ಆ್ಯಪ್ನಗರ

ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ನೇಕಾರರ ಪ್ರತಿಭಟನೆ

ಬೆಳಗಾವಿ: ಭಾರಿ ಮಳೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ...

Vijaya Karnataka 19 Nov 2019, 5:00 am
ಬೆಳಗಾವಿ: ಭಾರಿ ಮಳೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಸೋಮವಾರ ಜಿಲ್ಲಾನೇಕಾರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿನಗರದ ಚನ್ನಮ್ಮ ವೃತ್ತದಲ್ಲಿರಸ್ತೆತಡೆ ನಡೆಸಿ ಪ್ರತಿಭಟಿಸಲಾಯಿತು. ನಂತರ ನೇಕಾರರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web 18 LBS 2_53
ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ನೇಕಾರರು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು.


ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರವಾಹದಲ್ಲಿಹಾನಿಯಾದ ಪ್ರತಿ ಮಗ್ಗಕ್ಕೆ 25 ಸಾವಿರ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದರು. ಆದರೆ, ಕಂದಾಯ ಇಲಾಖೆ ಪ್ರತಿ ನೇಕಾರರ ಕುಟುಂಬಕ್ಕೆ 25 ಸಾವಿರ ರೂ. ಪರಿಹಾರ ನೀಡುತ್ತಿದೆ. ಹೀಗಾಗಿ ಪ್ರವಾಹದಲ್ಲಿಸಾಕಷ್ಟು ನಷ್ಟದಲ್ಲಿರುವ ನೇಕಾರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮುಖ್ಯಮಂತ್ರಿ ಆದೇಶದಂತೆ ಪ್ರತಿ ಮಗ್ಗಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರ 100 ಕೋಟಿ ರೂ. ನೇಕಾರರ ಸಾಲಮನ್ನಾ ಮಾಡಿದ್ದು, ಇದರಿಂದ ನೇಕಾರರಿಗೆ ಸಾಕಷ್ಟು ಅನುಕೂಲವಾಗಿದೆ. ಆದರೆ, ಸಾಲ ಹಾಗೂ ಬಡ್ಡಿ ಯೋಜನೆಯ ಅವಧಿ 2019 ಮಾರ್ಚ್ ಅಂತ್ಯದವರೆಗೆ ಸರಕಾರ ನಿಗದಿಪಡಿಸಿದ್ದು, ಇದನ್ನು ಪರಿಷ್ಕರಿಸಿ 2019ರ ಜೂನ್‌ ಅಂತ್ಯದವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಹಂಪಿಯ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ, ಹುಬ್ಬಳ್ಳಿಯ ನೀಲಕಂಠಮಠದ ಶಿವಶಂಕರ ಶಿವಚಾರ್ಯ ಸ್ವಾಮೀಜಿ, ರವೀಂದ್ರ ಕಲಬುರ್ಗಿ, ಜಿ. ರಮೇಶ, ಶಂಕರ ಬುಡಚಿ, ಗಜಾನನ ಗುಂಜೇರಿ, ಅಶೋಕ ಚಂದರಗಿ, ಶಿವಲಿಂಗ ಟರ್ಕಿ, ರಾಮಚಂದ್ರ ಯಾದವಾಡ, ರತ್ನವ್ವ ಧಾರವಾಡಕರ ಮೊದಲಾದವರು ಇದ್ದರು.

ನಿಗಮಗಳಿಗೆ ಅನುದಾನ ನೀಡಿ:
ನೇಕಾರರ ಅಭಿವೃದ್ಧಿಗಾಗಿ ಇರುವ ಕೆಎಚ್‌ಡಿಸಿ, ಕೆಎಸ್‌ಟಿಐಡಿಸಿ ಹಾಗೂ ಕಾವೇರಿ ಹ್ಯಾಂಡ್‌ಲೂಮ್‌ ನಿಗಮಗಳು ಅನುದಾನವಿಲ್ಲದೆ ನಿಷ್ಕಿ್ರಯವಾಗಿವೆ. ಸರಕಾರ ಈ ನಿಗಮಗಳಿಗೆ ಅನುದಾನ ಒದಗಿಸಬೇಕು. ರಾಜ್ಯದ ನೇಕಾರರು ಉತ್ಪಾದಿಸಿದ ಸೀರೆ, ಬಟ್ಟೆಗಳನ್ನು ಸರಕಾರ ಖರೀದಿಸಿ ಆರೋಗ್ಯ, ಸಮಾಜ ಕಲ್ಯಾಣ, ಶಿಕ್ಷಣ, ಪೊಲೀಸ್‌, ಸಾರಿಗೆ, ವಿದ್ಯುತ್‌ ಸೇರಿದಂತೆ ಇತರೆ ಇಲಾಖೆಗಳಿಗೆ ನಿಗಮಗಳ ಮೂಲಕ ಸರಬರಾಜು ಮಾಡಬೇಕು ಎಂದು ನೇಕಾರರು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ