ಆ್ಯಪ್ನಗರ

‘ದುರ್ಬಲರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಲು ರಮೇಶ್‌ ಲಾಬಿ’

'ದುರ್ಬಲರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಲು ರಮೇಶ್‌ ಲಾಬಿ' ಬೆಳಗಾವಿ: ''ಉಪ ಚುನಾವಣೆಗೆ ಗೋಕಾಕ ಕ್ಷೇತ್ರದಲ್ಲಿಕಾಂಗ್ರೆಸ್‌ನಿಂದ ದುರ್ಬಲ ಅಭ್ಯರ್ಥಿ ಕಣಕ್ಕಿಳಿಸುವಂತೆ ರಮೇಶ ...

Vijaya Karnataka 11 Nov 2019, 5:00 am
ಬೆಳಗಾವಿ: ''ಉಪ ಚುನಾವಣೆಗೆ ಗೋಕಾಕ ಕ್ಷೇತ್ರದಲ್ಲಿಕಾಂಗ್ರೆಸ್‌ನಿಂದ ದುರ್ಬಲ ಅಭ್ಯರ್ಥಿ ಕಣಕ್ಕಿಳಿಸುವಂತೆ ರಮೇಶ ಜಾರಕಿಹೊಳಿ ದೆಹಲಿ ಮಟ್ಟದಲ್ಲಿಯತ್ನ ಮಾಡುತ್ತಿದ್ದಾರೆ'' ಎಂದು ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ.
Vijaya Karnataka Web ramesh lobby to issue congress ticket to the weak
‘ದುರ್ಬಲರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಲು ರಮೇಶ್‌ ಲಾಬಿ’


ಭಾನುವಾರ ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ದೆಹಲಿಯಲ್ಲಿರುವ ಕೆಲವು ಕಾಂಗ್ರೆಸ್‌ನವರು ಗೊತ್ತಿದ್ದಾರೆ ಎಂದು ರಮೇಶ ದುರ್ಬಲರಿಗೆ ಟಿಕೆಟ್‌ ಕೊಡಿಸಲು ಓಡಾಡುತ್ತಿದ್ದಾನೆ. ಆದರೆ, ರಮೇಶ್‌ ಮಾತನ್ನು ನಮ್ಮ ಪಕ್ಷದವರು ಕೇಳುವುದಿಲ್ಲ. ಲಖನ್‌ಗೆ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತದೆ. ಅವರನ್ನು ಬಿಟ್ಟರೆ ಗೋಕಾಕದಲ್ಲಿಏನೂ ಮಾಡಲು ಆಗುವುದಿಲ್ಲ. ಇನ್ನೆರಡು ದಿನಗಳಲ್ಲಿಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಲಿದೆ'' ಎಂದರು.

''ಆಶೋಕ ಪೂಜಾರಿ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಕುರಿತು ಚರ್ಚೆ ಆಗಿದೆ. ಹಿಂದಿನ ಚುನಾವಣೆಯಲ್ಲಿಅವರು ತೆಗೆದುಕೊಂಡು ಮತಗಳ ಮೇಲೆ ಚರ್ಚೆ ಆಗಿದೆ. ಆದರೆ, ಈ ಚುನಾವಣೆಯಲ್ಲಿಹಿಂದಿನ ಲೆಕ್ಕ ತೆಗೆದುಕೊಳ್ಳಲು ಆಗುವುದಿಲ್ಲ. ಅಶೋಕ ಪೂಜಾರಿ ಅವರನ್ನು ಕಾಂಗ್ರೆಸ್‌ಗೆ ಕರೆತರುವುದು ಪಕ್ಷದ ಮಟ್ಟದಲ್ಲಿನಡೆಯುತ್ತಿಲ್ಲ. ಜಿಲ್ಲಾ ಮಟ್ಟದಲ್ಲಿನಡೆಯುತ್ತಿದೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ