ಆ್ಯಪ್ನಗರ

ಮಾಂಸ ತ್ಯಾಜ್ಯ ತುಂಬಿದ ವಾಹನ ತಡೆದು ಪ್ರತಿಭಟನೆ

ಬೆಳಗಾವಿ: ಮಾಂಸದ ತ್ಯಾಜ್ಯ ತುಂಬಿಕೊಂಡು ವಿಲೇವಾರಿ ಘಟಕದ ಕಡೆಗೆ ...

Vijaya Karnataka 5 Jan 2020, 5:00 am
ಬೆಳಗಾವಿ: ಮಾಂಸದ ತ್ಯಾಜ್ಯ ತುಂಬಿಕೊಂಡು ವಿಲೇವಾರಿ ಘಟಕದ ಕಡೆಗೆ ಹೊರಟಿದ್ದ ಪಾಲಿಕೆ ವಾಹನ ತಡೆದು ತಾಲೂಕಿನ ತುರುಮರಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
Vijaya Karnataka Web 4RAJU-2045956
ಮಾಂಸದ ತ್ಯಾಜ್ಯ ತುಂಬಿಕೊಂಡು ಹೊರಟಿದ್ದ ಪಾಲಿಕೆ ವಾಹನ ತಡೆದು ತುರುಮರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಉಪಸ್ಥಿತರಿದ್ದರು.


ಹಿಂಡಲಗಾ-ಬಾಚಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದ ಶಾಸಕಿ ಲಕ್ಷ್ಮೇ ಹೆಬ್ಬಾಳಕರ್‌ ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದ ಇವರೆಲ್ಲ, ಮಾಂಸದ ತ್ಯಾಜ್ಯ ಹೊತ್ತ ವಾಹನ ಹೋಗುವುದನ್ನು ನೋಡಿ ಪ್ರತಿಭಟನೆಗೆ ಇಳಿದರು. ಶಾಸಕರೂ ವಾಹನ ಮರಳಿ ಕಳಿಸುವ ಮೂಲಕ ಎಚ್ಚರಿಕೆ ನೀಡಿದರು.

ಈಗಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿರೋಧ ಇರುವಾಗ ಆಡಳಿತ ಇಲ್ಲಿವಿಲೇವಾರಿ ಘಟಕ ವಿಸ್ತರಣೆಗೆ ಜಮೀನು ಖರೀದಿಯ ಪ್ರಯತ್ನವನ್ನೂ ನಡೆಸಿದೆ ಎಂಬುದು ಗ್ರಾಮಸ್ಥರ ಅನುಮಾನ ಆಗಿದೆ. ಇದ್ಯಾವುದಕ್ಕೂ ನಾವು ಅವಕಾಶ ನೀಡುವುದಿಲ್ಲ. ತಕ್ಷಣ ತ್ಯಾಜ್ಯ ವಿಲೇವಾರಿ ಘಟಕವನ್ನೇ ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಧುರೀಣ ಯುವ ರಾಜ ಕದಂ, ಗ್ರಾಪಂ ಅಧ್ಯಕ್ಷ ರಾಮಾ ಖಾಂಡೇಕರ್‌, ಮಾಜಿ ಅಧ್ಯಕ್ಷ ನಾಗನಾಥ ಜಾಧವ, ಲಕ್ಷ್ಮಣ ಜಾಧವ, ನಾರಾಯಣ ಜಾಧವ, ಬಂಡು ಕುದರೇಮನಿಕರ್‌ ಹಾಗೂ ಇತರೆ ಪ್ರಮುಖರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ