ಆ್ಯಪ್ನಗರ

ಪುರಸಭೆ ಅಧಿಕಾರಿಗಳಿಗೆ ತೀವ್ರ ತರಾಟೆ- ಹಳ್ಳ ಅತಿಕ್ರಮಿಸಿದವರ ಮೇಲೆ ಕ್ರಮ ಜರುಗಿಸುವಂತೆ ಶಾಸಕ, ಡಿಸಿ ಸೂಚನೆ

ಹುಕ್ಕೇರಿ: ''ನೀವು ಸಂಬಳಕ್ಕಾಗಿ ಕೆಲಸ ಮಾಡಬೇಡಿ...

Vijaya Karnataka 13 Oct 2020, 5:00 am
ಹುಕ್ಕೇರಿ: ''ನೀವು ಸಂಬಳಕ್ಕಾಗಿ ಕೆಲಸ ಮಾಡಬೇಡಿ, ಸಾರ್ವಜನಿಕರ ಸೇವೆ ಮಾಡಿ ಸಂಬಳ ಪಡೆಯಿರಿ. ಇದನ್ನು ಅರ್ಥಮಾಡಿಕೊಂಡು ನಿಷ್ಪಕ್ಷಪಾತವಾಗಿ ಸರ್ವೆ ಮಾಡಿ ಹಳ್ಳ ಅತಿಕ್ರಮಣ ಮಾಡಿರುವವರ ಮೇಲೆ ಕ್ರಮ ಜರುಗಿಸಿ..''
Vijaya Karnataka Web 12 HUKKERI 02_53
ಹುಕ್ಕೇರಿಯಲ್ಲಿಧಾರಾಕಾರ ಸುರಿದ ಮಳೆಗೆ ಹಾನಿಯಾಗಿರುವ ಆಸ್ತಿಗಳ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸುತ್ತಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ.


- ಹುಕ್ಕೇರಿ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಹಾಗೂ ಅಭಿಯಂತರ ಗೌರಿಶಂಕರ ಮಾಳಂಕ ಅವರನ್ನು ಶಾಸಕ ಉಮೇಶ ಕತ್ತಿ ಮತ್ತು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತರಾಟೆಗೆ ತೆಗೆದುಕೊಂಡ ರೀತಿ ಇದು.

ಪಟ್ಟಣದಲ್ಲಿಧಾರಾಕಾರ ಸುರಿದ ಮಳೆಗೆ ನೆಲ ಕಚ್ಚಿದ ಮನೆಗಳನ್ನು ಪರಿಶೀಲಿಸಿ ಸೋಮವಾರ ಅವರು ಮಾತನಾಡಿದರು.

''ಪಟ್ಟಣದ ಮೂರು ಸೇತುವೆಗಳನ್ನು ಎತ್ತರಿಸಬೇಕು. ಕೂಡಲೇ ಹಳ್ಳ ಸ್ವಚ್ಛಗೊಳಿಸಬೇಕು. ಜತೆಗೆ ಮಳೆಯಿಂದ ಹಾನಿಯಾಗಿರುವ ಸಾರ್ವಜನಿಕರ ಆಸ್ತಿ ಸರ್ವೇ ಮಾಡಿ ಜಿಲ್ಲಾಡಳಿತಕ್ಕೆ ವರದಿ ಒಪ್ಪಿಸಬೇಕು. ಮನೆ ಉರುಳಿ ನಿರಾಶ್ರಿತವಾಗಿರುವ ಕುಟುಂಬದವರಿಗೆ ವಸತಿ, ಊಟೋಪಹಾರದ ವ್ಯವಸ್ಥೆ ಮಾಡಿ ಸೌಲಭ್ಯದ ಕೊರತೆಯಾಗದಂತೆ ನೋಡಿಕೊಳ್ಳಬೇಕು'', ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು ಮುಂದೆಯೂ ಅತಿಯಾದ ಮಳೆಯಾಗುವ ಸಂಭವಿರುವುದರಿಂದ ಎಲ್ಲಅಧಿಕಾರಿಗಳು ತಾಲೂಕಿನಲ್ಲಿವಾಸ್ತವ್ಯ ಹೂಡಬೇಕು. ಗ್ಯಾರೇಜ್‌ಗೆ ನೀರು ನುಗ್ಗಿ ಮೃತಪಟ್ಟವರ ವಾರಸುದಾರರಿಗೆ ವಿಪತ್ತು ಪರಿಹಾರ ನಿಧಿಯಿಂದ ನೆರವು ವಿತರಿಸಬೇಕೆಂದು ಸೂಚಿಸಿದರು.

ಮಳೆಗೆ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬದವರಿಗೆ ಶಾಸಕರು ಸ್ವಾಂತನ ಹೇಳಿದರಲ್ಲದೆ, ಮಳೆ ನೀರು ನುಗ್ಗಿದ 22ಮನೆಗಳು ಹಾಗೂ 110 ಅಂಗಡಿಗಳ ಬಗ್ಗೆ ಮಾಹಿತಿ ಪಡೆದರು.

ಉಪವಿಭಾಗ ಅಧಿಕಾರಿ ಅಶೋಕ ತೇಲಿ, ತಹಸೀಲ್ದಾರ್‌ ಅಶೋಕ ಗುರಾಣಿ, ಪುರಸಭೆ ಸದಸ್ಯರು ಪಟ್ಟಣದ ಮುಖಂಡರು ಉಪಸ್ಥಿತರಿದ್ದರು.

ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ

ಕಂಬಾರ ಒಣಿ ಹಾಗೂ ಬಾಂಬೇ ಚಾಳ ನಿವಾಸಿಗಳು, ''ಎರಡು ವರ್ಷಗಳ ಹಿಂದೆ ಅತಿಯಾದ ಮಳೆಗೆ ಅಪಾರ ಆಸ್ತಿ ಹಾನಿಯಾಗಿತ್ತು. ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದರೂ ಗಮನ ಹರಿಸಿಲ್ಲ. ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿದ್ದಾಗಿ ಆರೋಪಿಸಿ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಇಂಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು'' ಎಂದು ಶಾಸಕರು ಹಾಗೂ ಜಿಲ್ಲಾಧಿಕಾರಿಯವರಿಗೆ ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ