ಆ್ಯಪ್ನಗರ

ನಸಲಾಪುರ-ಅಂಕಲಿ ರಸ್ತೆಯಲ್ಲಿ ಗುಂಡಿ ಗಂಡಾಂತರ

ರಾಯಬಾಗ: ತಾಲೂಕಿನ ನಸಲಾಪುರದಿಂದ ಅಂಕಲಿಗೆ ಹೋಗುವ ರಸ್ತೆ ತೀರ ಹದಗೆಟ್ಟಿದ್ದು ...

Vijaya Karnataka 16 Oct 2019, 5:00 am
ರಾಯಬಾಗ: ತಾಲೂಕಿನ ನಸಲಾಪುರದಿಂದ ಅಂಕಲಿಗೆ ಹೋಗುವ ರಸ್ತೆ ತೀರ ಹದಗೆಟ್ಟಿದ್ದು, ರಸ್ತೆಯಲ್ಲಿಗುಂಡಿಗಳು ಬಿದ್ದಿದ್ದು, ರಸ್ತೆ ಕಾಣದಂತಾಗಿ ವಾಹನ ಸವಾರರು, ಪ್ರಯಾಣಿಕರು ಜೀವ ಕೈಯಲ್ಲಿಹಿಡಿದು ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.
Vijaya Karnataka Web 15RAIBAG5PHOTO_53


ತಾಲೂಕಿನ ಹಾರೂಗೇರಿಯಿಂದ ಚಿಕ್ಕೋಡಿಗೆ ಹೋಗುವ ಮುಖ್ಯ ರಸ್ತೆ ಇದಾಗಿದ್ದು, ರಸ್ತೆ ನಡುವೆ ಬಿದ್ದಿರುವ ದೊಡ್ಡ ಹೊಂಡಗಳು ಮಳೆ ನೀರು ತುಂಬಿ ಕೆರೆಗಳಂತೆ ಗೋಚರಿಸುತ್ತವೆ.

ಈ ರಸ್ತೆಯನ್ನು ಪ್ರತಿವರ್ಷ ರಿಪೇರಿ ಮಾಡುತ್ತಲೇ ಇದ್ದರೂ ಮತ್ತೆ ಗುಂಡಿಗಳು ಬೀಳುತ್ತಲೇ ಇವೆ. ಇದರಿಂದಾಗಿ ಪ್ರತಿದಿನ ಸಂಚರಿಸುವ ಸಾವಿರಾರು ವಾಹನ ಸವಾರರು ಪ್ರಯಾಣಿಕರು ಲೋಕೋಪಯೋಗಿ ಇಲಾಖೆಯವರನ್ನು ಶಪಿಸುತ್ತಲೇ ಸಾಗುತ್ತಾರೆ.

ಪ್ರತಿವರ್ಷ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ರಿಪೇರಿ ಮಾಡುತ್ತಿದ್ದರೂ ರಸ್ತೆ ಹದಗೆಡುತ್ತಲೇ ಇದೆ. ಆದರೂ ಮೇಲಾಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆ ಹದಗೆಟ್ಟ ವಿಚಾರ ಗಮನಕ್ಕೆ ಬಂದಿದ್ದು ಒಂದು ತಿಂಗಳ ಒಳಗೆ ರಸ್ತೆ ರಿಪೇರಿ ಮಾಡಿಸಿಕೊಡಲಾಗುವುದು.
- ಆರ್‌.ಬಿ.ಮನುವಡ್ಡರ, ಎಇ, ಲೋಕೋಪಯೋಗಿ ಇಲಾಖೆ ರಾಯಬಾಗ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ