ಆ್ಯಪ್ನಗರ

ಪೌರತ್ವ ಕಾಯ್ದೆ ವಿರೋಧಿಸಿ ಕುಡಚಿ ಪಟ್ಟಣದಲ್ಲಿಪ್ರತಿಭಟನೆ

ಕುಡಚಿ : ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆ ವಿರುದ್ಧ ಮುಸ್ಲಿಂ ...

Vijaya Karnataka 12 Jan 2020, 5:00 am
ಕುಡಚಿ : ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆ ವಿರುದ್ಧ ಮುಸ್ಲಿಂ ಹಾಗೂ ದಲಿತ ಸಂಘಟನೆಗಳಿಂದ ಪಟ್ಟಣದಲ್ಲಿಶನಿವಾರ ಬೃಹತ್‌ ಪ್ರತಿಭಟನೆ ವ್ಯಕ್ತವಾಯಿತು.
Vijaya Karnataka Web 11 KUDACHI 2073644
ಪೌರತ್ವ ಕಾಯ್ದೆ ವಿರೋಧಿಸಿ ವಿರುದ್ಧ ಕುಡಚಿ ಪಟ್ಟಣದಲ್ಲಿಮುಸ್ಲಿಂ ಹಾಗೂ ದಲಿತ ಸಂಘಟನೆಗಳಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.


ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗ್ರಹ ಸಚಿವ ಅಮಿತ್‌ ಶಾ ಸೇರಿ ಜಾತಿ, ಧರ್ಮದ ಹೆಸರಿನಲ್ಲಿಕಾನೂನು ತರುವ ಮೂಲಕ ಭಾರತ ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ನೂತನ ಕಾನೂನು ಜಾರಿ ದೇಶಕ್ಕೆ ಮಾರಕವಾಗಲಿದ್ದು ಕೂಡಲೆ ಅದನ್ನು ಕೈಬಿಡಬೇಕೆಂದು ಆಗ್ರಹಿಸಿ ತಹಸೀಲ್ದಾರ್‌ ಚಂದ್ರಕಾಂತ ಭಜಂತ್ರಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮೌಲಾನಾ ಅಲ್ತಾಫ್‌ ಪಟಾಯಿತ್‌, ಮೌಲಾನಾ ನಿಜಾಮುದ್ದೀನ್‌ ಸಂದರವಾಲೆ, ಮೌಲಾನಾ ಆಯಾಜ್‌ ಹಯಾತ್‌ಖಾನ್‌, ಮೌಲಾನಾ ಸಲೀಂ ಪಾಳೆಗಾರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿಪ್ರತಿಭಟನಾಕಾರರು ಭಾಗವಹಿಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ