ಆ್ಯಪ್ನಗರ

ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

ನೇಗಿನಹಾಳ : ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂದು ಆರೋಪಿಸಿ, ಗ್ರಾಮಸ್ಥರು ಇಲ್ಲಿನ ಗ್ರಾಪಂಗೆ ಬೀಗ ...

Vijaya Karnataka 18 Jun 2019, 5:00 am
ನೇಗಿನಹಾಳ : ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂದು ಆರೋಪಿಸಿ, ಗ್ರಾಮಸ್ಥರು ಇಲ್ಲಿನ ಗ್ರಾಪಂಗೆ ಬೀಗ ಜಡಿದು ಪ್ರತಿಭಟಿಸಿದರು.
Vijaya Karnataka Web BEL-17 NGP 02


ನಂತರ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಂದು ಈ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದ ನಂತರ ಬೀಗ ತೆರೆದು ಪ್ರತಿಭಟನೆ ಹಿಂಪಡೆಯಲಾಯಿತು. ಈಗಾಗಲೇ ಇಲ್ಲಿನ ಗ್ರಾಪಂನಲ್ಲಿಯ ಅವ್ಯವಹಾರ, ಗ್ರಾಮದ ಭೂಮಿ ಅತಿಕ್ರಮಣ, ಆಡಳಿತದ ಲೋಪದೋಷಗಳ ಬಗ್ಗೆ ಸಭೆಗಳಲ್ಲಿ ಖಂಡಿಸಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರೂ ಮೇಲಾಧಿಕಾರಿಗಳಿಂದ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಪ್ರತಿಭಟನೆ ಮಾಡಿದ್ದಾಗಿ ಗ್ರಾಮಸ್ಥರು ಹೇಳಿದರು.

ಬೈಲಹೊಂಗಲ ಪಿಎಸ್‌ಐ ಎಮ್‌.ಎಸ್‌. ಹೂಗಾರ ಸ್ಥಳಕ್ಕೆ ಆಗಮಿಸಿ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸಹಕರಿಸುವುದಾಗಿ ಹೇಳಿದರು. ಬೈಲಹೊಂಗಲ ಇಎಒ ಶಮೀರ ಮುಲ್ಲಾ ಆಗಮಿಸಿ ಅವ್ಯವಹಾರ ಹಾಗೂ ಲೋಪದೋಷಗಳ ಪಟ್ಟಿ ಮಾಡಲು ಗ್ರಾಮಸ್ಥರಿಗೆ ತಿಳಿಸಿದರು. ನಂತರ ಈ ಕುರಿತು ಏಳು ದಿನಗಳ ಒಳಗಾಗಿ ವರದಿ ನೀಡಲು ಪಿಡಿಒಗೆ ಸೂಚಿಸಿದರು.

ಬಸವರಾಜ ಗಾಣಗಿ, ಕುಮಾರ ಅಂಗಡಿ, ಕಲ್ಮೇಶ ಪೂಜೇರಿ, ಧರ್ಮರಾಜ ತಪರಿ, ಮಂಜುನಾಥ ಹೊಸಮನಿ, ಜಗದೀಶ ಅಕ್ಕಪ್ಪನವರ, ಪ್ರಕಾಶ ಮರಿತಮ್ಮನವರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಪಂ ಸದಸ್ಯರಾದ ಮಡಿವಾಳಪ್ಪ ಬುಡ್ಡಪ್ಪನವರ, ದೇವೇಂದ್ರ ಕಾಮಕರ, ಕರೆಪ್ಪ ಭೂತಾಳಿ, ಸುರೇಶ ತಿಗಡಿ, ನಾಗಪ್ಪ ಕೆಸರಕೊಪ್ಪ, ಉದಯ ಖನಗಾವಿ ಹಾಗೂ ಕಾರ್ಯದರ್ಶಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ