ಆ್ಯಪ್ನಗರ

ಅವ್ಯವಹಾರ ಆರೋಪ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಬೋರಗಾಂವ: ಸಮೀಪದ ಬೇಡಕಿಹಾಳ ಗ್ರಾಮ ಪಂಚಾಯಿತಿಯಲ್ಲಿಯ 2017-18ರ ...

Vijaya Karnataka 20 Sep 2019, 5:00 am
ಬೋರಗಾಂವ: ಸಮೀಪದ ಬೇಡಕಿಹಾಳ ಗ್ರಾಮ ಪಂಚಾಯಿತಿಯಲ್ಲಿಯ 2017-18ರ ವಸತಿ ಯೋಜನೆ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಯಲ್ಲಿಅವ್ಯವಹಾರ ನಡೆದಿದ್ದು ಈ ಕುರಿತು ತನಿಖೆಯಾಗಬೇಕೆಂದು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
Vijaya Karnataka Web 19ICH5_53


ಸಂಘಟನೆಯ ಜಿಲ್ಲಾಸಂಘಟಕ ವಿಕ್ರಮ ಶಿಂಗಾಡೆ, ಗ್ರಾಮದ ದಲಿತ ಮುಖಂಡ ಜೀವನ ಯಾದವ ಹಾಗೂ ಸಂಪತ್‌ ಬೋರಗಲ್‌ ನೇತೃತ್ವದಲ್ಲಿದಲಿತ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ನಿಪ್ಪಾಣಿ ತಹಸೀಲ್ದಾರ್‌ ಪ್ರಕಾಶ ಗಾಯಕವಾಡ ಅವರಿಗೆ ಮನವಿ ಸಲ್ಲಿಸಿದರು.

ನಾನಾ ವಸತಿ ಯೋಜನೆಗಳಡಿ ನಿರ್ಮಾಣವಾಗಿರುವ 42 ಮನೆಗಳ ಮಾಹಿತಿಯನ್ನು ಗ್ರಾಪಂನವರು ನೀಡಿದ್ದು ಇನ್ನುಳಿದ 36 ಮನೆಗಳ ಮಾಹಿತಿ ನೀಡಿಲ್ಲ. ಮಾಹಿತಿ ನೀಡದ ಮನೆಗಳ ಕುರಿತು ಪರಿಶೀಲಿಸಲಾಗಿ ಇದರಲ್ಲಿಸರಕಾರಿ ನಿಯಮ ಉಲ್ಲಂಘಿಘಿಸಿ ಅವ್ಯವಹಾರ ನಡೆಸಿರುವುದು ಸ್ಪಷ್ಟವಾಗುತ್ತಿದೆ. ಅಲ್ಲದೆ ಶೌಚಾಲಯ ಫಲಾನುಭವಿಗಳ ಯಾದಿಯಲ್ಲಿಹೆಸರು ಬೇರೆ ಭಾವಚಿತ್ರ ಬೇರೆಯವರದ್ದಾಗಿದೆ.

ಈ ಕುರಿತು ಏಳು ದಿನಗಳೊಳಗೆ ತನಿಖೆ ನಡೆಸಿ ನಿಯಮ ಉಲ್ಲಂಘನೆ ಕಾಯ್ದೆಯಡಿ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿಆಗ್ರಹಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ