ಆ್ಯಪ್ನಗರ

ರೈಲ್ವೆ ಸ್ಟೇಷನ್‌ ಮಾಸ್ಟರ್ಸ್‌ ಉಪವಾಸ ಸತ್ಯಾಗ್ರಹ

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಲ್‌ ಇಂಡಿಯಾ ಸ್ಟೇಷನ್‌ ಮಾಸ್ಟರ್ಸ್‌ ಅಸೋಸಿಯೇಶನ್‌ ವತಿಯಿಂದ ಶನಿವಾರ ಬೆಳಗಾವಿ ರೈಲು ನಿಲ್ದಾಣದಲ್ಲಿ ...

Vijaya Karnataka 12 Aug 2018, 5:00 am
ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಲ್‌ ಇಂಡಿಯಾ ಸ್ಟೇಷನ್‌ ಮಾಸ್ಟರ್ಸ್‌ ಅಸೋಸಿಯೇಶನ್‌ ವತಿಯಿಂದ ಶನಿವಾರ ಬೆಳಗಾವಿ ರೈಲು ನಿಲ್ದಾಣದಲ್ಲಿ ಸ್ಟೇಷನ್‌ ಮಾಸ್ಟರ್ಸ್‌ ಉಪವಾಸ ಸತ್ಯಾಗ್ರಹ ನಡೆಸಿ ಪ್ರತಿಭಟಿಸಿದರು.
Vijaya Karnataka Web BEL-11 LBS 5


ವೇತನ ಹೆಚ್ಚಳ ಮಾಡಬೇಕು. ಸ್ಟೇಷನ್‌ ಮಾಸ್ಟರ್ಸ್‌ಗಳು ಎಲ್ಲ ಸ್ಟೇಷನ್‌ಗಳಲ್ಲಿ ನಿತ್ಯ 12 ತಾಸು ಕೆಲಸ ನಿರ್ವಹಿಸುತ್ತಿದ್ದು, ಕೆಲಸದ ಅವಧಿ ಕಡಿಮೆ ಮಾಡಬೇಕು. ಸ್ಟೇಷನ್‌ ಮಾಸ್ಟರ್ಸ್‌ಗಳಿಗೆ ಸುರಕ್ಷಾ ಭತ್ಯೆ ನೀಡಬೇಕು. ಹೆಚ್ಚು ರೈಲು ಸಂಚರಿಸುವ ಸ್ಟೇಷನ್‌ಗೆ ಸಹಾಯಕ ಸ್ಟೇಷನ್‌ ಮಾಸ್ಟರ್‌ ನೇಮಕ ಮಾಡಬೇಕು. ವೈದ್ಯಕೀಯ ಮತ್ತು ಶೈಕ್ಷಣಿಕ ಸೇವೆ ಇಲ್ಲದ ರೈಲು ನಿಲ್ದಾಣ ಗುರುತಿಸಿ, ಸಮೀಪದ ನಗರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕು. ಅವಶ್ಯವಿರುವ ರೈಲ್ವೆ ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು. 2004ರ ಹೊಸ ಪಿಂಚಣಿ ಯೋಜನೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ಸುರೇಂದ್ರ ಪ್ರಕಾಶ, ಸಹಾಯಕ ಕಾರ್ಯದರ್ಶಿ ಜಯಂತಸಿಂಗ್‌, ಸಂತೋಷ ಸಂದರ್ಶಿ, ಅಜಯಕುಮಾರ, ಎ.ಆರ್‌. ಮೋರಯಾ, ದಿಲೀಪಕುಮಾರ, ಗೋಪಿ ರಮಣರಾಯ, ಮಧುಸೂಧನ ಗೊಲ್ಲ, ರಾಜೀವಕುಮಾರ, ಅನಿಲಕುಮಾರ ಡಿ. ಸೇರಿದಂತೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ