ಆ್ಯಪ್ನಗರ

ಏಕವೀರಿ ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ

ಸದಲಗಾ ಪಟ್ಟಣದ ಏಕವೀರಿ ಕೆರೆ ಒತ್ತುವರಿ ತೆರವುಗೊಳಿಸಲು ಆಗ್ರಹಿಸಿ ಏಕವೀರಿ ಫೌಂಡೇಶನ್‌ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಶುಕ್ರವಾರ ಏಕವೀರಿ ...

Vijaya Karnataka 23 Jun 2019, 5:00 am
ಬೋರಗಾಂವ: ಸದಲಗಾ ಪಟ್ಟಣದ ಏಕವೀರಿ ಕೆರೆ ಒತ್ತುವರಿ ತೆರವುಗೊಳಿಸಲು ಆಗ್ರಹಿಸಿ ಏಕವೀರಿ ಫೌಂಡೇಶನ್‌ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಶುಕ್ರವಾರ ಏಕವೀರಿ ದೇವಸ್ಥಾನದಿಂದ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಂಡರು. ಅಲ್ಲಿಂದ ಪುರಸಭೆಗೆ ತೆರಳಿದ ಪ್ರತಿಭಟನಾಕಾರರು ಕಚೇರಿ ಮುತ್ತಿಗೆ ಹಾಕಿ ಸುಮಾರು ಎರಡು ಗಂಟೆಗಳ ಕಾಲ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web BEL-22ICH2


ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ಸಂತೋಷ ಬಿರಾಜದಾರ ಪ್ರತಿಭಟನಾಕಾರರ ಮೊರೆ ಆಲಿಸಿದರು.

''ಚಿಕ್ಕೋಡಿ ಭೂದಾಖಲೆಗಳ ಸಹಾಯಕ ನಿರ್ದೇಶಕರೊಂದಿಗೆ ಜಂಟಿಯಾಗಿ ಸ್ಥಾನಿಕ ಪರಿಶೀಲನೆ ನಡೆಸಿ ಎ.ಸಿ ಅವರ ನಿರ್ದೇಶನದಂತೆ ಜು.22ರೊಳಗೆ ಸರ್ವೇ ಮಾಡಿ ವರದಿ ನೀಡಲಾಗುವುದು'' ಎಂದು ಪ್ರಭಾರಿ ಮುಖ್ಯಾಧಿಕಾರಿ ಬಿ.ಎಸ್‌. ಗುರವ ಹಾಗೂ ತಹಸೀಲ್ದಾರ್‌ ಸಂತೋಷ ಬಿರಾಜದಾರ ಅವರ ಲಿಖಿತ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಅಧಿಕಾರಿಗಳು ಭರವಸೆ ನೀಡಿದಂತೆ ನಡೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ಹೋರಾಟಗಾರರು ಎಚ್ಚರಿಸಿದರು.

ಈ ವೇಳೆ ಫೌಂಡೇಶನ್‌ ಅಧ್ಯಕ್ಷ ರಾಜಕುಮಾರ ಡಾಂಗೆ, ಪುರಸಭೆ ಸದಸ್ಯರಾದ ಅಭಿಜೀತ ಪಾಟೀಲ, ಚಾಮರಾಜ ಒಡೆಯರ, ಬಸ್ಸು ಹಣಬರ, ಭೀಮು ಮಾಳಗೆ, ಸುಹಾಸ ವಾಳಕೆ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ