ಬೆಳಗಾವಿ : ರಮೇಶ್ ಜಾರಕಿಹೊಳಿ ನನ್ನ ಸಂಪರ್ಕಕ್ಕೂ ಸಿಕ್ಕಿಲ್ಲ, ಮೊಬೈಲ್ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತಾಲೂಕಿನ ಕಡೋಲಿ ಗ್ರಾಮದಲ್ಲಿ ಶನಿವಾರ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
''ನಮ್ಮ ಶಾಸಕರು ಯಾವುದೇ ಭಿನ್ನಮತ ಹೊಂದಿಲ್ಲ. ಹೀಗಾಗಿ ಅವರು ಪಕ್ಷ ಬಿಡುವ ಪ್ರಮೇಯವೇ ಇಲ್ಲ. ರಮೇಶ್ ಜಾರಕಿಹೊಳಿ ಅವರಿಗೂ ನನ್ನ ಮೇಲೆ ಯಾವುದೇ ರೀತಿಯ ಕೋಪವಿಲ್ಲ. ತೀರಾ ಆತ್ಮೀಯರಾಗಿದ್ದಾರೆ. ನಾವು ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದ್ದೇವೆ. ಇದನ್ನು ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಿಲ್ಲ'', ಎಂದು ಸ್ಪಷ್ಟಪಡಿಸಿದರು.
''ಕಾಂಗ್ರೆಸ್ನ ಯಾವೊಬ್ಬ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿಯವರು ಸುಮ್ಮನೆ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಅಧಿಕಾರದ ಆಸೆಗಾಗಿ ಈ ರೀತಿ ಹೇಳಿಕೊಂಡು ತಿರುಗಿದರೆ ಅದು ಸತ್ಯವಾಗುವುದಿಲ್ಲ'', ಎಂದ ಅವರು, ಸಂಕ್ರಾಂತಿಗೆ ಸರಕಾರದ ಭದ್ರತೆಗೆ ಧಕ್ಕೆ ಬರುತ್ತದೆ ಎಂದು ಹರಡಿರುವ ಸುದ್ದಿಯ ಬಗ್ಗೆ ಹುಸಿಗೋಪ ತೋರಿದರು. ''ಕ್ರಾಂತಿ ಬಗ್ಗೆ ಬಿಜೆಪಿಯವರಿಗೆ ಏನು ಗೊತ್ತಿದೆ? ಅವರು ಎಂದಾದರೂ ಹಾಗೆ ಮಾಡಿದ್ದಾರೆಯೇ? ಸ್ವಾತಂತ್ರ್ಯ ಹೋರಾಟದಲ್ಲಿ ಇಲ್ಲದವರು ಈಗೇನು ಕ್ರಾಂತಿ ಮಾಡುತ್ತಾರೆ?'', ಎಂದು ವ್ಯಂಗ್ಯವಾಡಿದರು.
ತಾಲೂಕಿನ ಕಡೋಲಿ ಗ್ರಾಮದಲ್ಲಿ ಶನಿವಾರ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
''ನಮ್ಮ ಶಾಸಕರು ಯಾವುದೇ ಭಿನ್ನಮತ ಹೊಂದಿಲ್ಲ. ಹೀಗಾಗಿ ಅವರು ಪಕ್ಷ ಬಿಡುವ ಪ್ರಮೇಯವೇ ಇಲ್ಲ. ರಮೇಶ್ ಜಾರಕಿಹೊಳಿ ಅವರಿಗೂ ನನ್ನ ಮೇಲೆ ಯಾವುದೇ ರೀತಿಯ ಕೋಪವಿಲ್ಲ. ತೀರಾ ಆತ್ಮೀಯರಾಗಿದ್ದಾರೆ. ನಾವು ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದ್ದೇವೆ. ಇದನ್ನು ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಿಲ್ಲ'', ಎಂದು ಸ್ಪಷ್ಟಪಡಿಸಿದರು.
''ಕಾಂಗ್ರೆಸ್ನ ಯಾವೊಬ್ಬ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿಯವರು ಸುಮ್ಮನೆ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಅಧಿಕಾರದ ಆಸೆಗಾಗಿ ಈ ರೀತಿ ಹೇಳಿಕೊಂಡು ತಿರುಗಿದರೆ ಅದು ಸತ್ಯವಾಗುವುದಿಲ್ಲ'', ಎಂದ ಅವರು, ಸಂಕ್ರಾಂತಿಗೆ ಸರಕಾರದ ಭದ್ರತೆಗೆ ಧಕ್ಕೆ ಬರುತ್ತದೆ ಎಂದು ಹರಡಿರುವ ಸುದ್ದಿಯ ಬಗ್ಗೆ ಹುಸಿಗೋಪ ತೋರಿದರು. ''ಕ್ರಾಂತಿ ಬಗ್ಗೆ ಬಿಜೆಪಿಯವರಿಗೆ ಏನು ಗೊತ್ತಿದೆ? ಅವರು ಎಂದಾದರೂ ಹಾಗೆ ಮಾಡಿದ್ದಾರೆಯೇ? ಸ್ವಾತಂತ್ರ್ಯ ಹೋರಾಟದಲ್ಲಿ ಇಲ್ಲದವರು ಈಗೇನು ಕ್ರಾಂತಿ ಮಾಡುತ್ತಾರೆ?'', ಎಂದು ವ್ಯಂಗ್ಯವಾಡಿದರು.