ಆ್ಯಪ್ನಗರ

ನಕಲಿ ಪತ್ರಕರ್ತ ಪೊಲೀಸ್‌ ಬಲೆಗೆ

ಬೆಳಗಾವಿ: ಎಸಿಬಿ ಅಧಿಕಾರಿ, ಪತ್ರಕರ್ತರೆಂದು ಹೇಳಿ ಸಾರಿಗೆ ...

Vijaya Karnataka 20 Oct 2019, 5:00 am
ಬೆಳಗಾವಿ: ಎಸಿಬಿ ಅಧಿಕಾರಿ, ಪತ್ರಕರ್ತರೆಂದು ಹೇಳಿ ಸಾರಿಗೆ ಅಧಿಕಾರಿಗೆ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿಶನಿವಾರ ಪೊಲೀಸರು ಓರ್ವನನ್ನು ಬಂಧಿಸಿದ್ದು, ಇನ್ನೊರ್ವನಿಗಾಗಿ ಹುಡುಕಾಟ ನಡೆಸಿದ್ದಾರೆ.
Vijaya Karnataka Web 19 LBS 16_53


ಟಿಳಕವಾಡಿಯ ಅತುಲ್‌ ವಿಶ್ವಾಸ ಕದಂ(36) ಬಂಧಿತ ವ್ಯಕ್ತಿ. ಇನ್ನೋರ್ವ ಆರೋಪಿ ಜಾಕೀರಹುಸೇನ್‌ ಮನಿಯಾರ್‌ ತಲೆಮರೆಸಿಕೊಂಡ್ಡಾನೆ. ಇವರು ಪ್ರಾದೇಶಿಕ ಸಾರಿಗೆ ಅಧೀಕ್ಷಕ ಶರಣಪ್ಪ ಕಲ್ಲಪ್ಪ ಹುಗ್ಗಿ ಅವರಿಗೆ ಎಸಿಬಿ ಅಧಿಕಾರಿ ಹಾಗೂ ಪತ್ರಕರ್ತರೆಂದು ಕರೆ ಮಾಡಿ ಹಣಕ್ಕೆ ಬೇಡಿಕ್ಕೆ ಇಟ್ಟಿದ್ದಲ್ಲದೆ, ಹಣ ಕೊಡದಿದ್ದರೆ ನಿಮ್ಮ ಮೇಲಿನ ದೂರು ಮುಂದುವರಿಸಲಾಗುವುದು ಎಂದು ಬೇದರಿಕೆ ಹಾಕಿದ್ದರು. ಇವರ ವರ್ತನೆಯಿಂದ ಸಂಶಯಗೊಂಡ ಹುಗ್ಗಿ ಅವರು ವಿಷಯವನ್ನು ಮಾರ್ಕೆಟ್‌ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಅತುಲ್‌ ಕದಂನನ್ನು ಬಂಧಿಸಿದ್ದಾರೆ. ಈ ಕುರಿತು ಮಾರ್ಕೆಟ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ