ಆ್ಯಪ್ನಗರ

ಕೈದಿ ಪರಾರಿ: ಹಿಂಡಲಗಾ ಜೈಲಿನ ನಾಲ್ವರು ಸಿಬ್ಬಂದಿ ಅಮಾನತು

ಬೆಳಗಾವಿ: ಕೈದಿ ಪರಾರಿ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದಡಿ ಇಲ್ಲಿನ ಹಿಂಡಲಗಾ ಜೈಲಿನ ಕಾನ್‌ಸ್ಟೇಬಲ್‌, ಜೈಲರ್‌ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ...

Vijaya Karnataka 26 Apr 2019, 5:00 am
ಬೆಳಗಾವಿ : ಕೈದಿ ಪರಾರಿ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದಡಿ ಇಲ್ಲಿನ ಹಿಂಡಲಗಾ ಜೈಲಿನ ಕಾನ್‌ಸ್ಟೇಬಲ್‌, ಜೈಲರ್‌ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
Vijaya Karnataka Web prisoner escape four staff of hindalaga jail suspended
ಕೈದಿ ಪರಾರಿ: ಹಿಂಡಲಗಾ ಜೈಲಿನ ನಾಲ್ವರು ಸಿಬ್ಬಂದಿ ಅಮಾನತು


ಪರಾರಿಯಾಗಿರುವ ಕೈದಿ, ಕೊಳ್ಳೆಗಾಲದಲ್ಲಿ ವಾಸವಾಗಿದ್ದ ಮೂಲತಃ ತಮಿಳುನಾಡಿನ ಸೇಲಂ ನಗರದ ಮುರುಗನ್‌ ಅಂಡಿಯಪ್ಪನ್‌ (51) 2015ರಲ್ಲಿ ಚಾಮರಾಜನಗರ ಪಟ್ಟಣದಲ್ಲಿ ನಡೆದ ಐವರ ಕೊಲೆ ಪ್ರಕರಣದ ಪ್ರಮುಖ ಅಪರಾಧಿ. ಶಿಕ್ಷೆಗೆ ಗುರಿಯಾದ ನಂತರ ಚಾಮರಾಜ ನಗರದ ಜೈಲಿನಲ್ಲಿದ್ದ ಮುರುಗನ್‌ 2017ರಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಂಡಿದ್ದ. ಜೈಲಿನಿಂದ ತಪ್ಪಿಸಿಕೊಳ್ಳಲು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡ ಮುರುಗನ್‌ಗೆ ಇನ್ನೂ ಮೂವರು ಕೈದಿಗಳು ಸಹಾಯ ಮಾಡಿ ತಾವೂ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದರು. ಇವರಲ್ಲಿ ಮುರುಗನ್‌ ಜೈಲಿನ ಗೋಡೆ ಏರಿ ಪರಾರಿಯಾದರೆ, ಇನ್ನೋರ್ವ ತಪ್ಪಿಸಿಕೊಳ್ಳುವ ಭರದಲ್ಲಿ ಬಿದ್ದು ಗಾಯಗೊಂಡಿದ್ದ.

''ಈ ಕೈದಿಗಳು ಪರಾರಿಯಾಗಲು ಜೈಲಿನ ದೊಡ್ಡ ಗೋಡೆ ಏರಲು ಹಗ್ಗ ಮತ್ತು ಇತರೆ ವಸ್ತುಗಳನ್ನು ಹೊಂದಿಸಿಕೊಂಡಿದ್ದರು. ಹೀಗಾಗಿ, ಜೈಲಿನ ಸಿಬ್ಬಂದಿ ನಿರ್ಲಕ್ಷ್ಯವೂ ಇದಕ್ಕೆಲ್ಲ ಕಾರಣ ಎಂದು ವಿಚಾರಣೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ'', ಎಂದು ಕಾರಾಗೃಹದ ಮುಖ್ಯ ಅಧೀಕ್ಷ ಟಿ.ಪಿ.ಶೇಷ ತಿಳಿಸಿದ್ದಾರೆ.

ಕೈದಿ ಬಂಧನಕ್ಕೆ ಐದು ತಂಡ :
ತಪ್ಪಿಸಿಕೊಂಡಿರುವ ಕೈದಿ ಮುರುಗನ್‌ ಬಂಧನಕ್ಕೆ ಜಾಲ ಬೀಸಿರುವ ಕಾರಾಗೃಹ ಅಧಿಕಾರಿಗಳು ಐದು ತಂಡ ರಚಿಸಿ ಗೋವಾ, ಬೆಂಗಳೂರು ಸೇರಿದಂತೆ ಇತರೆ ಪಟ್ಟಣಗಳಿಗೆ ಕಳುಹಿಸಿಕೊಟ್ಟಿದ್ದಾರೆ. ''ಇತರೆ ಜಿಲ್ಲೆಗಳ ಪೊಲೀಸ್‌ ಇಲಾಖೆಯಿಂದಲೂ ಕೈದಿ ಪತ್ತೆಗೆ ಸಹಾಯ ಪಡೆಯಲಾಗಿದೆ'', ಎಂದು ಅಧೀಕ್ಷಕ ಟಿ.ಪಿ.ಶೇಷ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ