ಆ್ಯಪ್ನಗರ

ಜೈನಾಪುರ ಕೆರೆ ತುಂಬಿಸಲು ಆಗ್ರಹಿಸಿ ಪ್ರತಿಭಟನೆ

ಚಿಕ್ಕೋಡಿ: ಕೆರೆಗೆ ನೀರು ತುಂಬಿಸುವ ಪೈಪ್‌ಲೈನ್‌ ಕಾರ್ಯಾರಂಭ ಮಾಡುವ ಮುಖಾಂತರ ಕೆರೆ ಭರಿಸುವಂತೆ ಒತ್ತಾಯಿಸಿ ತಾಲೂಕಿನ ಜೈನಾಪುರ ಗ್ರಾಮದ ರೈತರು ಸೋಮವಾರ ...

Vijaya Karnataka 9 Jul 2019, 5:00 am
ಚಿಕ್ಕೋಡಿ: ಕೆರೆಗೆ ನೀರು ತುಂಬಿಸುವ ಪೈಪ್‌ಲೈನ್‌ ಕಾರ್ಯಾರಂಭ ಮಾಡುವ ಮುಖಾಂತರ ಕೆರೆ ಭರಿಸುವಂತೆ ಒತ್ತಾಯಿಸಿ ತಾಲೂಕಿನ ಜೈನಾಪುರ ಗ್ರಾಮದ ರೈತರು ಸೋಮವಾರ ಕೆರೆಗೆ ಇಳಿದು ಪ್ರತಿಭಟನೆ ನಡೆಸಿದರು.
Vijaya Karnataka Web BEL-8CKD1


ಈ ಭಾಗದಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲ. ಕೆರೆಗೆ ನೀರು ತುಂಬಿಸುವ ಸಲುವಾಗಿ ಹಿರಣ್ಯಕೇಶಿ ನದಿಯಿಂದ ಪೈಪ್‌ಲೈನ್‌ ಮಾಡಿ ಸುಮಾರು ಒಂದು ವರ್ಷ ಕಳೆದಿದೆ. ಅಂದಿನಿಂದ ಇಂದಿನವರೆಗೂ ಕೆರೆಗೆ ಸರಿಯಾಗಿ ಒಂದು ವಾರ ಸಹ ಈ ಪೈಪ್‌ಲೈನ್‌ ಮುಖಾಂತರ ನೀರು ಬಂದಿಲ್ಲ. ಇದಕ್ಕೆ ಪೈಪ್‌ಲೈನ್‌ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿರುವುದೇ ಮುಖ್ಯ ಕಾರಣ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ರೈತ ರಾವಸಾಹೇಬ ಘರಬುಡೆ ಮಾತನಾಡಿ, ಕೆರೆಗೆ ಒಂದು ಹನಿ ನೀರೂ ಬರುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಅಸ್ಪಷ್ಟ ಉತ್ತರ ನೀಡುತ್ತಲೇ ಕಾಲ ಕಳೆಯುತ್ತಿದ್ದಾರೆ. ನದಿ ತುಂಬಿ ಹರಿಯುತ್ತಿರುವ ಸಂದರ್ಭದಲ್ಲೇ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಬೇಕು ಎಂದರು.

ಮುಂಬರುವ ಒಂದೆರಡು ದಿನಗಳಲ್ಲಿ ಕೆಟ್ಟು ಹೋಗಿರುವ ಪೈಪ್‌ಲೈನ್‌ ಸರಿಪಡಿಸಿ ಜೈನಾಪೂರ ಕೆರೆಗೆ ನೀರು ತುಂಬಿಸುವ ಕಾರ್ಯ ಆರಂಭಿಸದಿದ್ದರೇ ಚಿಕ್ಕೋಡಿ-ಬೆಳಗಾವಿ ರಸ್ತೆ ಬಂದ್‌ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಶೋಕ ಘರಬುಡೆ, ಸಂಜಯ ಕೆಳಗಿನಮನಿ, ಕೃಷ್ಣಾ ದುಂಡಗೆ, ಅಶೋಕ ನಿಂಗನೂರೆ, ಶಿವಗೌಡ ಕೆಳಗಿನಮನಿ, ಮಲ್ಲಪ್ಪ ಮಗದುಮ್ಮ, ಬಾಬು ನಿಪ್ಪಾಣಿ, ಕೃಷ್ಣಾ ಜೋಗುಳೆ, ಬಾಳಪ್ಪಾ ಪಾಟೀಲ, ಪರಗೌಡ ಕೆಳಗಿನಮನಿ, ಸದಾಶಿವ ಪಾಟೀಲ ಮುಂತಾದ ರೈತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ