ಆ್ಯಪ್ನಗರ

ಕೃಷ್ಣಾ ತೀರದ ಜನರ ಸಮಸ್ಯೆಗೆ ಶಾಶ್ವತ ಪರಿಹಾರ

ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕೃಷ್ಣಾ ನದಿ ತೀರದ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಪ್ರಾಮಾಣಿಕವಾಗಿ

Vijaya Karnataka 23 Jun 2019, 5:00 am
ಚಿಕ್ಕೋಡಿ: ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕೃಷ್ಣಾ ನದಿ ತೀರದ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದರು.
Vijaya Karnataka Web BEL-22CKD1


ಶನಿವಾರ ಮಹಾರಾಷ್ಟ್ರದ ಶಿರೋಳದ ರಾಜಾಪುರ ಬ್ಯಾರೇಜ್‌ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ''ಕರ್ನಾಟಕ ಹಾಗೂ ಮಹಾರಾಷ್ಟ್ರ ಸರಕಾರಗಳು ತಮ್ಮ ರಾಜ್ಯದ ಹಿತ ಕಾಪಾಡಲು ಮುಂದಾಗಿವೆ. ಇದರಲ್ಲಿ ಯಾವುದೇ ಸರಕಾರದ ವೈಫಲ್ಯಗಳಿಲ್ಲ. ನೈಸರ್ಗಿಕ ವಿಕೋಪದಿಂದಾಗಿ ಇಂತಹ ಘಟನೆ ನಡೆದಿದ್ದು, ಇದರಲ್ಲಿ ಯಾರದ್ದೂ ತಪ್ಪಿಲ್ಲ'', ಎಂದರು.

''ಹಲವು ವರ್ಷಗಳಿಂದ ಸಂಕಷ್ಟದಲ್ಲಿರುವ ಈ ಭಾಗದ ಜನರ ಸಮಸ್ಯೆಯನ್ನು ಕಣ್ಣಾರೆ ಕಂಡು ಪರಿಹಾರ ಹುಡುಕುವುದು ಈ ಭೇಟಿಯ ಮುಖ್ಯ ಉದ್ದೇಶ. ಎಲ್ಲ ಪಕ್ಷ ಗಳ ಮುಖಂಡರು ಒಟ್ಟಾಗಿ ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದೇವೆ. ನನ್ನ ಆಪ್ತರಾದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಸಹೋದರ ನಿಧನ ಹೊಂದಿದ ಬಗ್ಗೆ ದುಃಖದಲ್ಲಿದ್ದರೂ ನಾನು ಇಲ್ಲಿ ಭೇಟಿ ನೀಡಿದ್ದೇನೆ. ನನಗೆ ಯಾವುದೇ ಸ್ಟಾರ್‌ ಪ್ರಚಾರ ಬೇಡ'', ಎಂದು ಅವರು ಹೇಳಿದರು.

ಆರದ ಮುನಿಸು
ಜಿಲ್ಲೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಬರುವ ವಿಷಯ ತಿಳಿದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಭೇಟಿಯಾಗಿರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ರಾಜಾಪುರ ಬ್ಯಾರೇಜ್‌ಗೆ ಸತೀಶ್‌ ಆಗಮಿಸಿದರಾದರೂ ಪರಸ್ಪರ ಮಾತುಕತೆ ಅಷ್ಟಕ್ಕಷ್ಟೇ ಇತ್ತು. ರಾಜಾಪುರ ಬ್ಯಾರೇಜ್‌ನಲ್ಲೂ ಇಬ್ಬರೂ ಪ್ರತ್ಯೇಕವಾಗಿ ನದಿ ವೀಕ್ಷಣೆ ನಡೆಸಿದರು. ನಂತರ ಡಿಕೆಶಿ ಕಾರಿನಲ್ಲಿ ಶಾಸಕರಾದ ಶ್ರೀಮಂತ ಪಾಟೀಲ, ಗಣೇಶ್‌ ಹುಕ್ಕೇರಿ, ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳಕರ, ಕುಳಿತರೆ, ಮಹೇಶ ಕುಮಠಳ್ಳಿ ಹಾಗೂ ಸತೀಶ ಜಾರಕಿಹೊಳಿ ಪ್ರತ್ಯೇಕ ಕಾರಿನಲ್ಲಿ ಪ್ರಯಾಣ ಬೆಳೆಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ