ಬಸ್ ಚಾಲಕನ ವಿರುದ್ಧ ಪ್ರತಿಭಟನೆ
ಬೆಳಗಾವಿ: ಸಾರಿಗೆ ಸಂಸ್ಥೆಯ ಬಸ್ ಚಾಲಕ ಮತ್ತು ನಿರ್ವಾಹಕರು ...
Vijaya Karnataka 14 Dec 2019, 5:00 am
ಬೆಳಗಾವಿ: ಸಾರಿಗೆ ಸಂಸ್ಥೆಯ ಬಸ್ ಚಾಲಕ ಮತ್ತು ನಿರ್ವಾಹಕರು ಶಾಲಾ ಮಕ್ಕಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದನ್ನು ವಿರೋಧಿಸಿ ತಾಲೂಕಿನ ಬೆನಕನಹಳ್ಳಿ ಗ್ರಾಮಸ್ಥರು ಶುಕ್ರವಾರ ವಸತಿ ಬಸ್ ತಡೆದು ಪ್ರತಿಭಟಿಸಿದರು.
ಗುರುವಾರ ಶಾಲೆ ಮುಗಿಸಿಕೊಂಡು ಬೆಳಗಾವಿಯಿಂದ ಬೆನಕನಹಳ್ಳಿಗೆ ಹೊರಟಿದ್ದ ಬಾಲಕಿಯೊಬ್ಬಳು ಬಸ್ ಹತ್ತುವಾಗ ಕೆಳಗೆ ಬಿದ್ದಿರುವುದನ್ನು ಚಾಲಕ, ನಿರ್ವಾಹಕನ ಗಮನಕ್ಕೆ ಜನ ತಂದರೂ, ಇದನ್ನು ಲೆಕ್ಕಿಸದೆ ಮುಂದೆ ಹೋಗಿದ್ದಾರೆ. ಇದು ಗ್ರಾಮಸ್ಥರನ್ನು ಕೆರಳಿಸಿತ್ತು. ಇತ್ತೀಚೆಗೆ ಬಸ್ ಚಾಲಕ ಮತ್ತು ನಿರ್ವಾಹಕರ ನಿರ್ಲಕ್ಷ್ಯದಿಂದ ಆಗುತ್ತಿರುವ ಅನಾಹುತಗಳನ್ನು ಅರಿತಿದ್ದ ಇವರೆಲ್ಲಒಟ್ಟು ಸೇರಿ ರಸ್ತೆ ತಡೆ ಮಾಡಿ ಸಾರಿಗೆ ಸಂಸ್ಥೆಗೆ ಬಿಸಿ ಮುಟ್ಟಿಸಿದರು. ಕ್ರಮಕ್ಕೆ ಒತ್ತಾಯಿಸಿದರು. ಜತೆಗೆ ಗ್ರಾಮೀಣ ಕ್ಷೇತ್ರದ ಶಾಸಕರು ಬಸ್ ಅನುಕೂಲಗಳನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಗುರುವಾರ ಶಾಲೆ ಮುಗಿಸಿಕೊಂಡು ಬೆಳಗಾವಿಯಿಂದ ಬೆನಕನಹಳ್ಳಿಗೆ ಹೊರಟಿದ್ದ ಬಾಲಕಿಯೊಬ್ಬಳು ಬಸ್ ಹತ್ತುವಾಗ ಕೆಳಗೆ ಬಿದ್ದಿರುವುದನ್ನು ಚಾಲಕ, ನಿರ್ವಾಹಕನ ಗಮನಕ್ಕೆ ಜನ ತಂದರೂ, ಇದನ್ನು ಲೆಕ್ಕಿಸದೆ ಮುಂದೆ ಹೋಗಿದ್ದಾರೆ. ಇದು ಗ್ರಾಮಸ್ಥರನ್ನು ಕೆರಳಿಸಿತ್ತು. ಇತ್ತೀಚೆಗೆ ಬಸ್ ಚಾಲಕ ಮತ್ತು ನಿರ್ವಾಹಕರ ನಿರ್ಲಕ್ಷ್ಯದಿಂದ ಆಗುತ್ತಿರುವ ಅನಾಹುತಗಳನ್ನು ಅರಿತಿದ್ದ ಇವರೆಲ್ಲಒಟ್ಟು ಸೇರಿ ರಸ್ತೆ ತಡೆ ಮಾಡಿ ಸಾರಿಗೆ ಸಂಸ್ಥೆಗೆ ಬಿಸಿ ಮುಟ್ಟಿಸಿದರು. ಕ್ರಮಕ್ಕೆ ಒತ್ತಾಯಿಸಿದರು. ಜತೆಗೆ ಗ್ರಾಮೀಣ ಕ್ಷೇತ್ರದ ಶಾಸಕರು ಬಸ್ ಅನುಕೂಲಗಳನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.