ಆ್ಯಪ್ನಗರ

ಪೈಗಂಬರ್‌ ಜಯಂತಿ: ಬಡರೋಗಿಗಳಿಗೆ ಹಣ್ಣು ವಿತರಣೆ

ಬೈಲಹೊಂಗಲ: ಮಹ್ಮದ್‌ ಪೈಗಂಬರರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ...

Vijaya Karnataka 11 Nov 2019, 5:00 am
ಬೈಲಹೊಂಗಲ: ಮಹ್ಮದ್‌ ಪೈಗಂಬರರು ಹಾಕಿಕೊಟ್ಟ ಸನ್ಮಾರ್ಗದಲ್ಲಿಎಲ್ಲರೂ ಮುನ್ನಡೆಯಬೇಕು. ಶಾಂತಿ, ಸಹಬಾಳ್ವೆ, ಸಾಮರಸ್ಯದಿಂದ ಬಾಳಬೇಕೆಂದು ಮುಸ್ಲಿಂ ಸಮಾಜ ಮುಖಂಡ, ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಹೇಳಿದರು.
Vijaya Karnataka Web 10HTP5_53
ಬೈಲಹೊಂಗಲದ ಸಾರ್ವಜನಿಕ ಆಸ್ಪತ್ರೆಯ ಬಡ ರೋಗಿಗಳಿಗೆ ಮಹ್ಮದ ಪೈಗಂಬರ್‌ ಜಯಂತಿ ನಿಮಿತ್ತ ಮುಸ್ಲಿಂ ಸಮುದಾಯದವರು ಬಡ ರೋಗಿಗಳಿಗೆ ಹಣ್ಣು ಹಂಪಲ ಕಿಟ್‌ ವಿತರಿಸಲಾಯಿತು.


ಅವರು, ಪಟ್ಟಣದ ಮುಸ್ಲಿಂ ಸಮಾಜದ ವತಿಯಿಂದ ಮಹ್ಮದ್‌ ಪೈಗಂಬರ್‌ ಜಯಂತಿ ನಿಮಿತ್ತ ನೀಡಲಾದ ಹಣ್ಣು ಹಂಪಲುಗಳ ಕಿಟ್‌ನ್ನು ಸಾರ್ವಜನಿಕ ಆಸ್ಪತ್ರೆಯ ಬಡ ರೋಗಿಗಳಿಗೆ ವಿತರಿಸಿ ಮಾತನಾಡಿದರು.

ನಂತರ ಸಮೀಪದ ಖನಗಾಂವ ಗ್ರಾಮದ ಮಾನಸ ಕೇಂದ್ರಕ್ಕೆ ತೆರಳಿ ಅಲ್ಲಿನ ಮಾನಸಿಕ ಅಸ್ವಸ್ತರಿಗೆ ಹಣ್ಣು, ಹಂಪಲ ವಿತರಿಸಿದರು. ಇದೇ ವೇಳೆ ಹಜರತ್‌ ಹಾಫೀಜ್‌ ಬರಿ ದರ್ಗಾದಲ್ಲಿವಿಶೇಷ ಪ್ರಾರ್ಥನೆ ಮಾಡಲಾಯಿತು. ಪವಿತ್ರ ಹಜ್‌ ಯಾತ್ರೆ ಕೈಗೊಂಡಿರುವ ಯಾತ್ರಿಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿಲತೀಫ ಪೀರಾ ತೋಲಗಿ, ಇಸ್ಮಾಯಿಲ್‌ ಬಡೇಘರ, ಇಲಿಯಾಸ್‌ ಹುಬ್ಬಳ್ಳಿ, ಶಕೀಲ ಪಿರಜಾದೆ, ಸಲಿಂ ಬಿಸ್ತಿ, ಶಬ್ಬಿರ ಮುಲ್ಲಾ, ದಿಲಾವರ ಮಸ್ತನ್ನವರ, ಬಶೀರ ಮದಲಮಟ್ಟಿ, ಮೆಹಬೂಬ ಬಾಗೇವಾಡಿ, ಸುಲೇಮಾನ ನೇಸರಗಿ, ಮುಜಮಿಲ್‌ ಮುಜಾವರ, ತೌಸಿಫ್‌ ಸನದಿ, ಶೌಕತ ಬೇಪಾರಿ, ಫಾರೂಕ ಮುಲ್ಲಾಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ