ರಾಯಬಾಗ: ತಾಲೂಕಿನ ನಸಲಾಪುರದಿಂದ ಅಂಕಲಿಗೆ ಹೋಗುವ ರಸ್ತೆ ತೀರ ಹದಗೆಟ್ಟಿದ್ದು, ರಸ್ತೆಯಲ್ಲಿಗುಂಡಿಗಳು ಬಿದ್ದಿದ್ದು, ರಸ್ತೆ ಕಾಣದಂತಾಗಿ ವಾಹನ ಸವಾರರು, ಪ್ರಯಾಣಿಕರು ಜೀವ ಕೈಯಲ್ಲಿಹಿಡಿದು ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.
ತಾಲೂಕಿನ ಹಾರೂಗೇರಿಯಿಂದ ಚಿಕ್ಕೋಡಿಗೆ ಹೋಗುವ ಮುಖ್ಯ ರಸ್ತೆ ಇದಾಗಿದ್ದು, ರಸ್ತೆ ನಡುವೆ ಬಿದ್ದಿರುವ ದೊಡ್ಡ ಹೊಂಡಗಳು ಮಳೆ ನೀರು ತುಂಬಿ ಕೆರೆಗಳಂತೆ ಗೋಚರಿಸುತ್ತವೆ.
ಈ ರಸ್ತೆಯನ್ನು ಪ್ರತಿವರ್ಷ ರಿಪೇರಿ ಮಾಡುತ್ತಲೇ ಇದ್ದರೂ ಮತ್ತೆ ಗುಂಡಿಗಳು ಬೀಳುತ್ತಲೇ ಇವೆ. ಇದರಿಂದಾಗಿ ಪ್ರತಿದಿನ ಸಂಚರಿಸುವ ಸಾವಿರಾರು ವಾಹನ ಸವಾರರು ಪ್ರಯಾಣಿಕರು ಲೋಕೋಪಯೋಗಿ ಇಲಾಖೆಯವರನ್ನು ಶಪಿಸುತ್ತಲೇ ಸಾಗುತ್ತಾರೆ.
ಪ್ರತಿವರ್ಷ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ರಿಪೇರಿ ಮಾಡುತ್ತಿದ್ದರೂ ರಸ್ತೆ ಹದಗೆಡುತ್ತಲೇ ಇದೆ. ಆದರೂ ಮೇಲಾಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಹದಗೆಟ್ಟ ವಿಚಾರ ಗಮನಕ್ಕೆ ಬಂದಿದ್ದು ಒಂದು ತಿಂಗಳ ಒಳಗೆ ರಸ್ತೆ ರಿಪೇರಿ ಮಾಡಿಸಿಕೊಡಲಾಗುವುದು.
- ಆರ್.ಬಿ.ಮನುವಡ್ಡರ, ಎಇ, ಲೋಕೋಪಯೋಗಿ ಇಲಾಖೆ ರಾಯಬಾಗ.
ತಾಲೂಕಿನ ಹಾರೂಗೇರಿಯಿಂದ ಚಿಕ್ಕೋಡಿಗೆ ಹೋಗುವ ಮುಖ್ಯ ರಸ್ತೆ ಇದಾಗಿದ್ದು, ರಸ್ತೆ ನಡುವೆ ಬಿದ್ದಿರುವ ದೊಡ್ಡ ಹೊಂಡಗಳು ಮಳೆ ನೀರು ತುಂಬಿ ಕೆರೆಗಳಂತೆ ಗೋಚರಿಸುತ್ತವೆ.
ಈ ರಸ್ತೆಯನ್ನು ಪ್ರತಿವರ್ಷ ರಿಪೇರಿ ಮಾಡುತ್ತಲೇ ಇದ್ದರೂ ಮತ್ತೆ ಗುಂಡಿಗಳು ಬೀಳುತ್ತಲೇ ಇವೆ. ಇದರಿಂದಾಗಿ ಪ್ರತಿದಿನ ಸಂಚರಿಸುವ ಸಾವಿರಾರು ವಾಹನ ಸವಾರರು ಪ್ರಯಾಣಿಕರು ಲೋಕೋಪಯೋಗಿ ಇಲಾಖೆಯವರನ್ನು ಶಪಿಸುತ್ತಲೇ ಸಾಗುತ್ತಾರೆ.
ಪ್ರತಿವರ್ಷ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ರಿಪೇರಿ ಮಾಡುತ್ತಿದ್ದರೂ ರಸ್ತೆ ಹದಗೆಡುತ್ತಲೇ ಇದೆ. ಆದರೂ ಮೇಲಾಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಹದಗೆಟ್ಟ ವಿಚಾರ ಗಮನಕ್ಕೆ ಬಂದಿದ್ದು ಒಂದು ತಿಂಗಳ ಒಳಗೆ ರಸ್ತೆ ರಿಪೇರಿ ಮಾಡಿಸಿಕೊಡಲಾಗುವುದು.
- ಆರ್.ಬಿ.ಮನುವಡ್ಡರ, ಎಇ, ಲೋಕೋಪಯೋಗಿ ಇಲಾಖೆ ರಾಯಬಾಗ.