ಆ್ಯಪ್ನಗರ

ಪ್ರಮುಖ ರಸ್ತೆಯ ಮಧ್ಯ ರಸ್ತೆ ಗುಂಡಿ: ದುರಸ್ತಿಗೆ ಆಗ್ರಹ

ಬೈಲಹೊಂಗಲ : ಪಟ್ಟಣದ ಕ್ಷೇತ್ರ ಶಿಕ್ಷ ಣಾಧಿಕಾರಿಕಾರಿಗಳ ಕಚೇರಿ ಸಮೀಪದ ಪ್ರಮುಖ ರಸ್ತೆಯಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂಥ ಸ್ಥಿತಿಯಲ್ಲಿರುವ ತೆಗ್ಗು-ಗುಂಡಿಗಳ ...

Vijaya Karnataka 16 Mar 2019, 5:00 am
ಬೈಲಹೊಂಗಲ : ಪಟ್ಟಣದ ಕ್ಷೇತ್ರ ಶಿಕ್ಷ ಣಾಧಿಕಾರಿಕಾರಿಗಳ ಕಚೇರಿ ಸಮೀಪದ ಪ್ರಮುಖ ರಸ್ತೆಯಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂಥ ಸ್ಥಿತಿಯಲ್ಲಿರುವ ತೆಗ್ಗು-ಗುಂಡಿಗಳ ದುರಸ್ತಿಗೆ ಸಾರ್ವಜನಿಕರು ಪುರಸಭೆಯನ್ನು ಆಗ್ರಹಿಸಿದ್ದಾರೆ.
Vijaya Karnataka Web BEL-15HTP3


ಶಿಕ್ಷಣ, ಕೃಷಿ, ಆರೋಗ್ಯ, ಮೀನುಗಾರಿಕೆ ಇಲಾಖೆಗಳ ಕಚೇರಿಗಳು ಹಾಗೂ ಶಾಸಕರ ಮತಕ್ಷೇತ್ರ ಮಾದರಿ ಶಾಲೆ ನಂ.4 ಮತ್ತು ಸರಕಾರಿ ಹಾಸ್ಟೆಲ್‌ಗಳಿರುವ ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಜನ ಸಂಚರಿಸುತ್ತಾರೆ. ರಸ್ತೆಯ ಎಡಭಾಗದಲ್ಲಿ ಗಟಾರದ ಮೇಲ್ಛಾವಣಿ ಕಿತ್ತು ಬಾಯ್ದೆರೆದು ನಿಂತ ರಸ್ತೆಯಲ್ಲಿ ಈಗಾಗಲೇ ಅನೇಕ ಬೈಕ್‌ ಸವಾರರು ಕೈ ಕಾಲು ಮುರಿದುಕೊಂಡಿದ್ದಾರೆ. ಇದನ್ನೆಲ್ಲ ಕಂಡು ಕಾಣದಂತೆ ಪುರಸಭೆಯವರು ಜಾಣ ಮೌನವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅಪಘಾತಕ್ಕೆ ಈಡು ಮಾಡಬಲ್ಲ ಈ ಪ್ರಮುಖ ರಸ್ತೆಯ ತೆಗ್ಗು-ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಿ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎನ್ನುವುದು ಸ್ಥಳೀಯರ, ರಸ್ತೆ ಸಂಚಾರಿಗಳ ಆಗ್ರಹವಾಗಿದೆ.

ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಈಗಾಗಲೇ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ದುರಸ್ತಿ ಕಾರ್ಯಕೈಕೊಂಡಿಲ್ಲ. ಮುಂದೆ ಅನಾಹುತ ಸಂಭವಿಸುವ ಮೊದಲೇ ಪುರಸಭೆಯವರು ಗುಂಡಿ ಮುಚ್ಚಿಸಬೇಕು.
-ರಾಜು ಭರಮಗೌಡರ, ನಾಗರಿಕರು, ಬೈಲಹೊಂಗಲ


ಶೀಘ್ರ ಗುಂಡಿ ಮುಚ್ಚುವ ಕಾರ್ಯ ಕೈಕೊಂಡು ನಾಗರಿಕರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
-ಶಿವಪ್ಪ ಅಂಬಿಗೇರ, ಮುಖ್ಯಾಧಿಕಾರಿಗಳು, ಪುರಸಭೆ ಬೈಲಹೊಂಗಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ