ಆ್ಯಪ್ನಗರ

ಯಲ್ಪಾರಟ್ಟಿ ಪಿಡಿಒ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ರಾಯಬಾಗ: ತಾಲೂಕಿನ ಯಲ್ಪಾರಟ್ಟಿ ಗ್ರಾಪಂ ಪಿಡಿಒ ರವಿ ಮಠಪತಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ...

Vijaya Karnataka 26 Nov 2019, 5:00 am
ರಾಯಬಾಗ: ತಾಲೂಕಿನ ಯಲ್ಪಾರಟ್ಟಿ ಗ್ರಾಪಂ ಪಿಡಿಒ ರವಿ ಮಠಪತಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಯಲ್ಪಾರಟ್ಟಿ ಗ್ರಾಮಸ್ಥರು ರಾಯಬಾಗ ಪಟ್ಟಣದ ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
Vijaya Karnataka Web 25RAIBAG2PHOTO_53
ಯಲ್ಪಾರಟ್ಟಿ ಪಿಡಿಒ ರವಿ ಮಠಪತಿ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸೋಮವಾರ ರಾಯಬಾಗ ತಾಪಂ ಎದುರು ಗ್ರಾಮಸ್ಥರು ಧರಣಿ ನಡೆಸಿದರು.


ಪಿಡಿಒ ರವಿ ಮಠಪತಿ ಭ್ರಷ್ಟಾಚಾರ ನಡೆಸುತ್ತಿದ್ದು ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಯಲ್ಪಾರಟ್ಟಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ನ.2 ರಂದು ತಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಹಿನ್ನಲೆಯಲ್ಲಿತಾಪಂ ಮುಖ್ಯ ಬಾಗಿಲಿಗೆ ಬೀಗ ಜಡಿದು 3 ತಾಸು ಧರಣಿ ನಡೆಸಿ ಪ್ರತಿಭಟಿಸಿ ಪಿಡಿಒ ಹಾಗೂ ತಾಪಂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಗ್ರಾಮದ ಸರಕಾರಿ ಹಿರಿಯ ಕನ್ನಡ ಶಾಲೆಗೆ ಈ ಹಿಂದೆ ನಿರ್ಮಿಸಿದ್ದ ಸುಭದ್ರವಾಗಿದ್ದ ಆವರಣ ಗೋಡೆಯನ್ನು ವಿನಾಕಾರಣ ಕೆಡವಿ ಹಾಳು ಮಾಡಿ ಅದೇ ಕಲ್ಲಿನಿಂದ ಮತ್ತೆ ಅದೇ ಆವರಣ ಗೋಡೆ ನಿರ್ಮಿಸಲು ಹೊರಟಿರುವುದು ಭ್ರಷ್ಟಾಚಾರ ಮಾಡುವ ಉದ್ದೇಶದಿಂದಲೇ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ಬಾಹೀರವಾಗಿ ತನಗೆ ಭ್ರಷ್ಟಾಚಾರ ಮಾಡಲು ಅನುಕೂಲವಾಗುವ ದೃಷ್ಟಿಯಿಂದ ಒಳ್ಳೆಯದನ್ನು ಕೆಡವಿ ಹಾಳು ಮಾಡುತ್ತಿರುವ ಇಂತಹ ಭ್ರಷ್ಟ ಪಿಡಿಒ ಮೇಲೆ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ತಾಪಂ ಅಧಿಕಾರಿಗಳನ್ನು ಆಗ್ರಹಿಸಿದರು.

ತಾಪಂ ಸಾಮಾನ್ಯ ಸಭೆಯಲ್ಲಿಪಾಲ್ಗೊಂಡಿದ್ದ ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಾಶ ವಡ್ಡರ ಘಟನಾ ಸ್ಥಳಕ್ಕೆ ಬಂದು ಪಿಡಿಒ ಮೇಲೆ ವಿಚಾರಣೆ ಕೈಗೊಂಡು ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದ ಮೇಲೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಗ್ರಾಪಂ ಸದಸ್ಯರಾದ ಅನಿಲ ಒಡೆಯರ, ಪರಸಪ್ಪ ಕುಮಟಿ, ಅಶೋಕ ಗುಡೋಡಗಿ, ಪ್ರಭು ತೇರದಾಳ, ಶ್ರೀಕಾಂತ ಬೇವನೂರ, ಸುಕುಮಾರ ಅಥಣಿ, ಹಣಮಂತ ಒಡೆಯರ, ಯಲ್ಲಪ್ಪ ಒಡೆಯರ, ಮಹಾದೇವ ಅಥಣಿ, ಅಣ್ಣಪ್ಪ ಬೇವನೂರ, ಚಂದ್ರಕಾಂತ ಒಡೆಯರ, ಅಂಜನೇಯಕುಮಾರ ಒಡೆಯರ, ಮುತ್ತುರಾಜ ಹಸರೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ