ಆ್ಯಪ್ನಗರ

ಎಂಟಿಬಿ ಕಡೆಯಿಂದ ₹9 ಕೋಟಿ ಸಾಲ ಮಾಡಿರೋ ಯೋಗೇಶ್ವರ್‌ಗೆ ಸಚಿವ ಸ್ಥಾನ ಕೊಟ್ಟಿರೋದು ಸೂಕ್ತ ನಿರ್ಧಾರ: ಜಾರಕಿಹೊಳಿ

ಯೋಗೇಶ್ವರ್‌ಗೆ ಅಂದು ನಮ್ಮನ್ನ ಒಗ್ಗೂಡಿಸುವುದು ಯಾಕೆ ಬೇಕಿತ್ತು? ಕಷ್ಟಪಟ್ಟು ಆರೋಗ್ಯ ಹಾಳು ಮಾಡಿಕೊಂಡಾಗ ಅವರೆಲ್ಲ ಎಲ್ಲಿದ್ದರು? ಈ ಸರಕಾರ ರಚನೆಯಲ್ಲಿ ಯೋಗೇಶ್ವರ್‌ ಪಾತ್ರ ಬಹಳ ದೊಡ್ಡದಿದೆ ಎಂದ ಸಚಿವ ರಮೇಶ ಜಾರಕಿಹೊಳಿ, ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ಕೊಟ್ಟಿರುವುದನ್ನು ಸಮರ್ಥಿಸಿಕೊಂಡರು.

Vijaya Karnataka Web 15 Jan 2021, 10:50 am
ಬೆಳಗಾವಿ: ಸರಕಾರ ರಚನೆಗಾಗಿ ಸಿ.ಪಿ.ಯೋಗೇಶ್ವರ್‌ ತಮ್ಮ ಮನೆ ಮೇಲೆ ಒಂಬತ್ತು ಕೋಟಿ ರೂ. ಸಾಲ ಮಾಡಿದ್ದರು. ಎಂ.ಟಿ.ಬಿ. ನಾಗರಾಜ್‌ ಕಡೆಯಿಂದ ಸಾಲ ತಂದರು. ಯೋಗೇಶ್ವರ್‌ಗೆ ಈಗ ಸಚಿವ ಸ್ಥಾನ ಸಿಕ್ಕಿರುವುದು ಸೂಕ್ತವಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
Vijaya Karnataka Web Ramesh jarakiholi


ಸೋತವರಿಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಅಮಿತ್‌ ಶಾ ಅವರಿಗೆ ದೂರು ನೀಡುವುದಾಗಿ ಕೆಲ ಶಾಸಕರ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯೋಗೇಶ್ವರ್‌ಗೆ ಅಂದು ನಮ್ಮನ್ನ ಒಗ್ಗೂಡಿಸುವುದು ಯಾಕೆ ಬೇಕಿತ್ತು? ಕಷ್ಟಪಟ್ಟು ಆರೋಗ್ಯ ಹಾಳು ಮಾಡಿಕೊಂಡಾಗ ಅವರೆಲ್ಲ ಎಲ್ಲಿದ್ದರು? ಈ ಸರಕಾರ ರಚನೆಯಲ್ಲಿ ಯೋಗೇಶ್ವರ್‌ ಪಾತ್ರ ಬಹಳ ದೊಡ್ಡದಿದೆ ಎಂದ ಅವರು ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ಕೊಟ್ಟಿರುವುದನ್ನು ಸಮರ್ಥಿಸಿಕೊಂಡರು.

ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಪಸ್ವರ, ಅಚ್ಚರಿ ಮೂಡಿಸಿದ ಹೈಕಮಾಂಡ್‌ ಮೌನ..!
ಶಾಸಕರು ಮುಂಬರುವ 2023ರ ಚುನಾವಣೆಯಲ್ಲಿ ಮತ್ತೆ ಗೆದ್ದು ಹಕ್ಕಿನಿಂದ ಸಚಿವರಾಗಲಿ. ಹಾಲಿ ಸಂದರ್ಭವನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು. ಜಿ.ಪಂ, ತಾ.ಪಂ ಚುನಾವಣೆ ಆದ ಬಳಿಕ ಸಂಪುಟ ವಿಸ್ತರಣೆ ಆಗಬಹುದು. ಹೈಕಮಾಂಡ್‌ ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತದೆ ಎಂದರು. ಬೆಳಗಾವಿ, ಬೆಂಗಳೂರಿಗೆ ಸರಕಾರ ಸೀಮಿತವಾಗಿದೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಉತ್ತರಿಸಿದ ರಮೇಶ ಜಾರಕಿಹೊಳಿ, ರೇಣುಕಾಚಾರ್ಯ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದರು.

‘4 ಸೀಟು ಗೆದ್ದ ಕೆಲವು ನಾಯಿಗಳು ಪಾಕಿಸ್ತಾನ್‌ ಜಿಂದಾಬಾದ್‌ ಕೂಗುತ್ತಾರೆ’; ಈಶ್ವರಪ್ಪ ಕಿಡಿ
ಇನ್ನು ಮುರುಗೇಶ್‌ ನಿರಾಣಿ ಅವರು ವಿಜಯೇಂದ್ರ ಅವರಿಗೆ ದುಡ್ಡು ಕೊಟ್ಟು ಸಚಿವರಾಗಿದ್ದಾರೆ ಎಂಬ ಬಸವರಾಜ ಯತ್ನಾಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, ಅದು ಅವರ ವೈಯಕ್ತಿಕ ವಿಚಾರ. ಯತ್ನಾಳ ಅವರು ಬಹಳ ಹಿರಿಯರು. ಅವರು ಮಂತ್ರಿಯಾಗಬೇಕು ಎಂದು ನಮಗೂ ಆಸೆ ಇದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ