ಆ್ಯಪ್ನಗರ

ಗ್ರಾಪಂ ಕಂಪ್ಯೂಟರ್‌ ಆಪರೇಟರ್‌ ವಜಾಕ್ಕೆ ಮನವಿ

ಕಕಮರಿ: ಗ್ರಾಮ ಪಂಚಾಯತಿ ಕಾರ್ಯಾಲಯದ ಕಂಪ್ಯೂಟರ್‌ ಆಪರೇಟರ್‌ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು ಅವರನ್ನು ವಜಾಗೊಳಿಸಲು ಗ್ರಾಮಸ್ಥರ ನಿಯೋಗ ...

Vijaya Karnataka 28 Jun 2019, 5:00 am
ಕಕಮರಿ: ಗ್ರಾಮ ಪಂಚಾಯತಿ ಕಾರ್ಯಾಲಯದ ಕಂಪ್ಯೂಟರ್‌ ಆಪರೇಟರ್‌ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು ಅವರನ್ನು ವಜಾಗೊಳಿಸಲು ಗ್ರಾಮಸ್ಥರ ನಿಯೋಗ ಪಿಡಿಒಗೆ ಮನವಿ ಸಲ್ಲಿಸಿತು.
Vijaya Karnataka Web BLG-2706-2-52-27 KAKAMARI 1


ಕಂಪ್ಯೂಟರ್‌ ಆಪರೇಟರ್‌ ಹಣಮಂತ ಸಿದರಾಯ ಸಿಂಧೂರ ಸರಕಾರದಿಂದ ಬರುವ ಸೌಲಭ್ಯಗಳ ಬಗ್ಗೆ ಸರಿಯಾಗಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ. ಜತೆಗೆ ಸಾರ್ವಜನಿಕರ ಜತೆ ಅನುಚಿತವಾಗಿ ವರ್ತಿಸುತ್ತಿದ್ದು ತಕ್ಷ ಣ ಅವರನ್ನು ಗ್ರಾಮ ಪಂಚಾಯತಿಯಿಂದ ತೆಗೆದು ಹಾಕಬೇಕು ಎಂದು ಗ್ರಾಮಸ್ಥರು ಪಿಡಿಒ ಕೆ.ಆರ್‌. ಶಿವಣ್ಣಗೋಳ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈರಪ್ಪ ದಾಶ್ಯಾಳ, ಅಣ್ಣಾಸಾಬ ದಾಶ್ಯಾಳ, ಸಂತೋಷ ಕನಮಡಿ, ರಾವಸಾಬ ಕನಮಡಿ, ಚಂದ್ರಶೇಖರ ಹೊನವಾಡ, ಅಶೋಕ ನಾಟೀಕಾರ ಇತರರು ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ