ಆ್ಯಪ್ನಗರ

ಎಪಿಎಂಸಿಯಲ್ಲಿ ಶೋಷಣೆ ತಡೆಗೆ ಆಗ್ರಹಿಸಿ ಜು.10ಕ್ಕೆ ಪ್ರತಿಭಟನೆ

ಬೆಳಗಾವಿ : ಇಲ್ಲಿನ ಎಪಿಎಂಸಿಯಲ್ಲಿ ರೈತರ ಮೇಲೆ ಆರ್ಥಿಕ ಶೋಷಣೆ ...

Vijaya Karnataka 30 Jun 2019, 5:00 am
ಬೆಳಗಾವಿ : ಇಲ್ಲಿನ ಎಪಿಎಂಸಿಯಲ್ಲಿ ರೈತರ ಮೇಲೆ ಆರ್ಥಿಕ ಶೋಷಣೆ ನಡೆಯುತ್ತಿದ್ದು, ಇದನ್ನು ತಡೆಗಟ್ಟಿ ಪಾರದರ್ಶಕ ಆಡಳಿತಕ್ಕೆ ಒತ್ತಾಯಿಸಿ ಜು.10ರಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ)ದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಹೇಳಿದರು.
Vijaya Karnataka Web BLG-2906-2-52-29RAJU-2


ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ನಗರದ ರಾಣಿ ಚನ್ನಮ್ಮ ವೃತ್ತದಿಂದ ಎಪಿಎಂಸಿವರೆಗೆ ಪ್ರತಿಭಟನಾ ಮೆರವಣಿಗೆ ಏರ್ಪಡಿಸಲಾಗಿದೆ. ಇದಕ್ಕೆ ನಾನಾ ಸಂಘಟನೆಗಳು ಕೈಜೋಡಿಸಲಿದ್ದು, ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣೇಕರ್‌ ನೇತೃತ್ವ ವಹಿಸಲಿದ್ದಾರೆ. ಎಪಿಎಂಸಿ ಕಚೇರಿ ಎದುರು ಧರಣಿ ಕೂಡ ನಡೆಯಲಿದೆ ಎಂದರು.

ನಾನಾ ಕಾರಣಗಳಿಗಾಗಿ ಈಗ ರೈತರು ಸಂಕಷ್ಟದಲ್ಲಿದ್ದಾರೆ. ಇಂಥ ಸ್ಥಿತಿಯಲ್ಲಿ ರೈತರಿಗೆ ಆರ್ಥಿಕವಾಗಿ ಶೋಷಣೆ, ಮೋಸ ಮಾಡುತ್ತಿರುವುದು ಸರಿಯಲ್ಲ. ಕೃಷಿ ಉತ್ಪನ್ನ ನೀಡಿದ ರೈತರಿಗೆ ವ್ಯಾಪಾರಿಗಳು ನೀಡುತ್ತಿರುವ ಬಿಳಿ ಚೀಟಿ ಪದ್ಧತಿ ರದ್ದುಗೊಳಿಸಿ, ಅಧಿಕೃತ ರಸೀದಿಯನ್ನೇ ನೀಡಬೇಕು. ರೈತರ ಸಮ್ಮುಖದಲ್ಲಿಯೇ ಧಾರಣೆ ನಿರ್ಧರಿಸಬೇಕು. ನಕಲಿ ಕಂಪನಿಗಳ ಹಾವಳಿ ತಡೆಯಬೇಕು. ತೂಕದಲ್ಲಿ ಆಗುತ್ತಿರುವ ಮೋಸ ತಡೆಗಟ್ಟಬೇಕು. ರೈತರಿಂದ ಕಮಿಷನ್‌ ಪಡೆಯುವುದನ್ನು ನಿಲ್ಲಿಸಬೇಕು. ಪಾರದರ್ಶಕ ಆಡಳಿತ ಜಾರಿಗೆ ತರಬೇಕು. ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲ ಸೌಕರ್ಯ ಒದಗಿಸಬೇಕು. ಜಾನುವಾರುಗಳಿಗೆ ನೆರಳು, ನೀರು, ಮೇವು ಒದಗಿಸಬೇಕು ಎಂದು ಪ್ರತಿಭಟನೆ ಮೂಲಕ ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದರು.

ಎಪಿಎಂಸಿಯಲ್ಲಿ ನಡೆಯುತ್ತಿರುವ ಮೋಸಗಳಿಗೆ ಕಡಿವಾಣ ಹಾಕಿ ಬೆಳೆಗೆ ಯೋಗ್ಯ ಬೆಲೆ ಸಿಕ್ಕರೆ ರೈತರ ಆತ್ಮಹತ್ಯೆಗಳು ಕಡಿಮೆಯಾಗುತ್ತವೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಾರೆ. ಈ ಹಕ್ಕೊತ್ತಾಯ ಮಂಡಿಸಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮೋದಗಿ ವಿನಂತಿಸಿದರು.

ಬಸವ ಭೀಮ ಸೇನೆ, ಗಡಿನಾಡು ಹಿತರಕ್ಷ ಣಾ ವೇದಿಕೆ, ಕರ್ನಾಟಕ ಹಿತರಕ್ಷ ಣಾ ವೇದಿಕೆ, ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ, ಜಿಲ್ಲಾ ಕಟ್ಟಡ ಹಾಗೂ ಇತರೆ ಕಾರ್ಮಿಕ ಸಂಘಟನೆ, ಭಾರತೀಯ ಮಹಿಳಾ ಒಕ್ಕೂಟ, ನಾಗರಿಕ ಹಿತರಕ್ಷ ಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಒಳಗೊಂಡು ಇತರೆ ಸಂಘಟನೆಗಳು ಹಾಗೂ ಹೋರಾಟಗಾರರು ಪ್ರತಿಭಟನೆಗೆ ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಿವಾಜಿ ಕಾಗಣೀಕರ, ಆರ್‌.ಎಸ್‌.ದರ್ಗೆ, ಜಯಪ್ಪ ಬಸರಕೋಡ, ಸೋಮಲಿಂಗ ಕಮತಗಿ, ಈರಪ್ಪ ಲಕಮೋಜಿ, ಚಾಳು ತುಪ್ಪುರವಾಡಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ