ಆ್ಯಪ್ನಗರ

ಸಮಯಕ್ಕೆ ಬಾರದ ವೈದ್ಯರ ವಿರುದ್ಧ ಕಾದು ಬೇಸತ್ತ ರೋಗಿಗಳಿಂದ ಪ್ರತಿಭಟನೆ

ರಾಯಬಾಗ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಬಾರದ ವೈದ್ಯರ ಮೇಲೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಸ್ಪತ್ರೆಗೆ ...

Vijaya Karnataka 10 Jun 2018, 5:00 am
ರಾಯಬಾಗ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಬಾರದ ವೈದ್ಯರ ಮೇಲೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಸ್ಪತ್ರೆಗೆ ಆಗಮಿಸಿದ್ದ ರೋಗಿಗಳು ಪ್ರತಿಭಟನೆಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web BEL-9RAIBAG4PHOTO


ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನಾನಾ ಬಗೆಯ ಚಿಕಿತ್ಸೆಗೆಂದು ತಾಲೂಕಿನ ಹಲವು ಹಳ್ಳಿಗಳಿಂದ ನೂರಾರು ರೋಗಿಗಳು ಪ್ರತಿದಿನ ಬರುತ್ತಾರೆ. ಚಿಕಿತ್ಸೆಗಾಗಿ ಕಾರ್ಡ್‌ ಪಡೆದು ಸರತಿ ಸಾಲಿನಲ್ಲಿ ಕಾದು ಕಾದು ಸುಸ್ತಾದರೂ ವೈದ್ಯರು ಸರಿಯಾದ ಸಮಯಕ್ಕೆ ಬರುವುದೇ ಇಲ್ಲ. ಬೆಳಗ್ಗೆ 10 ಗಂಟೆಗೆ ಬರಬೇಕಾದ ವೈದ್ಯರು ಹನ್ನೆರಡು ಗಂಟೆಯಾದರೂ ಆಸ್ಪತ್ರೆಯ ಕಡೆ ಸುಳಿಯುವುದಿಲ್ಲ. ತಡ ಮಾಡಿ ಬಂದರೂ ನಾಲ್ಕೈದು ರೋಗಿಗಳನ್ನು ನೋಡುತ್ತಿದ್ದಂತೆ ಟೀ, ಕಾಫಿ ಕುಡಿಯಲೆಂದು ಹೊರಗೆ ಹೋದರೆ ರೋಗಿಗಳಿಗೆ ಮತ್ತೆ ಕಾಯುವ ಪರಿಪಾಠವಾಗಿ ಹೋಗಿದೆ ಎಂದು ಜನ ಆಕ್ರೋಶಗೊಂಡರು.

ಇಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ. ರೋಗಿಗಳನ್ನು ಪರೀಕ್ಷೆ ಮಾಡುವಾಗಲೂ ಸದಾ ಮೊಬೈಲ್‌ನಲ್ಲಿಯೇ ಮುಳುಗಿ ಹೋಗಿರುತ್ತಾರೆ. ಇಂತಹ ವೈದ್ಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ವೈದ್ಯರು ಸಾರ್ವಜನಿಕರಿಂದ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಪಟ್ಟಣದ ನಿವಾಸಿ ಸೀತಾರಾಮ ಭಿರಡೆ ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ