ಆ್ಯಪ್ನಗರ

ಅಲದಾಳದಲ್ಲಿ ಸಚಿವರಿಂದ ಸಾರ್ವಜನಿಕರ ಕುಂದು ಕೊರತೆ ಸಭೆ

ಯಮಕನಮರಡಿ: ಸಮೀಪದ ಅಲದಾಳ ಗೆಸ್ಟ್‌ ಹೌಸ್‌ನಲ್ಲಿ ಮಂಗಳವಾರ ಸಾರ್ವಜನಿಕರ ಕುಂದು ಕೊರತೆ ಸಭೆ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷ ತೆಯಲ್ಲಿ ...

Vijaya Karnataka 16 Jan 2019, 5:00 am
ಯಮಕನಮರಡಿ : ಸಮೀಪದ ಅಲದಾಳ ಗೆಸ್ಟ್‌ ಹೌಸ್‌ನಲ್ಲಿ ಮಂಗಳವಾರ ಸಾರ್ವಜನಿಕರ ಕುಂದು ಕೊರತೆ ಸಭೆ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷ ತೆಯಲ್ಲಿ ನಡೆಯಿತು.
Vijaya Karnataka Web BEL-15YMD1


ದಡ್ಡಿ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರಿಗೆ ಉದ್ಯೋಗವನ್ನು ನೀಡುತ್ತಿಲ್ಲ, ಉದ್ದೇಶ ಪೂರ್ವಕ ದೂರದ ಪ್ರದೇಶಕ್ಕೆ ಹೋಗಿ ಕೂಲಿ ಮಾಡಲು ಹೇಳುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದರು. ದಡ್ಡಿ ಗ್ರಾಪಂನಲ್ಲಿ ಬಸವ ಯೋಜನೆಯ ಫಲಾಭವಿಗಳ ಆಯ್ಕೆಯಲ್ಲಿ ತಾರತಮ್ಯವಾಗಿದೆ. ದೋಣಗಟ್ಟಿ ಗ್ರಾಮದಲ್ಲಿ ಈಗಾಗಲೇ ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದರೂ ಕಳೆದ ಎರಡು ದಿನಗಳಿಂದ ನೀರು ಕೆರೆ ಸ್ಥಗಿತವಾಗಿದೆ ಎಂದು ಅಲ್ಲಿಯ ಜನರು ಸಚಿವರೆದುರು ಆರೋಪಿಸಿದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ದಡ್ಡಿ, ಅತ್ತಿಹಾಳ, ಕೊಟ, ಮಣಗುತ್ತಿ, ಹಂಚಿನಾಳ, ಮೋದಗಾ ಗ್ರಾಮದಲ್ಲಿ ಜಾತ್ರೆಗಳು ಬರುವ ಬೇಸಿಗೆಯಲ್ಲಿ ಆರಂಭವಾಗಲಿವೆ. ಆ ನಿಟ್ಟಿನಲ್ಲಿ ರಸ್ತೆ, ಕುಡಿಯುವ ನೀರು, ಬೀದಿ ದೀಪ, ಗಟಾರ ಸ್ವಚ್ಛತೆಯನ್ನು ಗ್ರಾಪಂನವರು ಹೆಚ್ಚಿನ ಮುತುವರ್ಜಿಸಿ ವಹಿಸಬೇಕು. ಜತೆಗೆ ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ನೀರು ಕುಡಿಯುಲು ಮುಂದಾಗಬೇಕು ಎಂದರು.

ದಡ್ಡಿ ಹಾಗೂ ಹತ್ತರಗಿ ಜಿಪಂ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರರು ಹಾಗೂ ಅರ್ಜುನವಾಡ ಗ್ರಾಮದ ಕುರುಬ ಸಮಾಜದ ಮುಖಂಡರು ಸಚಿವ ಸತೀಶ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು.

ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಕಾಕತಿ ಜಿಪಂ ಸದಸ್ಯ ಸಿದ್ದಗೌಡಾ ಸುಣಗಾರ, ದಡ್ಡಿ ಜಿಪಂ ಸದಸ್ಯೆ ಮನಿಷಾ ಪಾಟೀಲ, ಪಾಶ್ಚಾಪುರ ಜಿಪಂ ಸದಸ್ಯ ಮಂಜುನಾಥ ಪಾಟೀಲ, ಮಣಗುತ್ತಿ ತಾಪಂ ಸುರೇಶ ಬೆಣ್ಣಿ, ಈರಣ್ಣಾ ಬಿಸಿರೊಟ್ಟಿ, ಮಲಗೌಡಾ ಪಾಟೀಲ, ಪ್ರಕಾಶ ಬಾಗೇವಾಡಿ, ರವಿ ಜಿಂಡ್ರಾಳಿ, ದಯಾನಂದ ಪಾಟೀಲ, ಭಾರತಿ ಕೋಕಿತಕರ, ಪ್ರಮೋದ ರಗಶೆಟ್ಟಿ, ಚಂದ್ರು ಹುಡೆದ, ಬಸವರಾಜ ದೇಸಾಯಿ, ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ