ಆ್ಯಪ್ನಗರ

ಕುರಿ ಸಮ್ಮೇಳನ ತಡೆದ ಪೊಲೀಸರು

ಬೆಳಗಾವಿ: ಸುವರ್ಣ ವಿಧಾನ ಸೌಧದ ಆವರಣದಲ್ಲಿಕುರಿ ಸಮ್ಮೇಳನ ಮಾಡಲು ...

Vijaya Karnataka 11 Oct 2019, 5:00 am
ಬೆಳಗಾವಿ: ಸುವರ್ಣ ವಿಧಾನ ಸೌಧದ ಆವರಣದಲ್ಲಿಕುರಿ ಸಮ್ಮೇಳನ ಮಾಡಲು ತೆರಳುತ್ತಿದ್ದ ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್‌ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ಹಿರೇಬಾಗೇವಾಡಿ ಗ್ರಾಮದಲ್ಲೇ ವಶಕ್ಕೆ ಪಡೆದು ಉದ್ದೇಶಿತ ಕುರಿ ಸಮ್ಮೇಳನಕ್ಕೆ ಬ್ರೇಕ್‌ ಹಾಕಿದರು.
Vijaya Karnataka Web 10RAJU-2053944


ರಾಜ್ಯ ಸರಕಾರ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿನಡೆಸದಿರುವುದನ್ನು ವಿರೋಧಿಸಿ ಹೋರಾಟಗಾರರು ಗುರುವಾರ ಬೆಳಗ್ಗೆ 11.30ಕ್ಕೆ ಸುವರ್ಣ ವಿಧಾನಸೌಧದ ಎದುರು ಕುರಿ ಸಮ್ಮೇಳನ ಕೈಗೊಳ್ಳಲು ನಿರ್ಧರಿಸಿದ್ದರು. ಇದಕ್ಕಾಗಿ 50ಕ್ಕೂ ಹೆಚ್ಚು ಕುರಿಗಳನ್ನು ಸೇರಿಸಲು ನಿರ್ಧರಿಸಿದ್ದರು. ಆದರೆ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿದ್ದ ವಾಟಾಳ್‌ ನಾಗರಾಜ್‌ ಅವರನ್ನು ಮಾರ್ಗ ಮಧ್ಯದ ಹಿರೇಬಾಗೇವಾಡಿಯಲ್ಲೇ ತಡೆದರು. ವಾಹನ ಸಮೇತ ಪೊಲೀಸ್‌ ಠಾಣೆಗೆ ಕರೆದೊಯ್ದರು. ಮತ್ತೊಂದು ಕಡೆಗೆ ಕುರಿ ಮಂದೆಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡರು. ಇದನ್ನು ವಿರೋಧಿಸಿದ ವಾಟಾಳ ನಾಗರಾಜ್‌ ಮತ್ತು ಬೆಂಬಲಿಗರು ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಪೊಲೀಸರು ಠಾಣೆ ಆವರಣ ಬಿಟ್ಟು ಹೊರಹೋಗಲು ಅವಕಾಶ ನೀಡದೇ ಇದ್ದಾಗ, ಠಾಣೆ ಎದುರುಗಡೆಯೇ ಕುಳಿತು ಕೇಂದ್ರ ಸರಕಾರ ರಾಜ್ಯಕ್ಕೆ ಅಗತ್ಯ ಪ್ರಮಾಣದಲ್ಲಿನೆರೆ ಪರಿಹಾರ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿಛಾಯಾಗ್ರಹಣ ಮತ್ತು ಚಿತ್ರೀಕರಣವನ್ನು ನಿಷೇಧಿಸಿರುವುದಕ್ಕೂ ಕಿಡಿಕಾರಿದರು. ಇದಕ್ಕಾಗಿ ರಾಜ್ಯಾದ್ಯಂತ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.

ಠಾಣೆಯ ಎದುರು ಧರಣಿ ಕುಳಿತ ವಾಟಾಳ್‌ ನಾಗರಾಜ್‌ ಅವರನ್ನು ಪೊಲೀಸರು ಒಳಗಡೆ ಬರಲು ಹೇಳಿದರು. ಆದರೆ, ಅವರು ಒಪ್ಪಲಿಲ್ಲ. ಹೀಗಾಗಿ ಅವರನ್ನು ಎತ್ತಿಕೊಂಡು ಒಳಗೆ ಕರೆದೊಯ್ಯಲಾಯಿತು. ಮಧ್ಯಾಹ್ನದ ನಂತರ ಕುರಿ ಸೇರಿದಂತೆ ಎಲ್ಲರನ್ನೂ ಪೊಲೀಸರು ಬಿಡುಗಡೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ