ಆ್ಯಪ್ನಗರ

ಮತ್ತೊಂದು ಕಲಬೆರಕೆ ಹಾಲು ತಯಾರಿಕೆ ಘಟಕದ ಮೇಲೆ ದಾಳಿ

ಅಥಣಿ: ತಾಲೂಕಿನ ಅರಳಿಹಟ್ಟಿ ಗ್ರಾಮದ ತೋಟದ ಮನೆಯ ಕಲಬೆರಕೆ ಹಾಲು ತಯಾರಿಕೆ ಘಟಕದ ಮೇಲೆ ಗುರುವಾರ ...

Vijaya Karnataka 28 Feb 2020, 5:00 am
ಅಥಣಿ: ತಾಲೂಕಿನ ಅರಳಿಹಟ್ಟಿ ಗ್ರಾಮದ ತೋಟದ ಮನೆಯ ಕಲಬೆರಕೆ ಹಾಲು ತಯಾರಿಕೆ ಘಟಕದ ಮೇಲೆ ಗುರುವಾರ ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿ 29 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
Vijaya Karnataka Web 27BGM3082855
ಅಥಣಿ ತಾಲೂಕಿನ ಅರಳಿಹಟ್ಟಿ ಗ್ರಾಮ ವ್ಯಾಪ್ತಿಯ ತೋಟದ ಮನೆಯೊಂದರ ಮೇಲೆ ದಾಳಿ ನಡೆಸಿ ಕಲಬೆರಕೆ ಹಾಲು ತಯಾರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು.


ಜಾಧವ ತೋಟದ ಮಾಣಿಕ ಸಂತ್ರಾಮ ಜಾಧವ ಬಂಧಿತ ಆರೋಪಿ.

ರಾಸಾಯನಿಕ ಪೌಡರ್‌ ಮತ್ತು ಪಾಮೋಲಿನ್‌ ಎಣ್ಣೆ ಸೇರಿಸಿ ಮಾಡಿ ಕಲಬೆರಕೆ ಹಾಲು ತಯಾರಿಸುತ್ತಿರುವುದು ದಾಳಿ ಸಂದರ್ಭದಲ್ಲಿಕಂಡು ಬಂದಿದೆ. ಹಾಲು ತುಂಬಿದ ಐದು ಕ್ಯಾನ್‌, ಪಾಮೋಲಿನ್‌ ಎಣ್ಣೆಯ 9 ಡಬ್ಬಿ, ಮೂರು ಹಾಲಿನ ಕ್ಯಾನ್‌, ಮೇಬಿ ಲ್ಯಾಕ್ಟೋಝ್‌ ಪೌಡರ್‌ ತುಂಬಿದ ಚೀಲ ಮತ್ತು ಮೂರು ಮಿಕ್ಸರ್‌ ವಶ ಪಡಿಸಿಕೊಳ್ಳಲಾಗಿದೆ.

ಕಲಬೆರಕೆ ಹಾಲು ತಯಾರಿಸುತ್ತಿದ್ದ ಡೈರಿ ಮಾಲೀಕ ಬಂಡಾ ಜಾಧವ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ