ಆ್ಯಪ್ನಗರ

ಕೊರೊನಾ ಅಪಾಯದ ನಡುವೆಯೂ ಅಂಚೆಯಣ್ಣನ ಸಾಮಾಜಿಕ ಸೇವೆ

ಹಣ್ಣಿಕೇರಿ: ಲಾಕ್‌ಡೌನ್‌ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದ ...

Vijaya Karnataka 27 Apr 2020, 5:00 am
ಹಣ್ಣಿಕೇರಿ: ಲಾಕ್‌ಡೌನ್‌ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದ ಈ ಸಂದರ್ಭದಲ್ಲಿಗ್ರಾಮದ ಪೋಸ್ಟ್‌ ಮಾಸ್ಟರ್‌ರೊಬ್ಬರು ಜನರಿಗೆ ಔಷಧ, ಮಾತ್ರೆ ಹಾಗೂ ಸರಕಾರಿ ಸೌಲಭ್ಯಗಳ ವೇತನವನ್ನು ನಾನಾ ಹಳ್ಳಿಗಳ ಜನರಿಗೆ ತಲುಪಿಸುತ್ತ ಬೇರೆಯವರಿಗೂ ಮಾದರಿಯಾಗಿದ್ದಾರೆ.
Vijaya Karnataka Web 26 HANNIKERI 1_53
ಶಿವಪ್ಪ ಬಳಗಣ್ಣವರ


ಸ್ಥಳೀಯ ಅಂಚೆ ಕಚೇರಿಯ ಪೋಸ್ಟ್‌ ಮಾಸ್ಟರ್‌ ಶಿವಪ್ಪ ಬಳಗಣ್ಣವರ ಈ ರೀತಿಯಾಗಿ ಸಾರ್ವಜನಿಕರಿಗೆ ನೆರವಾಗುತ್ತ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರು ಗ್ರಾಮದಿಂದ ಪ್ರತಿದಿನ ಬೈಲಹೊಂಗಲಕ್ಕೆ ಕರ್ತವ್ಯದ ಮೇಲೆ ಹೋಗಿ ಬರುತ್ತಾರೆ. ಆಗ ಜನರು ಅಲ್ಲಿಂದ ಔಷಧ ಇಲ್ಲವೇ ಅಗತ್ಯ ವಸ್ತುಗಳನ್ನು ತರಲು ಹೇಳಿದರೆ ತಂದು ಕೊಟ್ಟು ಸಾರ್ವಜನಿಕ ಸೇವೆಯನ್ನೂ ಮಾಡುತ್ತಿದ್ದಾರೆ.

ಹಣ್ಣಿಕೇರಿ ಪೋಸ್ಟ್‌ ಆಫೀಸ್‌ ವ್ಯಾಪ್ತಿಯಲ್ಲಿ ಹಣ್ಣಿಕೇರಿ, ಬೈರನಟ್ಟಿ, ಹಿರೇಮೇಳೆ ಗ್ರಾಮಗಳು ಇವೆ. ಇಲ್ಲಿನ ಜನರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಸರಕಾರದಿಂದ ನೀಡಲಾದ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಶೇಷಚೇತನರ ವೇತನ, ಪಿಂಚಣಿ ಹೀಗೆ ನಾನಾ ವೇತನಗಳ ಜತೆ ಮನಿ ಆರ್ಡರ್‌ ಹಾಗೂ ಪತ್ರಗಳನ್ನು ಮುಟ್ಟಿಸುತ್ತಿದ್ದಾರೆ. ಕೊರೊನಾ ಹಾವಳಿಯ ನಡುವೆಯೂ ತಮ್ಮ ಜೀವದ ಅಪಾಯದ ಹಂಗು ತೊರೆದು ಜನರ ಸೇವೆ ಮಾಡುತ್ತಿರುವ ಈ ಪೋಸ್ಟ್‌ ಮಾಸ್ಟರ್‌ ಈಗ ಎಲ್ಲರ ಪ್ರೀತಿಯ ಅಂಚೆಯಣ್ಣ ಆಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ