ಆ್ಯಪ್ನಗರ

ವರ್ಗಾವಣೆ ಕೌನ್ಸೆಲಿಂಗ್‌ ತಡೆದು ಪ್ರತಿಭಟನೆ

ಚಿಕ್ಕೋಡಿ: ಕೋರಿಕೆ ವರ್ಗಾವಣೆಗೆ ...

Vijaya Karnataka 3 Aug 2019, 5:00 am
ಚಿಕ್ಕೋಡಿ: ಕೋರಿಕೆ ವರ್ಗಾವಣೆಗೆ ಅರ್ಜಿ ಹಾಕಿ ಕೌನ್ಸೆಲಿಂಗ್‌ಗೆ ಬಂದಾಗ ಖಾಲಿ ಹುದ್ದೆಗಳನ್ನು ತೋರಿಸದೇ ಇರುವುದನ್ನು ಖಂಡಿಸಿದ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷ ಕರು ಶುಕ್ರವಾರ ಶಿಕ್ಷ ಕರ ವರ್ಗಾವಣೆ ಕೌನ್ಸೆಲಿಂಗ್‌ ತಡೆದು ಪ್ರತಿಭಟಿಸಿದರು. ಇದರಿಂದ ಡಯಟ್‌ ಸಭಾಭವನದ ಎದುರು ಆಯೋಜಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷ ಕರ ವರ್ಗಾವಣೆ ಕೌನ್ಸೆಲಿಂಗ್‌ ಪ್ರಕ್ರಿಯೆ ಗೊಂದಲದ ಗೂಡಾಗಿತ್ತು.
Vijaya Karnataka Web BEL-2CKD3


ಚಿಕ್ಕೋಡಿ ಶೈಕ್ಷ ಣಿಕ ಜಿಲ್ಲೆಯಲ್ಲಿ ಕೋರಿಕೆ ವರ್ಗಾವಣೆ ಬಯಸಿ 17ಕ್ಕೂ ಹೆಚ್ಚು ಹಿಂದಿ ಶಿಕ್ಷ ಕರು ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ವರ್ಗಾವಣೆ ಕೌನ್ಸೆಲಿಂಗ್‌ಗೆ ಹಾಜರಾದಾಗ ಕೇವಲ 2 ಖಾಲಿ ಹುದ್ದೆ ಎಂದು ತೋರಿಸಲಾಗಿತ್ತು. ಇದನ್ನು ನೋಡಿದ ಹಿಂದಿ ಶಿಕ್ಷ ಕರು ಕಂಗಾಲಾದರು.

''ನಮ್ಮನ್ನು 1 ರಿಂದ 7ನೇ ತರಗತಿ ಹಿಂದಿ ಶಿಕ್ಷ ಕರೆಂದು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಈಗ ನಮ್ಮನ್ನು ಕೇವಲ 1 ರಿಂದ 5ನೇ ತರಗತಿ ಪ್ರಾಥಮಿಕ ಶಾಲಾ ಶಿಕ್ಷ ಕರೆಂದು(ಪಿಎಸ್‌ಟಿ) ಪರಿಗಣಿಸಲಾಗುತ್ತಿದೆ. ಖಾಲಿ ಇರುವ ಹುದ್ದೆಗಳನ್ನು 6ರಿಂದ 8ನೇ ತರಗತಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷ ಕರೆಂದು (ಜಿಪಿಟಿ) ಪರಿಗಣಿಸಲಾಗಿದೆ. ಕೌನ್ಸೆಲಿಂಗ್‌ಗೆ ಬಂದ ಹಿಂದಿ ಶಿಕ್ಷ ಕರಿಗೆ ಖಾಲಿ ಸ್ಥಳ ತೋರಿಸಿಲ್ಲ. ಹೀಗಿದ್ದರೆ ವರ್ಗಾವಣೆಗಾಗಿ ಅರ್ಜಿ ಪಡೆದದ್ದು ಏಕೆ?'' ಎಂದು ಪ್ರಶ್ನಿಸಿದ ಶಿಕ್ಷ ಕರು, ಚಿಕ್ಕೋಡಿ ಪ್ರಭಾರಿ ಡಿಡಿಪಿಐ ಗಂಗಾಧರ ಅವರನ್ನು ತರಾಟೆಗೆ ತೆಗೆದುಕೊಂಡರು.

''ಇದುವರೆಗೂ ಪದವೀಧರ ಹಿಂದಿ ಶಿಕ್ಷ ಕರ ನೇಮಕಾತಿ ಮಾಡಿಲ್ಲ. ಹೀಗಿರುವಾಗ ಖಾಲಿ ಹುದ್ದೆಗಳನ್ನು ಜಿಪಿಟಿ ಎಂದು ಏಕೆ ಪರಿಗಣಿಸಲಾಗಿದೆ? ನಾವು 1 ರಿಂದ 7 ತರಗತಿಗೆ ಬೋಧನೆ ಮಾಡುತ್ತಿದ್ದೇವೆ. ನಮ್ಮಲ್ಲಿಯೂ ಪದವೀಧರರಿದ್ದಾರೆ. ಆ ಹುದ್ದೆಯಲ್ಲಿ ನಮಗೆ ವರ್ಗಾವಣೆ ಕೊಡಬಹುದಿತ್ತು'' ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಪ್ರಾಥಮಿಕ ಶಾಲಾ ಹಿಂದಿ ಶಿಕ್ಷ ಕರ ಸಂಘದ ರಾಜ್ಯ ಉಪಾಧ್ಯಕ್ಷೆ ಮಂಜುಳಾ ಪಿ.ಜಿ., ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಲೋಕನ್ನವರ, ತಾಲೂಕು ಅಧ್ಯಕ್ಷ ಎಸ್‌.ಎ.ಖಡ್ಡ, ವೈ.ಎಸ್‌.ಬುಡ್ಡಗೋಳ, ಎನ್‌.ಜಿ.ಪಾಟೀಲ, ಕೆ.ಎಂ.ಕೋಲ್ಕಾರ, ಎಂ.ಎಂ.ಮುಲ್ಲಾ, ವಿಠಲ ಮಿಲ್ಲಾನಟ್ಟಿ ಇತರರು ಉಪಸ್ಥಿತರಿದ್ದರು.

ಬೆಂಗಳೂರಿಗೆ ಹೋಗಿ ಹೇಳಿ! :
ಪ್ರಭಾರಿ ಡಿಡಿಪಿಐ ಗಂಗಾಧರ ಎ.ಸಿ ಮಾತನಾಡಿ, ''ನಿಮ್ಮ ಅಭಿಪ್ರಾಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಇದರ ಹೊರತಾಗಿ ನನ್ನಿಂದ ಬೇರೆ ಏನು ಮಾಡಲೂ ಸಾಧ್ಯವಿಲ್ಲ'' ಎಂದು ಸ್ಥಳದಿಂದ ಹೊರಟು ಹೋದರು.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷ ಕರು ಮತ್ತು ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಪದಾಧಿಕಾರಿಗಳು, ಕೌನ್ಸೆಲಿಂಗ್‌ ತಡೆದು ಪ್ರತಿಭಟನೆ ಮಾಡಿದರು. ಸುಮಾರು ಎರಡು ಗಂಟೆಗಳ ಕಾಲ ಕೌನ್ಸೆಲಿಂಗ್‌ ಪ್ರಕ್ರಿಯೆ ಸ್ಥಗಿತವಾಗಿತ್ತು.

''ನೀವೇನಾದರೂ ಕೇಳುವುದಾದರೆ ಬೆಂಗಳೂರಿಗೆ ಹೋಗಿ ಕೇಳಿ'' ಎಂದು ಪ್ರತಿಭಟನಾ ನಿರತ ಶಿಕ್ಷ ಕರನ್ನು ಒತ್ತಾಯ ಪೂರ್ವಕವಾಗಿ ಅಲ್ಲಿಂದ ಕಳಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ