ಆ್ಯಪ್ನಗರ

ಪೆಟ್ರೋಲ್‌ ದರ ಏರಿಕೆ ವಿರುದ್ಧ ಪ್ರತಿಭಟನೆ

ಚನ್ನಮ್ಮನ ಕಿತ್ತೂರು : ಕೇಂದ್ರ ಸರಕಾರ ಪೆಟ್ರೋಲ್‌ ದರ ಇಳಿಕೆ ಮಾಡಿದರೂ ರಾಜ್ಯ ಸರಕಾರ ದರ ಏರಿಸಿ ಕೇಂದ್ರ ಸರಕಾರ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ...

Vijaya Karnataka 7 Jan 2019, 5:00 am
ಚನ್ನಮ್ಮನ ಕಿತ್ತೂರು : ಕೇಂದ್ರ ಸರಕಾರ ಪೆಟ್ರೋಲ್‌ ದರ ಇಳಿಕೆ ಮಾಡಿದರೂ ರಾಜ್ಯ ಸರಕಾರ ದರ ಏರಿಸಿ ಕೇಂದ್ರ ಸರಕಾರ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಮಹಾಂತೇಶ ದೊಡಗೌಡರ ಆರೋಪಿಸಿದರು.
Vijaya Karnataka Web BEL-6KITTURPHOTO1


ಪಟ್ಟಣದಲ್ಲಿ ಭಾನುವಾರ ಪೆಟ್ರೋಲ್‌ ದರ ಏರಿಕೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಮಾತನಾಡಿದ ಅವರು, ''ರಾಜ್ಯದಲ್ಲಿ ರೈತರ ಸಾಲ ಮನ್ನಾ ಹೊರೆ ನೀಗಿಸಲು ಪೆಟ್ರೋಲ್‌ ದರ ಏರಿಕೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ತೈಲ ಬೆಲೆ ಕಡಿಮೆಯಾಗಿದ್ದರೂ ಬಸ್‌ ದರ ಏರಿಕೆ ಮಾಡಲು ಸರಕಾರ ಚಿಂತನೆ ನಡೆಸುತ್ತಿದ್ದಾರೆ. ಸಾಲವನ್ನು ಮನ್ನಾ ಮಾಡುವಲ್ಲಿ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಣ ಮೀಸಲಿರಿಸಲು ಅವಕಾಶವಿದೆ. ಅದನ್ನು ಬಿಟ್ಟು ಜನರಿಗೆ ಹೊರೆ ಮಾಡಲು ರಾಜ್ಯ ಸರಕಾರ ಹೊರಟಿರುವುದು ಖಂಡನೀಯ. ಆದ್ದರಿಂದ ಕೂಡಲೇ ಸರಕಾರ ತೈಲ ಬೆಲೆ ಏರಿಕೆಯನ್ನು ಕೈಬಿಡಬೇಕು'' ಎಂದು ಒತ್ತಾಯಿಸಿದರು.

ಬಿಜೆಪಿ ಧುರೀಣ ಜಗದೀಶ ವಸ್ತ್ರದ, ಮಂಡಳ ಅಧ್ಯಕ್ಷ ಚಿನ್ನಪ್ಪ ಮುತ್ನಾಳ, ಡಾ. ಬಸವರಾಜ ಪರವನ್ನವರ, ಸರಸ್ವತಿ ಹೈಬತ್ತಿ ಮಾತನಾಡಿ ರಾಜ್ಯ ಸರಕಾರದ ನೀತಿಯನ್ನು ಖಂಡಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಸಂದೀಪ ದೇಶಪಾಂಡೆ. ಶಿವಾನಂದ ಹನುಮಸಾಗರ, ಉಳವಪ್ಪ ಉಳ್ಳಾಗಡ್ಡಿ, ಯುವ ಮೋರ್ಚಾ ಅಧ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ