ಆ್ಯಪ್ನಗರ

ಬೆಳಗಾವಿ ನಗರದಲ್ಲಿ ಮೂರು ದಿನಗಳಿಂದ ಅಬ್ಬರಿಸಿದ ಮಳೆಯಿಂದ ಮತ್ತಷ್ಟು ಅವಾಂತರ

ಬೆಳಗಾವಿ: ಮೂರು ದಿನಗಳಿಂದ ನಗರದಲ್ಲಿ ...

Vijaya Karnataka 7 Aug 2020, 5:00 am
ಬೆಳಗಾವಿ: ಮೂರು ದಿನಗಳಿಂದ ನಗರದಲ್ಲಿಅಬ್ಬರಿಸಿದ ಮಳೆ ಗುರುವಾರ ಸ್ವಲ್ಪ ಮಟ್ಟಿಗೆ ತಗ್ಗಿದ್ದರೂ ಜನ ಜೀವನ ಸಹಜ ಸ್ಥಿತಿಗೆ ಬಂದಿಲ್ಲ. ವ್ಯಾಪಾರ- ವಹಿವಾಟಿಗೂ ಹಿನ್ನಡೆಯಾಗಿದೆ.
Vijaya Karnataka Web 6LBS8_53
ಬೆಳಗಾವಿ ನಗರದಲ್ಲಿ ಮಳೆ ಅವಾಂತರ


ನಗರದ ಯಡಿಯೂರಪ್ಪ ಮಾರ್ಗ ರಸ್ತೆಯ ಪಕ್ಕದಲ್ಲಿನ ಮನೆಗಳು ಹಾಗೂ ವಡಗಾವಿ ಪ್ರದೇಶದ ಅನ್ನಪೂರ್ಣ ನಗರದ ಮನೆಗಳಿಗೆ ಮಳೆ ನೀರು ನುಗ್ಗಿದೆ. ಈ ಭಾಗ ದಲ್ಲಿಸಂಪೂರ್ಣವಾಗಿ ಜನಜೀವನ ಅಸ್ತವ್ಯ ಸ್ತವಾಗಿದೆ. ಹಲವು ಕಡೆ ಜನರು ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ನಗರದ ನ್ಯಾಯಾಲಯದ ಆವರಣದಲ್ಲಿಮಳೆಗಾಳಿಗೆ ಮರ ನೆಲಕ್ಕೆ ಉರುಳಿದೆ. ಅಪಾಯ ಸಂಭವಿಸಿಲ್ಲ. ಶಹಾಪುರದ ನಾಥ್‌ ಪೈ ಸರ್ಕಲ್‌ ಹತ್ತಿರ ಹಾಗೂ ಗೋವಾವೇಸ್‌ನ ರಾಮಲಿಂಗವಾಡಿಯಲ್ಲಿತಲಾ ಒಂದು ಮನೆಯ ಗೋಡೆ ಮಳೆಯಿಂದ ಕುಸಿದಿವೆ. ಬೆಳಗಾವಿ ತಾಲೂಕಿನ ಮಾಳೇನಹಟ್ಟಿ ರಸ್ತೆ ಕುಸಿದಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ.

ಉಕ್ಕಿ ಹರಿಯುತ್ತಿರುವ ಮಾರ್ಕಂಡೇಯ: ಬೆಳಗಾವಿ ಸಮೀಪದಲ್ಲಿಹರಿಯುವ ಮಾರ್ಕಂಡೇಯ ನದಿ ಸತತ ಮಳೆಗೆ ಉಕ್ಕಿ ಹರಿಯುತ್ತಿದೆ. ಬೆಳಗಾವಿ ತಾಲೂಕಿನ ಉಚಗಾಂವಿ, ಅಂಬೇವಾಡಿ, ಹಿಂಡಲಗಾ, ಕಂಗ್ರಾಳಿ, ಕಡೋಲಿ, ಜಾಪುರವಾಡಿ, ಕಾಕತಿ ಗ್ರಾಮಗಳ ಜಮೀನಿಗಳಿಗೆ ಮಾರ್ಕಂಡೇಯ ನದಿ ನೀರು ನುಗ್ಗಿದ್ದರಿಂದ ಭತ್ತ ಸೇರಿದಂತೆ ಅನೇಕ ಬೆಳೆಗಳು ಮುಳುಗಡೆಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ