ಆ್ಯಪ್ನಗರ

ರೈತರ ಮೇಲೆ ಕಲ್ಲು ತೂರಾಟ ಖಂಡಿಸಿ ಪ್ರತಿಭಟನೆ

ಕಾಗವಾಡ: ಪ್ರಸಕ್ತ ಹಂಗಾಮಿಗೆ ಸೂಕ್ತ ದರ ನೀಡಲು ಆಗ್ರಹಿಸಿ ಮುರಗುಂಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಖಂಡಿಸಿ ಉಗಾರ ಖುರ್ದ ...

Vijaya Karnataka 20 Nov 2018, 5:00 am
ಕಾಗವಾಡ : ಪ್ರಸಕ್ತ ಹಂಗಾಮಿಗೆ ಸೂಕ್ತ ದರ ನೀಡಲು ಆಗ್ರಹಿಸಿ ಮುರಗುಂಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಖಂಡಿಸಿ ಉಗಾರ ಖುರ್ದ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web BEL-19 KAGWAD 1 NEWS PHOTO


ಉಗಾರ ಖುರ್ದ ಬಸ್‌ ನಿಲ್ದಾಣದ ಬಳಿ ರೈತರು ಒಂದುಗೂಡಿ ಟೈರ್‌ಗೆ ಬೆಂಕಿ ಹಚ್ಚಿ ಶಾಸಕ ಶ್ರೀಮಂತ ಪಾಟೀಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷದ ಹಂಗಾಮಿನ ಉಳಿದ 400ರೂ. ಹಾಗೂ ಈ ವರ್ಷ ಸರಕಾರ ಘೋಷಣೆ ಮಾಡಿರುವ ಎಫ್‌ಆರ್‌ಪಿ ಪ್ರಕಾರ ಹಣ ಕೇಳುತ್ತಿರುವಾಗ ಶಾಸಕರ ಬೆಂಬಲಿಗರು ಹಲ್ಲೆ ಮಾಡಿರುವುದು ತಪ್ಪು ಎಂದು ರೈತ ಮುಖಂಡ ಯೊಗೇಶ ಕುಂಬಾರ ಹೇಳಿದರು.

ಪ್ರತಿಭಟನೆಯಲ್ಲಿ ಉಗಾರದ ರೈತರು, ಪುರಸಭೆ ಸದಸ್ಯರಾದ ಮದನ ದೇಶಿಗೆ, ಅನಿಲ ನಾವಿಲಗೇರ, ಸುರೇಶ ವಾಘಮೋಡೆ, ವೀರು ನಾವಿ, ಉಮೇಶ ಸನದಿ, ಪ್ರಭಾಕರ ಪಾಟೀಲ, ರಾಜೇಶ ದಾನೋಳೆ, ಅವಿನಾಶ ಕುಂಬಾರ, ಶಾಂತಿನಾಥ ಕಳೆ, ಮಹಾದೇವ ಕಳೆ, ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ