ಆ್ಯಪ್ನಗರ

ಪೊಲೀಸ್‌ ಅಧಿಕಾರಿಗಳಿಂದ ಸಾರ್ವಜನಿಕ ಕುಂದು ಕೊರತೆ ವಿಚಾರಣೆ

ಸಂಕೇಶ್ವರ : ಪೋಲಿಸ್‌ ಠಾಣೆ ವ್ಯಾಪ್ತಿಯ ನಗರ ಮತ್ತು ಹಳ್ಳಿಗಳ ಮಟ್ಟದ ...

Vijaya Karnataka 31 Jul 2019, 5:00 am
ಸಂಕೇಶ್ವರ : ಪೋಲಿಸ್‌ ಠಾಣೆ ವ್ಯಾಪ್ತಿಯ ನಗರ ಮತ್ತು ಹಳ್ಳಿಗಳ ಮಟ್ಟದ ಎಸ್ಸಿಎಸ್ಟಿ ಕುಂದು ಕೊರತೆ ಸಭೆ ಗೋಕಾಕ ಡಿವೈಎಸ್ಪಿ ಡಿ.ಟಿ. ಪ್ರಭು ಅವರ ಅಧ್ಯಕ್ಷ ತೆಯಲ್ಲಿ ನಡೆಯಿತು.
Vijaya Karnataka Web BEL-30-SANK-03


ಜನರ ಹಿತಾಸಕ್ತಿಗಾಗಿ ಪೊಲೀಸ್‌ ಇಲಾಖೆ ಸಂಪೂರ್ಣ ಬದ್ಧವಾಗಿದ್ದು ಕಾನೂನು ಪ್ರಕಾರ ಎಲ್ಲರಿಗೂ ನ್ಯಾಯ ಒದಗಿಸಲಾಗುವುದು. ಯಾರಾದರೂ ಕಾನೂನು ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಟಿ. ಪ್ರಭು ಹೇಳಿದರು.

ಸಂಕೇಶ್ವರ ನಗರದ ಜನತಾ ಪ್ಲಾಟ್‌ನಲ್ಲಿನ ಸರಕಾರಿ ಶಾಲೆಯಲ್ಲಿ ಮುಖ್ಯಾಧ್ಯಾಪಕರ ನೇಮಕಾತಿ ಮಾಡದ ಕಾರಣ ಶಾಲೆಯಲ್ಲಿ ಉಳಿದ ಶಿಕ್ಷ ಕರು ಬೇಜವಾದ್ದಾರಿಯಿಂದ ನಡೆದುಕೊಳ್ಳುತ್ತಿದ್ದು ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಮುಖ್ಯಾಧ್ಯಾಪಕರ ನೇಮಕಾತಿ ಮಾಡಿ ಎಂದು ಮುಖಂಡರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹುಕ್ಕೇರಿ ತಹಸೀಲ್ದಾರ್‌ ರೇಷ್ಮಾ ತಾಳಿಕೋಟಿ, ಕ್ಷೇತ್ರ ಶಿಕ್ಷ ಣ ಅಧಿಕಾರಿಗಳಿಗೆ ಕೂಡಲೇ ಸಮಸ್ಯೆಗೆ ಸ್ಪಂದಿಸಲು ಸೂಚಿಸಿದರು. ಮುಖಂಡರು ಶಿಕ್ಷ ಣ ಇಲಾಖೆ ಬಗ್ಗೆ ದೂರುಗಳ ಸುರಿಮಳೆಗೈದರು.

ಅಂಕಲಿ ಗ್ರಾಮದಲ್ಲಿನ ದಲಿತರಿಗೆ ಕೊಟ್ಟ ಮನೆಗಳು ಹಲವು ವರ್ಷಗಳಿಂದ ಮೂಲ ಸೌಕರ್ಯಗಳಿಂದ ವಂಚಿತಗೊಂಡಿದ್ದು ಕೂಡಲೇ ಸಮಸ್ಯೆಗಳನ್ನು ಸರಿಪಡಿಸಿಕೊಡಿ ಎಂದು ಅಂಕಲಿ ಗ್ರಾಮಸ್ಥರು ತಹಸೀಲ್ದಾರ್‌ ರೇಷ್ಮಾ ತಾಳಿಕೋಟಿ ಅವರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ದಲಿತ ನಾಯಕರು ತಮ್ಮ ಹಲವಾರು ಬೇಡಿಕೆಗಳನ್ನು, ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿರಿಸಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.

ಹುಕ್ಕೇರಿ ಸಿಪಿಐ ಎಸ್‌.ಕೆ. ಹೊಳೆನವರ, ಪಿಎಸ್‌ಐ ರಫಿಕ್‌ ತಹಶೀಲ್ದಾರ್‌, ದಲಿತ ಮುಖಂಡರಾದ ಪ್ರಕಾಶ ಮೈಲಾಕೆ, ವಿಕ್ರಂ ಕರನಿಂಗ, ಗಂಗಾರಾಮ ಭೂಸಗೋಳ, ಪ್ರಮೋದ ಹೊಸಮನಿ, ಮಹೇಶ ಹೊಟ್ಟಿವಳಿ, ಬಸವರಾಜ ಕೊಳಿ, ಜಿತೇಂದ್ರ ಮರಡಿ, ದಿಲೀಪ ಹೊಸಮನಿ, ಕೆಂಪಣ್ಣ ಕಾಂಬಳೆ, ವಿನೋದ ನಾಯಿಕ, ಹನುಮಂತ ಶೇಖಣ್ಣವರ, ಅನಿಲ ಖಾತೆದಾರ, ಬಾಬು ಭೂಸಗೋಳ, ಸಂಜಯ ಮೇಲಗೇರಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ