ಆ್ಯಪ್ನಗರ

ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ: ಎಪಿಎಂಸಿ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ...

Vijaya Karnataka 6 Nov 2019, 5:00 am
ಬೆಳಗಾವಿ: ಎಪಿಎಂಸಿ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಹಿಂಡಲಗಾ, ಕಂಗ್ರಾಳಿ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಮಂಗಳವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web 5 LBS 5_53
ಎಪಿಎಂಸಿ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಹಿಂಡಲಗಾ, ಕಂಗ್ರಾಳಿ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.


ಹಿಂಡಲಗಾ ಕ್ರಾಸ್‌ನಿಂದ ತುರಮರಿ-ಬಾಚಿ ಮುಖ್ಯ ರಸ್ತೆ, ಎಪಿಎಂಸಿಯಿಂದ ಹಂದಿಗನೂರ ಕ್ರಾಸ್‌ವರೆಗೆ, ಹಿಂಡಲಗಾ ಕ್ರಾಸ್‌ನಿಂದ ಅಂಬೇವಾಡಿ, ಹಿಂಡಲಗಾ ಕ್ರಾಸ್‌ನಿಂದ ಮಣ್ಣೂರ ಮತ್ತು ವೆಂಗುರ್ಲಾ ರಸ್ತೆಯಿಂದ ಉಚಗಾವಿ ಗ್ರಾಮಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದರಿಂದ ಪ್ರತಿದಿನ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕಿಡಾಗುತ್ತಿದ್ದಾರೆ ಎಂದು ಮನವಿಯಲ್ಲಿತಿಳಿಸಲಾಗಿದೆ.

ಈ ವರ್ಷ ಸುರಿದ ಮಹಾಮಳೆಯಿಂದ ರಸ್ತೆಗಳು ಮತ್ತಷ್ಟು ಹಾಳಾಗಿವೆ. ಸಂಚಾರ ಮಾಡದ ರೀತಿಯಲ್ಲಿರಸ್ತೆಗಳು ಹದಗೆಟ್ಟಿವೆ. ತುರಮರಿ ರಸ್ತೆಯಲ್ಲಿಕಳೆದೆರಡು ದಿನಗಳ ಹಿಂದೆ ಬೈಕ್‌ ಸವಾರ ಅಪಘಾತದಲ್ಲಿಮೃತಪಟ್ಟಿದ್ದಾನೆ. ಅನೇಕ ಜನ ಗಾಯಗೊಂಡಿದ್ದಾರೆ. ಕಂಗ್ರಾಳಿ ರಸ್ತೆಯಲ್ಲಿಯೂ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ಸಂಚಾರ ದಟ್ಟಣೆಯೂ ಹೆಚ್ಚುತ್ತಿದೆ. ಈ ಸಂಬಂಧ ಹಲವು ಬಾರಿ ಮನವಿ ಮಾಡಿಕೊಂಡರು ರಸ್ತೆ ಸುಧಾರಣೆಗೆ ಮುಂದಾಗುತ್ತಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಸದಸ್ಯೆ ಸರಸ್ವತಿ ಪಾಟೀಲ, ಮೋಹನ ಹೊನಗೇಕರ್‌, ರಮೇಶ ಪಾಟೀಲ, ಲಕ್ಷ್ಮಣ ಉಪಾಧ್ಯೆ, ಆರ್‌.ಐ. ಪಾಟೀಲ, ಈಶ್ವರ ಗುಡಸ, ಸಚಿನ್‌ ಬಾಳೆಕುಂದ್ರಿ, ಶ್ರೀಕಾಂತ ಕಬಾಡಿ, ಚೇತಕ ಕಾಂಬಳೆ ಮೊದಲಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ