ಆ್ಯಪ್ನಗರ

ಹೊಸ ರೀತಿಯಲ್ಲಿ ಜೀವ ಪಡೆದ ರಮೇಶ್‌-ಲಕ್ಷ್ಮಿ ರಾಜಕೀಯ ಸಂಘರ್ಷ

ಬೆಳಗಾವಿ: ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಸ್ಥಾನದ ಚುನಾವಣೆ ಗದ್ದಲದ ...

Vijaya Karnataka 30 Jun 2020, 5:00 am
ಬೆಳಗಾವಿ: ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಸ್ಥಾನದ ಚುನಾವಣೆ ಗದ್ದಲದ ಬಳಿಕ ತಣ್ಣಗಾಗಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಮತ್ತು ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ನಡುವಿನ ರಾಜಕೀಯ ಸಂಘರ್ಷ ಈಗ ಹೊಸ ರೀತಿಯಲ್ಲಿಜೀವ ಪಡೆದಿದೆ.
Vijaya Karnataka Web KADAM070421
ಸಚಿವ ರಮೇಶ್‌ ಜಾರಕಿಹೊಳಿ ಅವರೊಂದಿಗೆ ಯುವರಾಜ್‌ ಕದಂ ಭೋಜನ.


ಬೆಳಗಾವಿ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ, ಲಕ್ಷ್ಮಿ ಹೆಬ್ಬಾಳಕರ್‌ ಬಣದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು ತಾನೇ ಎಂಬರ್ಥದ ರಮೇಶ್‌ ಜಾರಕಿಹೊಳಿ ಅವರ ಮಾತು ಜಿಲ್ಲಾರಾಜಕಾರಣದಲ್ಲಿಕುತೂಹಲ ಕೆರಳಿಸಿದೆ. ಜತೆಗೆ ಇದೇ ವಿಚಾರದಲ್ಲಿಇಬ್ಬರೂ ನಾಯಕರು 'ಕಾಣದ ಕೈ'ಗೆ ಕೊಟ್ಟಿರುವ ಉತ್ತರ ಎಪಿಎಂಸಿ ರಾಜಕಾರಣದ ಬಗ್ಗೆ ಟ್ವಿಸ್ಟ್‌ ಕೊಟ್ಟಿದೆ.

ಈಚೆಗೆ ನಡೆದ ಬೆಳಗಾವಿ ಎಪಿಎಂಸಿ ಚುನಾವಣೆಯಲ್ಲಿಲಕ್ಷ್ಮಿ ಹೆಬ್ಬಾಳಕರ್‌ ಬಣದ ಯುವರಾಜ್‌ ಕದಂ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದರು. ಅದು ಅಚ್ಚರಿಗೆ ಕಾರಣವಾಗಿತ್ತು. ಇದಾದ ಬಳಿಕ ಕೆಲ ದಿನಗಳ ಹಿಂದೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌, ''ಈ ಚುನಾವಣೆಯಿಂದ ರಮೇಶ್‌ ಜಾರಕಿಹೊಳಿ ಅವರಿಗೆ ಹಿನ್ನಡೆಯಾಗಿದ್ದು ನಿಜ'', ಎಂದು ಒಪ್ಪಿಕೊಂಡಿದ್ದರು. ಅಲ್ಲದೆ, ಈ ಆಯ್ಕೆ ಹಿಂದೆ ಕಾಣದ ಕೈ ಕೆಲಸ ಮಾಡಿದೆ ಎಂದು ಹೇಳಿದ್ದರು.

ಇದೇ ವಿಚಾರವಾಗಿ ಸೋಮವಾರ ಬೆಳಗ್ಗೆ ಬೆಳಗಾವಿಯಲ್ಲಿಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮೇಶ್‌ ಜಾರಕಿಹೊಳಿ, ''ಆ ಕಾಣದ ಕೈ ನಾನೇ. ಏನೀಗ?'' ಎಂದು ಗುಟ್ಟು ಹೊರಹಾಕಿದ್ದಾರೆ. ಅಲ್ಲದೆ, 'ಲಕ್ಷ್ಮಿ ಹೆಬ್ಬಾಳಕರ್‌ ಸವಾಲು ಹಾಕಿದರೆ ಓಡಿ ಹೋಗಲು ಆಗುತ್ತದೆಯೇ?'' ಎಂದೆಲ್ಲಹೇಳಿ ತಿರುಗೇಟು ನೀಡಿದ್ದಾರೆ.

ಇದೇ ಮಾತಿಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಿ ಹೆಬ್ಬಾಳಕರ್‌, ''ಇಂಥ ಚೈಲ್ಡಿಶ್‌ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ನನ್ನ ಕ್ಷೇತ್ರದಲ್ಲಿ ಬ್ಯುಸಿ ಇದ್ದೇನೆ. ಈ ರೀತಿಯ ಹೇಳಿಕೆಗಳಿಗೆ ಉತ್ತರ ಕೊಡಲು ನನ್ನ ಹತ್ತಿರ ಸಮಯವೂ ಇಲ್ಲ. ಆಸಕ್ತಿ ಕೂಡ ಇಲ್ಲ'' ಎಂದು ಟಾಂಗ್‌ ಕೊಟ್ಟಿದ್ದಾರೆ.

'ಯುವರಾಜ್‌ ಕದಂ ಅವರನ್ನು ಅಧ್ಯಕ್ಷ ಮಾಡುತ್ತೇವೆಂದು ಸತೀಶ್‌ ಜಾರಕಿಹೊಳಿ ಅವರು ಕಳೆದ ಬಾರಿಯೇ ಮಾತು ಕೊಟ್ಟಿದ್ದರು. ಅದರಂತೆ ಅಧ್ಯಕ್ಷರಾಗಿದ್ದಾರೆ. ಅದಕ್ಕೆ ಎಂಇಎಸ್‌‍ನವರೂ ಸಾಥ್‌ ಕೊಟ್ಟಿದ್ದಾರೆ. ಈ ಬಗ್ಗೆ ಸತೀಶ್‌ ಜಾರಕಿಹೊಳಿ ಅವರನ್ನು ಕೇಳಿ'' ಎಂದರು.

ಸಚಿವರೊಂದಿಗೆ ಅಧ್ಯಕ್ಷರ ಭೋಜನ!

ಇಷ್ಟೆಲ್ಲನಡೆದ ಕೆಲವೇ ಹೊತ್ತಿನಲ್ಲಿಯೇ ಎಪಿಎಂಸಿ ಅಧ್ಯಕ್ಷ ಯುವರಾಜ್‌ ಕದಂ ಅವರು ಎಪಿಎಂಸಿಯಲ್ಲಿಸಚಿವರಾಗಿ ಭೋಜನ ವ್ಯವಸ್ಥೆ ಮಾಡಿದ್ದರು. ಬೆಳಗಾವಿ ಪಾಲಿಕೆ ಸಭೆ ಬಳಿಕ ಸಚಿವ ರಮೇಶ್‌ ಜಾರಕಿಹೊಳಿ ಎಪಿಎಂಸಿಗೆ ಹೋಗಿ ಯುವರಾಜ್‌ ಕದಂ ಅವರೊಂದಿಗೆ ಊಟ ಮಾಡಿದ್ದಾರೆ. ಅಲ್ಲದೆ, ಇಬ್ಬರೂ ಒಂದೇ ಕಾರಿನಲ್ಲಿಎಪಿಎಂಸಿಯಿಂದ ಪ್ರವಾಸಿ ಮಂದಿರಕ್ಕೆ ಬಂದಿದ್ದಾರೆ. ಹಾಗಾಗಿ ಈ ಎಲ್ಲಬೆಳವಣಿಗೆಗಳು ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿಕುತೂಹಲ ಸೃಷ್ಟಿಸಿದೆ. ಅಸಲಿಗೆ ಕಾಂಗ್ರೆಸ್‌ನ ಯುವರಾಜ್‌ ಕದಂ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಸಚಿವ ರಮೇಶ್‌ ಜಾರಕಿಹೊಳಿ ಅವರೇ? ಅಥವಾ ಯುವರಾಜ್‌ ಕದಂ ಅವರೇ ಬಿಜೆಪಿ ಗಾಳಕ್ಕೆ ಕಚ್ಚಿಕೊಂಡರೆ ಎನ್ನುವ ಹತ್ತಾರು ರೀತಿಯ ಚರ್ಚೆಗಳು ಗರಿಗೆದರಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ