ಬೆಳಗಾವಿ: ನಮ್ಮ ಸಂವಿಧಾನದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ, ಆದರೆ ಪ್ರತಿಭಟನೆ ನೆಪದಲ್ಲಿ ಕಲ್ಲು, ಚಪ್ಪಲಿಗಳನ್ನು ಎಸೆಯೋದು ಖಂಡನಾರ್ಹ ಎಂದು ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವಿಷಾದ ವ್ಯಕ್ತಪಡಿಸಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನಲೆ ಭಾನುವಾರ ಸಾಯಂಕಾಲ ನಗರದ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಾರಥ್ಯದಲ್ಲಿ ಬೆಳಗಾವಿಯ ಸ್ಥಳೀಯ ಕೈ ಮುಖಂಡರ ಜತೆ ಸಭೆ ನಡೆಸಲಾಯಿತು. ಸಭೆಯ ಬಳಿಕ ಮಾತನಾಡಿದ ಅವರು ಇಂದಿನ ಘಟನೆ ನಿಜಕ್ಕೂ ಸರಿಯಲ್ಲ, ಪ್ರತಿಭಟನೆ ಮಾಡಬೇಕು ಆದರೆ ಚಪ್ಪಲಿ ಕಲ್ಲು ತೂರಾಟ ಸರಿಯಲ್ಲ ಎಂದರು. ಇದೆ ವೇಳೆ ಸಭೆಯಲ್ಲಿ ಚರ್ಚೆ ಮಾಡಿದ ವಿಷಯ ಕುರಿತು ಮಾತನಾಡುತ್ತಾ ಲೋಕಸಭಾ ಉಪಚುನಾವಣೆಯಲ್ಲಿ ಕೇಸರಿ ಪಕ್ಷದ ಯಾವ ಯಾವ ವೈಫಲ್ಯಗಳನ್ನು ಜನರ ಮುಂದೆ ಇಡಬೇಕು, ಬೆಲೆ ಏರಿಕೆನೇ ನಮ್ಮ ಪ್ರಚಾರದ ವಸ್ತು ಮತ್ತು ಅಜೆಂಡಾ ಎಂದು ತಿಳಿಸಿದರು.
ಇಂದು ಸಾಂಕೇತಿಕವಾಗಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ನಾಳೆ ಸಿಪಿಎಲ್ ನಾಯಕರು ಸೇರಿದಂತೆ ಮುಂಬೈ ಕರ್ನಾಟಕ ೬೦ ಕ್ಕೂ ಹೆಚ್ಚು ನಾಯಕರ ಚುನಾವಣಾ ಪ್ರಚಾರದ ನೇಮಕ ಮಾಡಲಾಗುತ್ತದೆ. ಮತ್ತು ನಾಳೆ ಸಿದ್ದರಾಮಯ್ಯ ಅವರು ಬಂದ ಮೇಲೆ ನಾಮಪತ್ರ ಸಲ್ಲಿಸುತ್ತೇನೆ. ಅವರ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ಮಾಡಿ ಚುನಾವಣಾ ರಣತಂತ್ರದ ರೂಪರೇಷೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಚುನಾವಣಾ ವೇಳೆ ಕೋವಿಡ್ ನಿಯಮದಡಿ ಚುನಾವಣಾ ಪ್ರಚಾರದ ಸಮಾವೇಶ ನಡೆಯುತ್ತೆವೆ ಎಂದು ಜಾರಕಿಹೊಳಿ ತಿಳಿಸಿದರು. ಸಭೆಯಲ್ಲಿ ಬೆಳಗಾವಿ ಲೋಕಸಭಾ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಏಂಟು ವಿಧಾನಸಭೆ ಕ್ಷೇತ್ರಗಳು ಬರಲಿದ್ದು, ಅದರಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ, ಉಳಿದ ಶಾಸಕರಿಗೆ ಮತ್ತು ಮಾಜಿ ಮಂತ್ರಿಗಳಿಗೆ ಜವಾಬ್ದಾರಿ ನೀಡುವ ಕುರಿತು ಸಭೆಯಲ್ಲಿ ನಿರ್ಣಯ ಮಾರಲಾಯಿತು.
ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನಲೆ ಭಾನುವಾರ ಸಾಯಂಕಾಲ ನಗರದ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಾರಥ್ಯದಲ್ಲಿ ಬೆಳಗಾವಿಯ ಸ್ಥಳೀಯ ಕೈ ಮುಖಂಡರ ಜತೆ ಸಭೆ ನಡೆಸಲಾಯಿತು. ಸಭೆಯ ಬಳಿಕ ಮಾತನಾಡಿದ ಅವರು ಇಂದಿನ ಘಟನೆ ನಿಜಕ್ಕೂ ಸರಿಯಲ್ಲ, ಪ್ರತಿಭಟನೆ ಮಾಡಬೇಕು ಆದರೆ ಚಪ್ಪಲಿ ಕಲ್ಲು ತೂರಾಟ ಸರಿಯಲ್ಲ ಎಂದರು. ಇದೆ ವೇಳೆ ಸಭೆಯಲ್ಲಿ ಚರ್ಚೆ ಮಾಡಿದ ವಿಷಯ ಕುರಿತು ಮಾತನಾಡುತ್ತಾ ಲೋಕಸಭಾ ಉಪಚುನಾವಣೆಯಲ್ಲಿ ಕೇಸರಿ ಪಕ್ಷದ ಯಾವ ಯಾವ ವೈಫಲ್ಯಗಳನ್ನು ಜನರ ಮುಂದೆ ಇಡಬೇಕು, ಬೆಲೆ ಏರಿಕೆನೇ ನಮ್ಮ ಪ್ರಚಾರದ ವಸ್ತು ಮತ್ತು ಅಜೆಂಡಾ ಎಂದು ತಿಳಿಸಿದರು.
ಇಂದು ಸಾಂಕೇತಿಕವಾಗಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ನಾಳೆ ಸಿಪಿಎಲ್ ನಾಯಕರು ಸೇರಿದಂತೆ ಮುಂಬೈ ಕರ್ನಾಟಕ ೬೦ ಕ್ಕೂ ಹೆಚ್ಚು ನಾಯಕರ ಚುನಾವಣಾ ಪ್ರಚಾರದ ನೇಮಕ ಮಾಡಲಾಗುತ್ತದೆ. ಮತ್ತು ನಾಳೆ ಸಿದ್ದರಾಮಯ್ಯ ಅವರು ಬಂದ ಮೇಲೆ ನಾಮಪತ್ರ ಸಲ್ಲಿಸುತ್ತೇನೆ. ಅವರ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ಮಾಡಿ ಚುನಾವಣಾ ರಣತಂತ್ರದ ರೂಪರೇಷೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಚುನಾವಣಾ ವೇಳೆ ಕೋವಿಡ್ ನಿಯಮದಡಿ ಚುನಾವಣಾ ಪ್ರಚಾರದ ಸಮಾವೇಶ ನಡೆಯುತ್ತೆವೆ ಎಂದು ಜಾರಕಿಹೊಳಿ ತಿಳಿಸಿದರು. ಸಭೆಯಲ್ಲಿ ಬೆಳಗಾವಿ ಲೋಕಸಭಾ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಏಂಟು ವಿಧಾನಸಭೆ ಕ್ಷೇತ್ರಗಳು ಬರಲಿದ್ದು, ಅದರಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ, ಉಳಿದ ಶಾಸಕರಿಗೆ ಮತ್ತು ಮಾಜಿ ಮಂತ್ರಿಗಳಿಗೆ ಜವಾಬ್ದಾರಿ ನೀಡುವ ಕುರಿತು ಸಭೆಯಲ್ಲಿ ನಿರ್ಣಯ ಮಾರಲಾಯಿತು.