ಆ್ಯಪ್ನಗರ

ಸಕಾಲಕ್ಕೆ ಪಿಂಚಣಿ ಜಮಾ ಮಾಡಲು ಆಗ್ರಹಿಸಿ ಪ್ರತಿಭಟನೆ

ಬೋರಗಾಂವ: ಕಳೆದ ಮೂರು ತಿಂಗಳಿಂದ ಸರಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ವಿಕಲಚೇತನ, ವೃದ್ಧಾಪ್ಯವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷೆ ...

Vijaya Karnataka 22 Jan 2019, 5:00 am
ಬೋರಗಾಂವ : ಕಳೆದ ಮೂರು ತಿಂಗಳಿಂದ ಸರಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ವಿಕಲಚೇತನ, ವೃದ್ಧಾಪ್ಯವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷೆ ಸೇರಿದಂತೆ ಹಿರಿಯ ನಾಗರಿಕರಿಗೆ ಸಿಗಬೇಕಾದ ಮಾಸಿಕ ಪಿಂಚಣಿ ಸಕಾಲಕ್ಕೆ ಜಮಾ ಮಾಡಲು ಆಗ್ರಹಿಸಿ ಪಿಂಚಣಿದರರು ಸದಲಗಾ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಉಪತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-21ICH2


ಬೆಳಗ್ಗೆ ಗ್ರಾಮದ ಮುಖ್ಯರಸ್ತೆಯಲ್ಲಿರುವ ಗಾಂಧಿವೃತ್ತದ ಬಳಿ ಕೂಡಿದ ಪಿಂಚಣಿದಾರರು ಗಾಂಧಿ ಪ್ರತಿಮೆಗೆ ಹೂಮಾಲೆ ಹಾಕಿ ಅಲ್ಲಿಂದ ಗ್ರಾಮದ ಮಾರುಕಟ್ಟೆಯ ಮುಖಾಂತರ ಘೋಷಣೆ ಕೂಗುತ್ತ ಮೆರವಣಿಗೆಯ ಮುಖಾಂತರ ಉಪತಹಶೀಲ್ದಾರರ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಒಂದು ತಾಸಿಗೂ ಹೆಚ್ಚು ಕಾಲ ಧರಣಿ ನಡೆಸಿದರು.

ಈವರೆಗೂ ಪಿಂಚಣಿಯನ್ನು ಖಾತೆಗೆ ಜಮಾ ಮಾಡಿಲ್ಲ. ಪೆನ್ಶನ್‌ ವಿತರಣೆಯಲ್ಲಿ ಕೆಲವರಿಗೆ 600ರೂ. ಪ್ರತಿ ತಿಂಗಳು ಮತ್ತೆ ಕೆಲವರಿಗೆ ಒಂದು ಸಾವಿರ ರೂ. ಪಿಂಚಣಿ ಬರುತ್ತಿದೆ. ಇಂಥ ತಾರತಮ್ಯ ದೂರವಾಗಿಸಬೇಕು, ಹಾಗೂ ಸಕಾಲಕ್ಕೆ ಪಿಂಚಣಿ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ರಾಜು ಗುಂಡಕಲ್ಲೆ, ಚೇತನ ಪಾಟೀಲ, ಲಕ್ಷ್ಮೀಕಾಂತ ಹಾಲಪ್ಪನವರ, ಸುರೇಶ ಉದಗಾಂವೆ, ಭರತ ಬೋರಗಾಂವೆ, ಪುಟ್ಟು ಶಿಂಗೆ, ಪ್ರಶಾಂತ ಕರಂಗಲೆ, ಧರೆಪ್ಪ ಹವಾಲದಾರ ಸೇರಿದಂತೆ 200ಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ