ಆ್ಯಪ್ನಗರ

7 ದಿನದಲ್ಲಿ ತಿಪ್ಪೆ ತೆರವುಗೊಳಿಸದಿದ್ದರೆ ಪಂಚಾಯಿತಿ ಎದುರು ಕಸ ಸುರಿದು ಪ್ರತಿಭಟನೆ ಎಚ್ಚರಿಕೆ

ತೆಲಸಂಗ: ಗ್ರಾಮದ ಕೆವಿಜಿ ಬ್ಯಾಂಕ್‌ ಎದುರಿನ ಮುಖ್ಯ ರಸ್ತೆಯ ಎರಡು ಬದಿ ಚರಂಡಿಯನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿ ...

Vijaya Karnataka 9 Mar 2019, 5:00 am
ತೆಲಸಂಗ : ಗ್ರಾಮದ ಕೆವಿಜಿ ಬ್ಯಾಂಕ್‌ ಎದುರಿನ ಮುಖ್ಯ ರಸ್ತೆಯ ಎರಡು ಬದಿ ಚರಂಡಿಯನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿ ಗ್ರಾಪಂ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-8TELSANG1


ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಅಶೋಕ ಉಂಡೋಡಿ ಅವರು 'ಏಳು ದಿನದೊಳಗಾಗಿ ರಸ್ತೆಯ ಮೇಲಿನ ತಿಪ್ಪೆ ಹಾಗೂ ಕಲ್ಲುಗಳನ್ನು ತೆಗೆಸಿ ಗಟಾರನ್ನು ಸ್ವಚ್ಛಗೊಳಿಸಬೇಕು. ಇಲ್ಲದೇ ಹೋದರೆ ಗ್ರಾಮ ಪಂಚಾಯಿತಿ ಎದುರು ಕಸ ಸುರಿದು ಪ್ರತಿಭಟನೆ ಮಾಡುತ್ತೇವೆ' ಎಂದು ಎಚ್ಚರಿಸಿದರು.

'ಸ್ವಚ್ಛಭಾರತ ಎಂದು ಹೇಳಿ ಕೈಯಲ್ಲಿ ಕಲಬರಿಗೆ ಹಿಡಿದು ಕ್ಯಾಮೆರಾಗೆ ಪೋಸು ಕೊಡುತ್ತೀರಿ ವಿನಃ ಗ್ರಾಮದಲ್ಲಿ ಯಾವ ಗಟಾರಗಳನ್ನು ಸ್ವಚ್ಛವಾಗಿಟ್ಟಿದ್ದೀರಿ ತೋರಿಸಬನ್ನಿ' ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು 'ರಸ್ತೆಯ ಮೇಲೆ ನಿತ್ಯ ತಿಪ್ಪೆಯ ರಾಶಿ ಬಿದ್ದಿರುವುದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ. ಇದರಿಂದ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿಯಲ್ಲಿದ್ದಾರೆ. ಇಲ್ಲಿ ವಾಸಿಸುವ ಜನರು ಹೊಲಸು ವಾಸನೆ ಸೇವಿಸುತ್ತಲೇ ಇರಬೇಕಾಗಿದೆ. ಕಳೆದ ಒಂದು ವರ್ಷದಿಂದ ಸಂಬಂಧಪಟ್ಟವರಿಗೆ ಈ ಕುರಿತು ಮನವಿ ಸಲ್ಲಿಸುತ್ತಿದ್ದರೂ ಯಾರೊಬ್ಬರೂ ಸಮಸ್ಯೆಯ ಇತ್ಯರ್ಥಕ್ಕೆ ಪ್ರಯತ್ನಿಸಿಲ್ಲ. ಈ ಎಲ್ಲ ಸಮಸ್ಯೆಯಿಂದ ಸ್ಥಳೀಯ ನಿವಾಸಿಗಳು ರೋಸಿ ಹೋಗಿದ್ದಾರೆ. ಶೀಘ್ರ ಚರಂಡಿ ಸ್ವಚ್ಛತೆ, ರಸ್ತೆ ಪಕ್ಕದ ಕಲ್ಲುಗಳ ತೆರವು, ತಿಪ್ಪೆ ತೆಗೆಸುವ ಕೆಲಸ ಮಾಡದೆ ಹೋದರೆ ಮುಂದಾಗುವ ಅನಾಹುತಕ್ಕೆ ಗ್ರಾಪಂ ಹಾಗೂ ತಾಲೂಕಾಡಳಿತವೇ ಹೊಣೆ' ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸುಧಾಕರ ಕಲಾಲ, ಇಮಾಮ್‌ ಶಿರಹಟ್ಟಿ, ಗೋಪಾಲ ಕಲಾಲ, ಮುಬಾರಕ್‌ ಕರಜಗಿ, ಆರೀಫ್‌ ಅತ್ತಾರ, ಮೆಹಬೂಬ್‌ ಅತ್ತಾರ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ