ಆ್ಯಪ್ನಗರ

ಕಾಳಿ ಸ್ವಾಮಿಗೆ ಪೊಲೀಸರಿಂದ ತಡೆ

ಬೆಳಗಾವಿ: ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದ ...

Vijaya Karnataka 16 Feb 2020, 5:00 am
ಬೆಳಗಾವಿ: ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದ ವಿರಕ್ತಮಠಕ್ಕೆ ಭೇಟಿ ನೀಡಲು ಆಗಮಿಸಿದ್ದ ಬೆಂಗಳೂರಿನ ಕಾಳಿಮಠದ ಋುಷಿಕುಮಾರ ಸ್ವಾಮಿ ಅವರನ್ನು ಚನ್ನಮ್ಮನ ಕಿತ್ತೂರು ಠಾಣೆ ಪೊಲೀಸರು ತಡೆದು ಮರಳಿ ಕಳುಹಿಸಿದ್ದಾರೆ.
Vijaya Karnataka Web police stopped kali swamy
ಕಾಳಿ ಸ್ವಾಮಿಗೆ ಪೊಲೀಸರಿಂದ ತಡೆ


ಶನಿವಾರ ಕಿತ್ತೂರು ಮೂಲಕ ದೇಶನೂರು ಗ್ರಾಮಕ್ಕೆ ಭೇಟಿ ನೀಡಲು ಆಗಮಿಸುತ್ತಿದ್ದ ಸಂದರ್ಭದಲ್ಲಿಕಿತ್ತೂರು ಬಳಿ ಋುಷಿಕುಮಾರ ಸ್ವಾಮಿಯನ್ನು ಪೊಲೀಸರು ತಡೆದಿದ್ದಾರೆ. ''ಸದ್ಯದ ಪರಿಸ್ಥಿತಿಯಲ್ಲಿದೇಶನೂರಿನ ವಿರಕ್ತಮಠಕ್ಕೆ ಭೇಟಿ ನೀಡುವುದು ಸರಿಯಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿಮರಳಿ ಹೋಗುವುದು ಸೂಕ್ತ ಎಂದು ಪೊಲೀಸರು ಮನವಿ ಮಾಡಿದ ಹಿನ್ನೆಲೆಯಲ್ಲಿಮಠದ ಭೇಟಿ ಕೈ ಬಿಡಲಾಗಿದೆ'', ಎಂದು ಸ್ವತಃ ಋುಷಿಕುಮಾರ ಸ್ವಾಮಿ ವಿಡಿಯೊವೊಂದರಲ್ಲಿಹೇಳಿಕೆ ನೀಡಿದ್ದಾರೆ.

ಅಲ್ಲದೆ, ಋುಷಿಕುಮಾರ ಸ್ವಾಮಿ ಕೆಲ ದಿನಗಳ ಹಿಂದೆ ವಿರಕ್ತಮಠದ ಫಾದರ್‌ ಮೆನಿನೋ ಗೋನ್ಸಾಲ್ವಿಸ್‌ ಅವರೊಂದಿಗೆ ಸಂಭಾಷಣೆ ನಡೆಸಿದ್ದ ಆಡಿಯೋ ಕೂಡ ವೈರಲ್‌ ಆಗಿದೆ. ವಿರಕ್ತಮಠದಲ್ಲಿಮತಾಂತರ ನಡೆಯುತ್ತಿರುವ ಆರೋಪಗಳ ಕುರಿತು ಋುಷಿಕುಮಾರ ಸ್ವಾಮಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಗೋನ್ಸಾಲ್ವಿಸ್‌, ''ಮಠಕ್ಕೆ ಭೇಟಿ ನೀಡಿದರೆ ವಾಸ್ತವಾಂಶ ಗೊತ್ತಾಗುತ್ತದೆ. ಒಮ್ಮೆ ಭೇಟಿ ನೀಡಿ'', ಎಂದು ಮನವಿ ಮಾಡಿದ್ದರು. ಇದೇ ಹಿನ್ನೆಲೆಯಲ್ಲಿಶನಿವಾರ ಋುಷಿಕುಮಾರ ಸ್ವಾಮಿ ದೇಶನೂರ ಭೇಟಿಗೆ ಆಗಮಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ