ಆ್ಯಪ್ನಗರ

ಇಂದಿನಿಂದ ಜಿಲ್ಲಾದ್ಯಂತ ಪಪಂ ಕಾರ್ಮಿಕರ ಪ್ರತಿಭಟನೆ

ಚನ್ನಮ್ಮನ ಕಿತ್ತೂರು : ಪಟ್ಟಣ ಪಂಚಾಯಿತಿಯ ಕಾರ್ಮಿಕರು ಬುಧವಾರದಿಂದ ಜಿಲ್ಲಾದ್ಯಂತ ಪ್ರತಿಭಟನೆ ಆರಂಭಿಸಲಿದ್ದಾರೆ ಎಂದು ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ಯಶವಂತ ...

Vijaya Karnataka 19 Dec 2018, 5:00 am
ಚನ್ನಮ್ಮನ ಕಿತ್ತೂರು : ಪಟ್ಟಣ ಪಂಚಾಯಿತಿಯ ಕಾರ್ಮಿಕರು ಬುಧವಾರದಿಂದ ಜಿಲ್ಲಾದ್ಯಂತ ಪ್ರತಿಭಟನೆ ಆರಂಭಿಸಲಿದ್ದಾರೆ ಎಂದು ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ಯಶವಂತ ಕರಬಣ್ಣವರ ಹೇಳಿದ್ದಾರೆ.
Vijaya Karnataka Web BEL-18 KITTUR PHOTO 2


ಅವರು ಮಂಗಳವಾರ ಸಂಜೆ ಕಿತ್ತೂರ ಪಪಂ ಆವರಣದಲ್ಲಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜಿಲ್ಲೆಯ ಎಲ್ಲ 17 ಪಪಂ ಹಾಗೂ ಪುರಸಭೆ ಕಾರ್ಮಿಕರ ಮುಖಂಡರೊಂದಿಗೆ ಆಗಮಿಸಿ, ಬೆಂಬಲ ಸೂಚಿಸಿ ಮಾತನಾಡಿದರು.

ಕಿತ್ತೂರಲ್ಲಿ ಪ್ರತಿಭಟನೆ ಆರಂಭಗೊಂಡು 8 ದಿನಗಳು ಕಳೆದಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ಯಾರೇ ಎಂದಿಲ್ಲ. ಇಡೀ ಊರಿಗೆ ಊರೇ ನಾರುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಸಾರ್ವಜನಿಕರು ಈಗಾಗಲೇ ಪಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನಪ್ರತಿನಿಧಿಗಳ ಆಶ್ವಾಸನೆಗಳು ಬೇಕಿಲ್ಲ, ನಮಗೆ ಉಣ್ಣಲು ಅನ್ನ ಬೇಕು, ಬೇಡಿಕೆಗಳು ಈಡೇರಬೇಕು ಎಂದು ಅವರು ಒತ್ತಾಯಿಸಿದರು.

ಉಪಾಧ್ಯಕ್ಷ ಲಕ್ಷ ್ಮಣ ಕೋಳಿಗುಡ್ಡ, ಕಿತ್ತೂರು ಸೇರಿದಂತೆ ಜಿಲ್ಲೆಯ 17 ಪಪಂ ಕಾರ್ಮಿಕ ಸಂಘದ ಅಧ್ಯಕ್ಷ , ಉಪಾಧ್ಯಕ್ಷ ರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ