ಆ್ಯಪ್ನಗರ

ಪತಿ ಮನೆಗೆ ಹೋಗುವಂತೆ ಒತ್ತಡ: ಬಾಲಕಿಯ ನೆರವಿಗೆ ಧಾವಿಸಿದ ತಾಪಂ ಇಒ

ಅಡಹಳ್ಳಿ: ಸಮೀಪದ ಸುಟ್ಟಟ್ಟಿ ಗ್ರಾಮದಲ್ಲಿ ಮನೆಯವರ ಒತ್ತಾಯಕ್ಕೆ ಮಣಿದು ವಿವಾಹವಾಗಿದ್ದ ಅಪ್ರಾಪ್ತೆಯ ಮನೆಗೆ ಗುರುವಾರ ತಾಪಂ ಇಒ ಬಂಗಾರೆಪ್ಪನವರ ನೇತೃತ್ವದಲ್ಲಿ ...

Vijaya Karnataka 7 Jun 2019, 5:00 am
ಅಡಹಳ್ಳಿ: ಸಮೀಪದ ಸುಟ್ಟಟ್ಟಿ ಗ್ರಾಮದಲ್ಲಿ ಮನೆಯವರ ಒತ್ತಾಯಕ್ಕೆ ಮಣಿದು ವಿವಾಹವಾಗಿದ್ದ ಅಪ್ರಾಪ್ತೆಯ ಮನೆಗೆ ಗುರುವಾರ ತಾಪಂ ಇಒ ಬಂಗಾರೆಪ್ಪನವರ ನೇತೃತ್ವದಲ್ಲಿ ಸಿಡಿಪಿಒ ಹಾಗೂ ಐಗಳಿ ಪೊಲೀಸರು ಭೇಟಿ ನೀಡಿ ಕುಟುಂಬದವರೊಂದಿಗೆ ಚರ್ಚೆ ನಡೆಸಿದರು.
Vijaya Karnataka Web pressure to go home of husband tp eo rushed to help the girl
ಪತಿ ಮನೆಗೆ ಹೋಗುವಂತೆ ಒತ್ತಡ: ಬಾಲಕಿಯ ನೆರವಿಗೆ ಧಾವಿಸಿದ ತಾಪಂ ಇಒ


ಮನೆಯವರು ಗಂಡನ ಮನೆಗೆ ಹೋಗುವಂತೆ ಒತ್ತಡ ಹೇರುತ್ತಿದ್ದರಿಂದ ಅಪ್ರಾಪ್ತೆ ಸಹಾಯವಾಣಿ ಮೊರೆ ಹೋಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ನೆರವಿಗೆ ಧಾವಿಸಿದ ತಂಡ, ತಾಯಿಯಿಂದ ಮಾಹಿತಿ ಪಡೆದು ಗ್ರಾಮದ ಹಿರಿಯರ ಸಮ್ಮುಖ ಪಾಲಕರಿಂದ ಮುಚ್ಚಳಿಕೆ ಬರೆಸಿಕೊಂಡಿತು. ಬಾಲಕಿಗೆ ಗಂಡನ ಮನೆಗೆ ಹೋಗುವಂತೆ ಕಿರುಕುಳ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತು.

ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಎಸ್‌.ಬಿ. ಇಂಗಳೇಶ್ವರ, ಪಿಡಿಒ ಎಸ್‌.ಎಸ್‌. ತುಂಗಳ, ಐಗಳಿ ಠಾಣೆ ಸಿಬ್ಬಂದಿ ಶ್ರೀಶೈಲ ಪಾಟೀಲ, ಎನ್‌.ಪಿ. ಮಾಳಿ, ಕೆ.ಬಿ ಸನದಿ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ