ಆ್ಯಪ್ನಗರ

ಕಿತ್ತೂರು ಉತ್ಸವ ಪೂರ್ವ ತಯಾರಿ ಆರಂಭ

ಚನ್ನಮ್ಮನ ಕಿತ್ತೂರು: ಅಕ್ಟೋಬರ್‌ 23ರಂದು ಆರಂಭಗೊಳ್ಳಲಿರುವ ಕಿತ್ತೂರು ಉತ್ಸವ ಪೂರ್ವ ತಯಾರಿ ಈಗಿನಿಂದಲೇ ಆರಂಭಗೊಂಡಿದ್ದು, ಶನಿವಾರ ಕಿತ್ತೂರು ಹಾಗೂ ...

Vijaya Karnataka 9 Sep 2018, 5:00 am
ಚನ್ನಮ್ಮನ ಕಿತ್ತೂರು: ಅಕ್ಟೋಬರ್‌ 23ರಂದು ಆರಂಭಗೊಳ್ಳಲಿರುವ ಕಿತ್ತೂರು ಉತ್ಸವ ಪೂರ್ವ ತಯಾರಿ ಈಗಿನಿಂದಲೇ ಆರಂಭಗೊಂಡಿದ್ದು, ಶನಿವಾರ ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನ ಕಂದಾಯ ಇಲಾಖೆಯ ಎಲ್ಲ ನೌಕರಸ್ಥರು ಇಲ್ಲಿನ ಕೋಟೆ ಆವರಣ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು.
Vijaya Karnataka Web pre preparation of kittur festival begins
ಕಿತ್ತೂರು ಉತ್ಸವ ಪೂರ್ವ ತಯಾರಿ ಆರಂಭ


ಕಿತ್ತೂರು ಪ್ರಾಧಿಕಾರ ಆಯುಕ್ತರು, ಬೈಲಹೊಂಗಲ ಉಪವಿಭಾಗ ಅಧಿಕಾರಿಗಳಾದ ಶಿವಾನಂದ ಭಜಂತ್ರಿ ಅವರು ಬೈಲಹೊಂಗಲ ಪುರಸಭೆ ಕಾರ್ಮಿಕರನ್ನು ಕರೆತಂದು ಕೋಟೆ ಸ್ಚಚ್ಛತಾ ಕಾರ್ಯಕ್ಕೆ ಶಾಸಕ ಮಹಾಂತೇಶ ದೊಡಗೌಡರ ಉಪಸ್ಥಿತಿಯಲ್ಲಿ ಆರಂಭಿಸುತ್ತಿರುವುದಾಗಿ ಹೇಳಿದರು. ಎಮ್‌.ಕೆ. ಹುಬ್ಬಳ್ಳಿ ಪಪಂ ಕಾರ್ಮಿಕರು, ಅಧಿಕಾರಿಗಳು, ಕಿತ್ತೂರು ಪಪಂ ಅಧಿಕಾರಿಗಳು, ಕಾರ್ಮಿಕರು, ಅಂಗನವಾಡಿ ಕಾಯಕರ್ತೆಯರು ಹಾಗೂ ಮೇಲ್ವಿಚಾರಕಿಯರು, ತಾಲೂಕಿನ ಎಲ್ಲ ಗ್ರಾಪಂ ಪಿಡಿಒ, ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಶಿಕ್ಷ ಣ ಸಂಸ್ಥೆಯ ವಿದ್ಯಾರ್ಥಿಗಳು, ಉಪನ್ಯಾಸಕರು, ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ