ಆ್ಯಪ್ನಗರ

ಶಿಬಿರಕ್ಕೆ ಬಾರದ ವೈದ್ಯರು: ವಿಶೇಷಚೇತನರ ಪ್ರತಿಭಟನೆ

ರಾಯಬಾಗ: ಪ್ರತಿ ತಿಂಗಳ ಮೂರನೇ ಗುರುವಾರ ಹಮ್ಮಿಕೊಳ್ಳುವ ಶಿಬಿರಕ್ಕೆ ಸಂಬಂಧಿಸಿದ ವೈದ್ಯರು ಸತತ ನಾಲ್ಕನೇ ಬಾರಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಸ್ಥಳೀಯ ...

Vijaya Karnataka 18 Jan 2019, 5:00 am
ರಾಯಬಾಗ : ಪ್ರತಿ ತಿಂಗಳ ಮೂರನೇ ಗುರುವಾರ ಹಮ್ಮಿಕೊಳ್ಳುವ ಶಿಬಿರಕ್ಕೆ ಸಂಬಂಧಿಸಿದ ವೈದ್ಯರು ಸತತ ನಾಲ್ಕನೇ ಬಾರಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ್ದ ವಿಶೇಷಚೇತನರು ಆಕ್ರೋಶಗೊಂಡು ಗುರುವಾರ ಪ್ರತಿಭಟನೆ ನಡೆಸಿದರು.
Vijaya Karnataka Web BEL-17RAIBAG2PHOTO


ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಮೂರನೇ ಗುರುವಾರ ವಿಶೇಷಚೇತನರಿಗಾಗಿ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಸತತ ನಾಲ್ಕು ತಿಂಗಳಿಂದ ಯಾವುದೇ ವೈದ್ಯರು ನಿಗದಿತ ದಿನದಂದು ಶಿಬಿರಕ್ಕೆ ಆಗಮಿಸುತ್ತಿಲ್ಲ. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ವಿಶೇಷಚೇತನರು ತಜ್ಞ ವೈದ್ಯರ ದಾರಿ ನೋಡಿ ಸಂಜೆವರೆಗೆ ಕಾದು ವಾಪಸ್‌ ತೆರಳುತ್ತಿದ್ದಾರೆ. ಗುರುವಾರ ಆಸ್ಪತ್ರೆಗೆ ಬಂದ ವಿಶೇಷಚೇತನರು ವೈದ್ಯರು ಬಾರದ್ದರಿಂದ ರೊಚ್ಚಿಗೆದ್ದು ಪ್ರತಿಭಟನೆಗೆ ಇಳಿದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಮೇಶ ರಂಗನ್ನವರ ಕೂಡಲೇ ಮೇಲಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಸಾಗರ ಝೆಂಡೆನ್ನವರ, ಆದಿನಾಥ ದತ್ತವಾಡ, ವೈ.ಪಿ.ಬೆಳಗಲಿ, ಪರಶುರಾಮ ಉಪ್ಪಾರ, ಇಂದುಮತಿ ಕದಮ, ವಿಷ್ಣು ಮಾಳಿ, ಮಹಾದೇವ ಉಪ್ಪಾರ, ಮೋನಪ್ಪ ಬಡಿಗೇರ, ಸಂಜಯ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ