ಮನೆ ದುರಸ್ತಿಗೆ ಪರಿಹಾರ ನೀಡುವಂತೆ ಪ್ರತಿಭಟನೆ
ಬೆಳಗಾವಿ: ಮಳೆಯಿಂದ ಶಿವಾಜಿ ನಗರ, ವೀರಭದ್ರ ನಗರದಲ್ಲಿ ಹಾನಿಯಾಗಿರುವ ...
Vijaya Karnataka 20 Aug 2019, 5:00 am
ಬೆಳಗಾವಿ: ಮಳೆಯಿಂದ ಶಿವಾಜಿ ನಗರ, ವೀರಭದ್ರ ನಗರದಲ್ಲಿ ಹಾನಿಯಾಗಿರುವ ಮನೆಗಳ ದುರಸ್ತಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಸೋಮವಾರ ಅಖಿಲ ಭಾರತೀಯ ಮಹಿಳಾ ಸೇವಾ ಸಂಘದ ಸದಸ್ಯೆಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈಚೆಗೆ ಸುರಿದ ಧಾರಾಕಾರ ಮಳೆ ಹಾಗೂ ಕೋಟೆ ಕೆರೆ ಹಿಂಭಾಗದ ಚರಂಡಿ ನೀರು ನುಗ್ಗಿದ್ದರಿಂದ ನೂರಾರು ಮನೆಗಳಿಗೆ ಹಾನಿಯಾಗಿದೆ. ಮನೆಗಳ ದುರಸ್ತಿ ಹಾಗೂ ಮರುನಿರ್ಮಾಣಕ್ಕೆ ತಕ್ಷಣ ಪರಿಹಾರ ವಿತರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷೆ ಸೀಮಾ ಇನಾಮದಾರ, ಬೀಬಿಅಜರಾ ಪಠಾಣ, ಮಹಬೂಬಿ ನಬುವಾಲೆ, ನಾಗವ್ವ ಗಣಾಚಾರಿ ಇದ್ದರು.
ಈಚೆಗೆ ಸುರಿದ ಧಾರಾಕಾರ ಮಳೆ ಹಾಗೂ ಕೋಟೆ ಕೆರೆ ಹಿಂಭಾಗದ ಚರಂಡಿ ನೀರು ನುಗ್ಗಿದ್ದರಿಂದ ನೂರಾರು ಮನೆಗಳಿಗೆ ಹಾನಿಯಾಗಿದೆ. ಮನೆಗಳ ದುರಸ್ತಿ ಹಾಗೂ ಮರುನಿರ್ಮಾಣಕ್ಕೆ ತಕ್ಷಣ ಪರಿಹಾರ ವಿತರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷೆ ಸೀಮಾ ಇನಾಮದಾರ, ಬೀಬಿಅಜರಾ ಪಠಾಣ, ಮಹಬೂಬಿ ನಬುವಾಲೆ, ನಾಗವ್ವ ಗಣಾಚಾರಿ ಇದ್ದರು.