ಆ್ಯಪ್ನಗರ

ಪ್ರಾಥಮಿಕ ಕೃಷಿ ಪತ್ತಿನ ಸಂಘದ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ

ಪಾಲಬಾವಿ: ಸಹಕಾರಿ ಸಂಘಕ್ಕೆ ಪತ್ತು ಮಂಜೂರಾದರೂ ರೈತರಿಗೆ ಪತ್ತಿನ ಹಣ ನೀಡದೆ ಕಳೆದ 4 ...

Vijaya Karnataka 17 Jul 2018, 5:00 am
ಪಾಲಬಾವಿ: ಸಹಕಾರಿ ಸಂಘಕ್ಕೆ ಪತ್ತು ಮಂಜೂರಾದರೂ ರೈತರಿಗೆ ಪತ್ತಿನ ಹಣ ನೀಡದೆ ಕಳೆದ 4 ತಿಂಗಳಿಂದ ಸಾಲ ನೀಡುವಳಲ್ಲಿ ವಿಳಂಬ ಅನುಸರಿಸುತ್ತಿರುವ ಸಂಘದ ಅಧ್ಯಕ್ಷ ರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ ಸಂಘದ ಕಚೇರಿಗೆ ಬೀಗ ಜಡಿದು ಸೋಮವಾರ ಪ್ರತಿಭಟಿಸಿದರು.
Vijaya Karnataka Web BEL-17PALABAVI2(B) PHOTO


ರಾಯಬಾಗ ತಾಲೂಕಿನ ಪಾಲಬಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಇದೆ ವರ್ಷ 2018ರ ಹೆಚ್ಚುವರಿ ಪತ್ತಿನ ಮೊತ್ತ 1.18 ಕೋಟಿ ರೂ.ಕಳೆದ ಮಾರ್ಚ್‌ 5ರಂದು ಮಂಜೂರಾಗಿತ್ತು. ಆದರೆ 4 ತಿಂಗಳು ಕಳೆದರೂ ರೈತ ಸಾಲಗಾರಿಗೆ ಪತ್ತಿನ ಹಣ ನೀಡದೆ ರೈತರಿಗೆ ದೊಡ್ಡ ಪ್ರಮಾಣ ಮೋಸ ಮಾಡಲಾಗಿದೆ ಎಂದು ರೈತ ಮುಖಂಡ ಹುಲೇಪ್ಪ ತೇಗೂರ ದೂರಿದರು.

ಸಂಘದ 935 ರೈತರಿಗೆ 1.18 ಕೋಟಿ ರೂ ಅನ್ಯಾಯವಾಗಿದೆ. ಬೆಳೆಗಾಗಿ ಮಾಡಿದ ಸಾಲದ ಸಂಕಟದಲ್ಲಿರುವ ರೈತರಿಗೆ ಅನುಕೂಲವಾಗಲೆಂದು ಸರಕಾರ ಸಾಲಮನ್ನಾ ಮಾಡುತ್ತಿದ್ದರೆ ಸಂಘದ ಪದಾಧಿಕಾರಿಗಳು ರೈತರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಚನ್ನಪ್ಪ ಬಳಗಾರ ಆರೋಪಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಈರಪ್ಪ ತೇಗೂರ, ರಮೇಶ ಉಳ್ಳಾಗಡ್ಡಿ, ಹುಲೆಪ್ಪ ತೇಗೂರ, ಸಿರಾಜ್‌ ಬಿರಾದಾರ, ತಾತಾಸಾಬಗೌಡ ಪಟೀಲ, ಫಾರೂಕ್‌ ಮಿರ್ಜಿ, ಸದಾಶಿವ ಭಂಡಾರಿ, ಗಿರೀಶ ಕ್ಯಾಬಾನಿ, ಶ್ರೀಶೈಲ ಜಾನಮಟ್ಟಿ, ಚನ್ನಪ್ಪ ಬಳಗಾರ, ದಾವಲಸಾಬ್‌ ಮೂಡಲಗಿ, ಚಿದಾನಂದ ನಿಂಗನೂರ, ಬಸಪ್ಪ ಕಾಪಸಿ, ಮಾನಿಂಗ ಜನವಾಡ, ಸರ್ದಾರ್‌ ಪಠಾಣ, ಅಪ್ಪಾಸಾಬ ಗೋಡಿ, ಸಂಗಪ್ಪ ತುಪ್ಪದ, ಸತ್ತೆಪ್ಪ ಕಾಡಶೆಟ್ಟಿ, ಶ್ರೀಶೈಲ ನಿಂಗನೂರ ಇದ್ದರು.

ಪತ್ತಿನ ಹೆಚ್ಚುವರಿ ಹಣವನ್ನು ಸಾಲಗಾರರಿಗೆ ನೀಡಲು ವಿಳಂಬವಾಗಿರುವುದಕ್ಕೆ ಸಿಬ್ಬಂದಿ ಕಾರಣವಲ್ಲ. ಅದಕ್ಕೆ ಸಂಘದ ಆಡಳಿತ ಮಂಡಳಿಯೇ ನೇರ ಹೊಣೆ.
-ಸಿದ್ದಪ್ಪ ಗುಗ್ಗರಿ, ಮುಖ್ಯ ಕಾರ್ಯನಿರ್ವಾಹಕ ಪ್ರಾ.ಕೃ.ಪತ್ತಿನ ಸಹಕಾರಿ ಸಂಘ, ಪಾಲಬಾವಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ