌.ಪೂಜೇರಿ ಸ್ವಾಗತಿಸಿದರು. ಪ್ರೊ. ವಿ.ಎನ್‌. ಸರಿಕರ ನಿರೂಪಿಸಿದರು. ಪ್ರೊ. ಮಹೇಶ ಹಳಬರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ