ಆ್ಯಪ್ನಗರ

ಗೋವಾ, ಮಂಗಳೂರು ನೇರ ರೈಲು ಆರಂಭಿಸಿ; ರೈಲ್ವೆ ಅಧಿಕಾರಿಗಳಿಗೆ ಈರಣ್ಣ ಕಡಾಡಿ ಸೂಚನೆ

ಗೋವಾ ಮತ್ತು ಮಂಗಳೂರಿಗೆ ನೇರ ರೈಲು ಆರಂಭಿಸಲು ಅಧಿಕಾರಿಗಳಿಗೆ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಸೂಚಿಸಿದ್ದಾರೆ. ಇದರಿಂದ ​ರೈತರು, ವಿದ್ಯಾರ್ಥಿಗಳು ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ. ದಿ.ಸುರೇಶ್‌ ಅಂಗಡಿಯವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

Vijaya Karnataka Web 24 Jan 2021, 7:55 pm
ಬೆಳಗಾವಿ: ಮೀಟರ್‌ ಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಬದಲಾದ ಬಳಿಕ ಸ್ಥಗಿತಗೊಳಿಸಿರುವ ಬೆಳಗಾವಿ ಕೇಂದ್ರಿತವಾದ ಎಲ್ಲ ರೈಲುಗಳ ಸಂಚಾರ ಪುನಾರಂಭಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web Iranna Kadadi
ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ (ಸಂಗ್ರಹ ಚಿತ್ರ)


ಶನಿವಾರ ನೈರುತ್ಯ ರೈಲ್ವೆ ಹುಬ್ಬಳ್ಳಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರೈಲ್ವೆಯ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು. ರೈಲ್ವೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಅನೇಕ ಹೊಸ ಯೋಜನೆಗಳನ್ನು ಪ್ರಸ್ತಾಪಿಸಿದರು. ನೈರುತ್ಯ ರೈಲ್ವೆ ವ್ಯಾಪ್ತಿಯನ್ನು ಮಹಾರಾಷ್ಟ್ರದ ಮೀರಜ್‌ವರೆಗೆ ವಿಸ್ತರಿಸುವ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸಂಸದರ ಸೂಚನೆ
ರೈತರು, ವಿದ್ಯಾರ್ಥಿಗಳು ಮತ್ತು ಪ್ರವಾಸೋದ್ಯಮದ ಅನುಕೂಲಕ್ಕಾಗಿ ಬೆಳಗಾವಿಯಿಂದ ಮಂಗಳೂರಿಗೆ ನೇರ ರೈಲು ಸಂಚಾರ ಆರಂಭಿಸಬೇಕು. ಇದರಿಂದ ವ್ಯಾಪಾರ ಮತ್ತು ವಾಣಿಜ್ಯ ಬೆಳವಣಿಗೆಗೆ ಪೂರಕ ವಾತಾವರಣ ರೂಪಿಸಿದಂತಾಗುತ್ತದೆ. ಬೆಳಗಾವಿಯಿಂದ ಗೋವಾಕ್ಕೆ ನಿತ್ಯ ನೂರಾರು ಲಾರಿಗಳಲ್ಲಿ ತರಕಾರಿ, ಹಾಲು ಸೇರಿ ಹಲವು ಉತ್ಪನ್ನಗಳ ಪೂರೈಕೆಯಾಗುತ್ತದೆ. ಈ ದೃಷ್ಟಿಯಿಂದ ಗೋವಾಕ್ಕೆ ನೇರ ರೈಲು ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಂಚಾರ ವಿಸ್ತರಿಸಿ
ಬೆಳಗಾವಿ-ಬೆಂಗಳೂರು ಸೂಪರ್‌ ಫಾಸ್ಟ್‌ ರೈಲು ಸಂಚಾರವನ್ನು ಮೈಸೂರಿನವರೆಗೆ ವಿಸ್ತರಿಸಬೇಕು. ಅದರೊಂದಿಗೆ ರೈಲು ಪ್ರಯಾಣದ ಉದ್ದೇಶದ ಜತೆಗೆ ಪ್ರವಾಸೋದ್ಯಮಕ್ಕೂ ಅನುಕೂಲ ಕಲ್ಪಿಸಿದಂತಾಗುತ್ತದೆ. ರದ್ದುಗೊಂಡಿರುವ ಹುಬ್ಬಳ್ಳಿ-ಮೀರಜ್‌ ಪ್ಯಾಸೆಂಜರ್‌ ರೈಲು ಸಂಚಾರವನ್ನು ಪ್ರಾರಂಭಿಸಬೇಕು ಎಂದರು. ನೈರುತ್ಯ ರೈಲ್ವೆ ವ್ಯಾಪ್ತಿಯು ಮಹಾರಾಷ್ಟ್ರದ ವಿಜಯನಗರವರೆಗೆ ಇದೆ. ರೈಲ್ವೆ ಜಂಕ್ಷನ್‌ ಮೀರಜ್‌ನಲ್ಲಿದೆ. ಹಾಗಾಗಿ ಹುಬ್ಬಳ್ಳಿ- ಮೀರಜ್‌ ನಡುವೆ ರೈಲು ಆರಂಭಿಸಲು ಕೇಂದ್ರ ಸರಕಾರದ ಒಪ್ಪಿಗೆ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಬೆಳಗಾವಿ ಉಪಕದನ: ಸಹೋದರ ರಮೇಶ್ ಕತ್ತಿ ಅವರಿಗೆ ಟಿಕೆಟ್ ಪರಿಗಣನೆಗೆ ಉಮೇಶ್ ಕತ್ತಿ ಮನವಿ!ವಿಜಯನಗರ ಮತ್ತು ಮೀರಜ್‌ ರೈಲ್ವೆ ಜಂಕ್ಷನ್‌ ಕಡಿಮೆ ದೂರದಲ್ಲಿದೆ. ಹಾಗಾಗಿ ನೈರುತ್ಯ ರೈಲ್ವೆ ವ್ಯಾಪ್ತಿಯನ್ನು ಮೀರಜ್‌ವರೆಗೆ ವಿಸ್ತರಿಸಿಕೊಂಡರೆ ಹಲವು ರೈಲ್ವೆ ಯೋಜನೆಗಳಿಗೆ ನೈರುತ್ಯ ರೈಲ್ವೆಯೇ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗಲಿದೆ. ಹಾಗಾಗಿ ಆ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದರೆ ಮುಂದಿನ ಕ್ರಮ ವಹಿಸುವುದಾಗಿ ತಿಳಿಸಿದರು.

ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವ ಕೊಲ್ಲಾಪುರ- ಬೆಂಗಳೂರು ರಾಣಿ ಚನ್ನಮ್ಮ ರೈಲನ್ನು ಮೀರಜ್‌ನಿಂದ ಆರಂಭಿಸಬೇಕು. ಆ ರೈಲು 3.30ಕ್ಕೆ ಹೊರಡುವ ಬದಲು ಎರಡು ಗಂಟೆ ತಡವಾಗಿ ಬಿಡಬೇಕು. ಇದರಿಂದ ಬೆಂಗಳೂರು ಮತ್ತಿತರ ನಗರಗಳಿಗೆ ಹೋಗುವ ಜನರಿಗೆ ಅನುಕೂಲ ಆಗಲಿದೆ. ಸಾಕಷ್ಟು ಸಮಯ ಉಳಿಯಲಿದೆ ಎಂದು ಈರಣ್ಣ ಕಡಾಡಿ ಹೇಳಿದರು.
ಬೆಳಗಾವಿ ಪಾಲಿಕೆ ಮುಂಭಾಗದ ಕನ್ನಡ ಧ್ಚಜ ತೆರವುಗೊಳಿಸಿದ್ರೆ ರಕ್ತಪಾತವಾಗುತ್ತೆ: ವಾಟಾಳ್‌ ಎಚ್ಚರಿಕೆನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್‌, ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಳಕಡೆ, ಪಿಸಿಸಿಎಂ ಅನಿಲ್‌ ಪವಿತ್ರನ್‌, ಸಿಪಿಟಿಎಂ ಎಚ್‌.ಎಂ. ದಿನೇಶ, ಟಿ.ವಿ. ಭುಶನ್‌ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಳಗಾವಿ- ಧಾರವಾಡ ರೈಲು ಮಾರ್ಗ ಕಾಮಗಾರಿ ಆರಂಭಿಸಿಹುಬ್ಬಳ್ಳಿ-ಮೀರಜ್‌ ರೈಲ್ವೆ ಮಾರ್ಗ ದ್ವಿಪಥ ಕಾಮಗಾರಿ, ಬ್ರೀಜ್‌ ಕಂ ಬಾರೇಜ್‌ಗಳನ್ನು ಬೇಗ ಪೂರ್ಣಗೊಳಿಸಬೇಕು. ಸುರೇಶ ಅಂಗಡಿ ಅವರ ಕನಸಿನ ಕಾಮಗಾರಿಯಾದ ಬೆಳಗಾವಿ-ಧಾರವಾಡ ರೈಲು ಹೊಸ ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ ದೊರತಿದೆ. ಆ ಕಾರ್ಯ ಆದಷ್ಟು ಬೇಗ ಪ್ರಾರಂಭಿಸಬೇಕು. ಅದರಂತೆ ಜೋಡಿ ಮಾರ್ಗ ಯೋಜನೆಯಡಿಯಲ್ಲಿ ಹುಬ್ಬಳ್ಳಿ- ಮೀರಜ್‌ವರೆಗಿನ ಎಲ್ಲಾ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಎಲ್ಲ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ