ಆ್ಯಪ್ನಗರ

ಬೈಲಹೊಂಗಲ-ಸವದತ್ತಿ-ಧಾರವಾಡ ರೈಲು ಯೋಜನೆಯ ಭರವಸೆ

ಬೈಲಹೊಂಗಲ: ಬೈಲಹೊಂಗಲ-ಸವದತ್ತಿ ನಾಡಿನ ...

Vijaya Karnataka 24 Jun 2019, 10:49 pm
ಬೈಲಹೊಂಗಲ: ಬೈಲಹೊಂಗಲ-ಸವದತ್ತಿ ನಾಡಿನ ಜನರ ಪ್ರೀತಿ, ವಿಶ್ವಾಸಗಳಿಗೆ ಪ್ರತಿಯಾಗಿ ಬೈಲಹೊಂಗಲ-ಸವದತ್ತಿ-ಧಾರವಾಡ ರೈಲು ಯೋಜನೆಗೆ ಶತಪ್ರಯತ್ನ ನಡೆಸುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಭರವಸೆ ನೀಡಿದರು.
Vijaya Karnataka Web BEL-23HTP7


ಪಟ್ಟಣದಲ್ಲಿ ಭಾನುವಾರ ಬೆಳಗಾವಿ ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ , ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರ ಜನ್ಮದಿನಾಚರಣೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಏರ್ಪಡಿಸಿದ್ದ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

''ಪ್ರಧಾನಿ ನರೇಂದ್ರ ಮೋದಿ ಅವರ ನಿಸ್ವಾರ್ಥ ಸೇವೆ, ದೇಶದ ಮತ್ತು ಜಗತ್ತಿನ ಜನಮಾನಸದಲ್ಲಿ ಅಭಿವ್ಯಕ್ತಗೊಂಡಿದ್ದರ ಫಲವಾಗಿ ಮತದಾರ ಪ್ರಭುವಿನ ಒಲವು, ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಅದ್ಭುತ ಗೆಲುವು ದೊರೆಯಿತು. ಜನ ನೀಡಿದ ಅಧಿಕಾರ ವ್ಯರ್ಥ ಆಗಲು ಬಿಡುವುದಿಲ್ಲ. ಪ್ರತಿ ಸೆಕೆಂಡನ್ನು ಜನರ ಅಭ್ಯುದಯಕ್ಕಾಗಿ ಬಳಸಿಕೊಳ್ಳುವೆ. ಸಮಸ್ತ ಮತದಾರರಿಗೆ ಕೃತಜ್ಞತೆಗಳು'', ಎಂದು ಹೇಳಿದರು.

''ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ರಾಜ್ಯದ ಸಂಸದರ ನೆರವು ಪಡೆದು ಮಹದಾಯಿ ಯೋಜನೆ, ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಯೋಜನೆಯ ಜಾರಿಗೆ ಶ್ರಮಿಸುವೆ. ಕನ್ನಡಿಗರಿಗೆ ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ವಿಶೇಷ ಪ್ರಯತ್ನ ನಡೆಸುವುದು ಆದ್ಯತೆಯಾಗಿದೆ'', ಎಂದರು. ಕಾರ್ಯಕರ್ತರು, ಪಕ್ಷ ದ ಪದಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ರೈತ ಸಮ್ಮಾನ್‌ ಯೋಜನೆ ಸೇರಿದಂತೆ, ಎಲ್ಲ ಯೋಜನೆಗಳನ್ನು ಜನತೆಗೆ ತಲುಪಿಸಲು ಶ್ರಮಿಸಬೇಕೆಂದು ಕರೆ ನೀಡಿದರು.

ಅಧ್ಯಕ್ಷ ತೆ ವಹಿಸಿದ್ದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಪಕ್ಷ ದ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ವಂದನೆ ಸಲ್ಲಿಸಿದರು. ಬೈಲಹೊಂಗಲ-ಮುರಗೋಡ-ಹಲಕಿ ಮತ್ತು ಬೈಲಹೊಂಗಲ-ಹೊಸೂರ-ಬಡ್ಲಿವರೆಗಿನ ರಸ್ತೆಗಳು ಸೂಪರ್‌ ಆಗಲಿದ್ದು ಕೇಂದ್ರ ಸರಕಾರದಿಂದ ಸಂಸದ ಸುರೇಶ ಅಂಗಡಿ ಹಣ ಮಂಜೂರ ಮಾಡಿಸಿದ್ದು ಸಂತಸ ತರಿಸಿದೆ ಎಂದರು. ರಾಜ್ಯ ಸರಕಾರ ಕೋಮಾದಲ್ಲಿದ್ದು, ಯಾವಾಗ ಬಿದ್ದು ಹೋಗುತ್ತೆ ಗೊತ್ತಿಲ್ಲ. ಸರಕಾರ ದಕ್ಷಿಣದ ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದರು. ಜನ್ಮದಿನಕ್ಕೆ ಶುಭ ಕೋರಿದ ಸಂಸದರಿಗೆ, ಶಾಸಕರಿಗೆ, ಪಕ್ಷ ದ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಿದರು.

ಇದೇ ವೇಳೆ ಡಾ.ವಿ.ಐ. ಪಾಟೀಲ ಅಭಿಮಾನಿ ಬಳಗ ಹಾಗೂ ಬಿಜೆಪಿ ಮಂಡಲ ವತಿಯಿಂದ ಕೇಂದ್ರ ಸಚಿವ ಸುರೇಶ ಅಂಗಡಿ ಅವರನ್ನು ಸತ್ಕರಿಸಲಾಯಿತು. ನೂರಾರು ಬಿಜೆಪಿ ಅಭಿಮಾನಿಗಳು ಡಾ.ವಿಶ್ವನಾಥ ಪಾಟೀಲ ಅವರನ್ನು ಸತ್ಕರಿಸಿ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಎಂಎಲ್‌ಸಿ ಹನುಮಂತ ನಿರಾಣಿ, ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ವಿಭಾಗಿಯ ಪ್ರಭಾರಿ ಈರಣ್ಣಾ ಕಡಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಗೂಳಪ್ಪಾ ಹೊಸಮನಿ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಬೆಳಗಾವಿ ನಗರ ಅಧ್ಯಕ್ಷ ರಾಜೇಂದ್ರ ಹರಕುಣಿ, ಬಸನಗೌಡ ಪಾಟೀಲ ವೇದಿಕೆಯಲ್ಲಿದ್ದರು.

ಬಿಜೆಪಿ ಮುಖಂಡರಾದ ರಾಜು ಕುಡಸೋಮಣ್ಣವರ, ರುದ್ರಪ್ಪಾ ಹೊಸಮನಿ, ಸಿ.ಆರ್‌.ಪಾಟೀಲ, ಸಿ.ಕೆ.ಮೆಕ್ಕೇದ, ಚಂದ್ರು ಚಿನಿವಾಲರ, ಶ್ರೀಶೈಲ ಯಡಳ್ಳಿ, ಮುರಗೇಶ ಗುಂಡ್ಲೂರ, ಸಂಜಯ ಗಿರೆಪ್ಪಗೌಡರ, ಪರ್ವತಗೌಡ ಪಾಟೀಲ, ಮಹ್ಮದಷಾ ನದಾಫ, ನಿಂಗಪ್ಪ ಚೌಡಣ್ಣವರ, ಮಹೇಶ ಹರಕುಣಿ, ಆನಂದ ಮೂಗಿ, ಬಾಳಗೌಡಾ ಪಾಟೀಲ, ಸುನೀಲ ಈಟಿ, ರತ್ನಾ ಗೋದಿ, ಶಾಂತಾ ಮಡ್ಡಿಕಾರ, ವಿದ್ಯಾ ರಾಮಣ್ಣವರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಶಿಕ್ಷ ಕ ಎಂ.ವಿ. ಉಪ್ಪಿನ ನಿರೂಪಿಸಿದರು.

ಕಾಂಗ್ರೆಸ್‌ ಅವ್ವ-ಮಗನ ಪಕ್ಷ , ಜೆಡಿಎಸ್‌ ಅಪ್ಪ-ಮಕ್ಕಳ ಪಕ್ಷ , ತೃಣಮೂಲ ಕಾಂಗ್ರೆಸ್‌ ಅತ್ತೆ-ಅಳಿಯನ ಪಕ್ಷ ವಾಗಿದ್ದು, ಇನ್ನು ಇವರ ಘಟಬಂಧನ ಮುರುಕು ಬಂಧನವಾಗಿದೆ.
- ಸುರೇಶ ಅಂಗಡಿ, ಕೇಂದ್ರ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ