ಆ್ಯಪ್ನಗರ

ದಿನೇಶ್‌ ಗುಂಡೂರಾವ್‌ ಫೋಟೋ ದಹಿಸಿ ಪ್ರತಿಭಟನೆ; ಮಹದಾಯಿ ವಿವಾದ ಬಗ್ಗೆ ದ್ವಂದ್ವ ನಿಲುವಿಗೆ ಆಕ್ರೋಶ

ಪಣಜಿ: ಕರ್ನಾಟಕದಲ್ಲಿರುವಾಗ ಮಹದಾಯಿ ನದಿ ನೀರು ಬಳಕೆ ...

Vijaya Karnataka 30 Oct 2020, 5:00 am
ಪಣಜಿ: ಕರ್ನಾಟಕದಲ್ಲಿರುವಾಗ ಮಹದಾಯಿ ನದಿ ನೀರು ಬಳಕೆ ಕುರಿತು ಸಮರ್ಥನೆ ಮಾಡಿಕೊಂಡು, ಗೋವಾಕ್ಕೆ ಬಂದಾಗ, ''ಗೋವಾಕ್ಕೆ ಮಹದಾಯಿ ನೀರು ಕೇಳುವ ಅಧಿಕಾರವಿದೆ'' ಎಂದು ಹೇಳುವ ಕಾಂಗ್ರೆಸ್‌ ಪಕ್ಷದ ಗೋವಾ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಅವರ ನಿಲುವು ಖಂಡಿಸಿ ಪ್ರೊಗ್ರೆಸ್ಸೀವ್‌ ಫ್ರಂಟ್‌ ಆಫ್‌ ಗೋವಾ ಸಂಘಟನೆ ಕಾರ್ಯಕರ್ತರು ಗುಂಡೂರಾವ್‌ ಅವರ ಫೋಟೋ ದಹಿಸಿ ಪ್ರತಿಭಟಿಸಿದರು.
Vijaya Karnataka Web 29GOA1A_53
ಪ್ರೊಗ್ರೆಸ್ಸೀವ್‌ ಫ್ರಂಟ್‌ ಆಫ್‌ ಗೋವಾ ಸಂಘಟನೆ ಕಾರ್ಯಕರ್ತರು ದಿನೇಶ್‌ ಗುಂಡೂರಾವ್‌ ಅವರ ಫೋಟೋ ದಹಿಸಿ ಪ್ರತಿಭಟಿಸಿದರು.


ಪಣಜಿಯ ಆಜಾದ್‌ ಮೈದಾನದಲ್ಲಿ ದಿನೇಶ್‌ ಗುಂಡೂರಾವ್‌ ಅವರ ಫೋಟೋ ದಹಿಸಿ ಪ್ರತಿಭಟಿಸಿದ ಕಾರ‍್ಯಕರ್ತರು, ರಾಷ್ಟ್ರೀಯ ಪಕ್ಷಗಳು ಮಹದಾಯಿ ನದಿ ನೀರು ವಿಷಯವನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಬಿಜೆಪಿ ಸರಕಾರ ಮಹದಾಯಿಯನ್ನು ಮಾರಾಟಕ್ಕಿಟ್ಟಿದೆ ಎಂದು ಆರೋಪಿಸಿದರು.

ಗೋವಾದಲ್ಲಿಕಾಂಗ್ರೆಸ್‌ ಪಕ್ಷ ತನ್ನ ಅಸ್ಥಿತ್ವ ಉಳಿಸಿಕೊಳ್ಳಬೇಕಾದರೆ ದಿನೇಶ್‌ ಗುಂಡೂರಾವ್‌ ಅವರನ್ನು ಗೋವಾ ಕಾಂಗ್ರೆಸ್‌ ಉಸ್ತುವಾರಿ ಸ್ಥಾನದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ