ಆ್ಯಪ್ನಗರ

ಜಲಧಾರೆಗಳತ್ತ ಮುಖ ಮಾಡಿದ ಜನ‘ದಾರಿ’ಗಳು!

ಬೆಳಗಾವಿ: ಮುಂಗಾರು ಮಳೆಯ ಅಬ್ಬರದ ಮಧ್ಯೆ ಮೈ ತುಂಬಿಕೊಂಡು ...

Vijaya Karnataka 15 Jul 2019, 5:00 am
ಬೆಳಗಾವಿ: ಮುಂಗಾರು ಮಳೆಯ ಅಬ್ಬರದ ಮಧ್ಯೆ ಮೈ ತುಂಬಿಕೊಂಡು ಭರದಿಂದ ಧುಮ್ಮಿಕ್ಕುತ್ತಿರುವ ನಾನಾ ಜಲಪಾತಗಳು ವಾರಾಂತ್ಯದ ಶನಿವಾರ ಹಾಗೂ ಭಾನುವಾರ ಅಪಾರ ಸಂಖ್ಯೆಯ ಜನರನ್ನು ತಮ್ಮತ್ತ ಸೆಳೆದುಕೊಂಡಿವೆ.
Vijaya Karnataka Web BLG-1407-2-52-AMBILI


ವೀಕೆಂಡ್‌ ಕಳೆಯುವುದು ಹೇಗೆಂಬ ಯೋಚನೆಯಲ್ಲಿದ್ದ ಬಹುತೇಕ ಜನ ಸನಿಹದ ಜಲಪಾತಗಳ ದರ್ಶನಕ್ಕೆ ತೆರಳಿ ಜಾಲಿ ಮಾಡಿದ್ದಾರೆ. ವಿಶೇಷವಾಗಿ ಅಂಬೋಲಿ, ಗೋಕಾಕ್‌, ಗೊಡಚಿನಮಲ್ಕಿ, ಸುಂಡಿ ಜಲಪಾತಗಳ ವೀಕ್ಷಣೆಗೆ ಅಪಾರ ಸಂಖ್ಯೆಯ ಜನ ಮುಗಿಬಿದ್ದಿದ್ದರು. ಶಿಂಬೋಲಾ, ದೂಧಸಾಗರ, ವಜ್ರಪೋಹಾ ಮುಂತಾದ ಜಲಪಾತಗಳತ್ತಲೂ ಅನೇಕರು ಹೆಜ್ಜೆ ಹಾಕಿದರು. ಇವರಲ್ಲಿ ವಿದ್ಯಾರ್ಥಿಗಳು ಹಾಗೂ ಕುಟುಂಬ ಸಮೇತ ತೆರಳಿದ ಉದ್ಯೋಗಿಗಳ ಸಂಖ್ಯೆ ಹೆಚ್ಚಿತ್ತು.

ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ನೆರೆಯ ಮಹಾರಾಷ್ಟ್ರ ರಾಜ್ಯ ವ್ಯಾಪ್ತಿಯ ಜಲಪಾತಗಳು ಮಾನ್ಸೂನ್‌ ಅವಧಿಯ ವೀಕೆಂಡ್‌ ವಿಹಾರದ ಕ್ರೇಜ್‌ ಹುಟ್ಟಿಸಿವೆ. ಮುಂಗಾರು ಚುರುಕಾಗಿದ್ದರೆ ಮುಂದಿನ ವೀಕೆಂಡ್‌ಗಳಲ್ಲಿ ಇನ್ನಷ್ಟು ಹೆಚ್ಚಳ ಕಂಡುಬರುವ ಸಾಧ್ಯತೆಗಳಿವೆ.

ಸೆಲ್ಫಿ ಸಂಭ್ರಮ :
ಜಲಪಾತಗಳ ಸುತ್ತಮುತ್ತ ಮಳೆ ಸುರಿದರೂ ಲೆಕ್ಕಿಸದೆ ಪ್ರವಾಸಿಗರು ಧುಮುಕುವ ಜಲಧಾರೆಗಳ ಬಳಿ ನಿಂತು, ಕೊರೆವ ಚಳಿಯಲ್ಲೂ ನೀರಿಗೆ ಮೈಯೊಡ್ಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಅಂಬೋಲಿ ಸಮೀಪದ ಕವಳೆಸೇಠ್‌, ತಿಲಾರಿ ಅಣೆಕಟ್ಟೆ ಪ್ರದೇಶದ ಸ್ವಪ್ನವೇಲ್‌ ಪಾಯಿಂಟ್‌, ಖಾನಾಪುರದ ಕಣಕುಂಬಿ ಸೇರಿದಂತೆ ಪಶ್ಚಿಮ ಘಟ್ಟ, ಸಹ್ಯಾದ್ರಿ ಬೆಟ್ಟಗಳ ಸಾಲಿನ ರಮಣೀಯ ಸ್ಥಳಗಳಲ್ಲೂ ಜನಸಾಗರ ಕಂಡುಬಂತು. ರಾಯಚೂರು-ಬಾಚಿ ಹೆದ್ದಾರಿಯಲ್ಲಿ ಅಂಬೋಲಿಯತ್ತ ಸಾಗುವ ಪ್ರವಾಸಿ ವಾಹನಗಳೇ ತುಂಬಿಕೊಂಡಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ