ಆ್ಯಪ್ನಗರ

ಬೆಳಗಾವಿ: ಸಾಹುಕಾರ ಬ್ರದರ್ಸ್‌ ಸತೀಶ್‌-ರಮೇಶ್‌ ಜಗಳ್‌ಬಂದಿ!

ಸಚಿವ ರಮೇಶ್‌ ಜಾರಕಿಹೊಳಿ ಅವರು ಮುಸ್ಲಿಂ ಟೋಪಿ ಹಾಕಿರುವುದನ್ನು ನೋಡಿದ್ದೇವೆ. ಆದರೆ ಕರಿ ಟೋಪಿ ಹಾಕಿದ್ದು ನೋಡಿಲ್ಲ'' ಎಂದು ಸತೀಶ್‌ ಜಾರಕಿಹೊಳಿ ಹೇಳಿದರೆ, ''ಗೋವಾ ವಿಮೋಚನಾ ಹೋರಾಟ ಆರಂಭಗೊಂಡಿದ್ದು ಸಂಘ ಪರಿವಾರದ ಜಗನ್ನಾಥ ಜೋಶಿ ನೇತೃತ್ವದಲ್ಲಿ ಎನ್ನುವುದನ್ನು ಸತೀಶ್‌ ಮರೆತಿದ್ದಾರೆ'' ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

Vijaya Karnataka Web 15 Jan 2021, 11:39 pm
ಬೆಳಗಾವಿ: ಬೆಳಗಾವಿ ಹಾಗೂ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದಂತೆ ಗೋಕಾಕದ 'ಸಾಹುಕಾರ ಬ್ರದರ್ಸ್' ಮತ್ತೊಮ್ಮೆ ಮಾತಿನ ಜಗಳ್‌ಬಂದಿ ನಡೆಸಿದ್ದಾರೆ.
Vijaya Karnataka Web ರಮೇಶ್‌ ಜಾರಕಿಹೊಳಿ
ರಮೇಶ್‌ ಜಾರಕಿಹೊಳಿ


''ಸಚಿವ ರಮೇಶ್‌ ಜಾರಕಿಹೊಳಿ ಅವರು ಮುಸ್ಲಿಂ ಟೋಪಿ ಹಾಕಿರುವುದನ್ನು ನೋಡಿದ್ದೇವೆ. ಆದರೆ ಕರಿ ಟೋಪಿ ಹಾಕಿದ್ದು ನೋಡಿಲ್ಲ'' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರೆ, ''ಗೋವಾ ವಿಮೋಚನಾ ಹೋರಾಟ ಆರಂಭಗೊಂಡಿದ್ದು ಸಂಘ ಪರಿವಾರದ ಜಗನ್ನಾಥ ಜೋಶಿ ನೇತೃತ್ವದಲ್ಲಿ ಎನ್ನುವುದನ್ನು ಸತೀಶ್‌ ಮರೆತಿದ್ದಾರೆ'' ಎಂದು ರಮೇಶ್‌ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್‌ ಜಾರಕಿಹೊಳಿ, ''ರಮೇಶ್‌ ಜಾರಕಿಹೊಳಿ ಮುಸ್ಲಿಂ ಪರವಾಗಿ ಹೋರಾಟ ಮಾಡಿದ್ದರು. ಮುಂದೆಯೂ ಅದೇ ರೀತಿ ಇರುತ್ತಾರೆಂಬ ವಿಶ್ವಾಸವಿದೆ. ಅವರು ಅಧಿಕಾರ ಎಂಜಾಯ್‌ ಮಾಡಲಿ. ಆದರೆ, ಹಿಂದಿನ ಹೋರಾಟ ಮುಂದುವರಿಸಬೇಕು. ನಮ್ಮ ತಂದೆ ಪತ್ರ ಚಳವಳಿಯಲ್ಲಿ ಹೋರಾಟ ಮಾಡಿದ್ದರು. ಆದರೆ, ಸಂಘ ಪರಿವಾರದಲ್ಲಿ ಇರಲಿಲ್ಲ. ಸಂಘದ ಸಲುವಾಗಿ ಮೂರು ವರ್ಷ ಜೈಲು ವಾಸ ಮಾಡಿದ್ದಾರೆ ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದು ಶುದ್ಧ ಸುಳ್ಳು'' ಎಂದು ಸಹೋದರನ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೆ, ರಮೇಶ್‌ ಜಾರಕಿಹೊಳಿ ಅವರು ಮುಸ್ಲಿಂ ಟೋಪಿ ಧರಿಸಿರುವ ಭಾವಚಿತ್ರವನ್ನೂ ಸತೀಶ್‌ ಪ್ರದರ್ಶಿಸಿದರು.

ನಗೆಯು ಬರುತಿದೆ: ಈ ಕುರಿತು ಸುದ್ದಿರಾರರಿಗೆ ಪ್ರತಿಕ್ರಿಯಿಸಿದ ಸಚಿವ ರಮೇಶ್‌,''ಸತೀಶ್‌ ಹೇಳಿಕೆ ಕೇಳಿ ನಗು ಬರುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಹೀಗೆ ಮಾತನಾಡುವುದು ವಿಚಿತ್ರ ಅನಿಸುತ್ತದೆ. ನಮ್ಮ ತಂದೆ ಲಕ್ಷ್ಮಣ ಜಾರಕಿಹೊಳಿ ಸಂಘದಲ್ಲಿಇದ್ದರೋ, ಇಲ್ಲವೋ ಎಂಬುದನ್ನು ನೀವೇ ಸರ್ವೇ ಮಾಡಿ'' ಎಂದರು.

''ನಾನು ಜನಸಂಘ ಮೂಲದಿಂದ ಬಂದಿದ್ದು ನಿಜ. ಬಳಿಕ ಕಾಂಗ್ರೆಸ್‌ ಪಕ್ಷ$ಸೇರಿ ಜಾತ್ಯತೀತನಾಗಿದ್ದೂ ನಿಜ. ಅಜ್ಮೀರ್‌ ದರ್ಗಾಗೆ ಹೋದಾಗ ಟೋಪಿ ಹಾಕಿದ್ದೂ ನಿಜ. ಯಾವುದನ್ನೂ ಇಲ್ಲಎಂದಿಲ್ಲ. ಆದರೆ, ನಾನು ಪಾಕಿಸ್ತಾನ ಜಿಂದಾಬಾದ್‌ ಎನ್ನುವ ದೇಶದ್ರೋಹಿಗಳ ಪರವಾಗಿಲ್ಲ. ಬಿಜೆಪಿ ಮುಸ್ಲಿಂ ವಿರೋಧಿ ಅಲ್ಲ. ಪಾಕಿಸ್ತಾನ ಜಿಂದಾಬಾದ್‌ ಎಂದು ಹೇಳುವವರನ್ನು ಗಡಿಪಾರು ಮಾಡಬೇಕೆಂಬುದು ನನ್ನ ನಿಲುವು'' ಎಂದು ಹೇಳಿದರು.

ಆರ್ಟಿಫಿಶಿಯಲ್ ರಾಜಕಾರಣಿ

''ಕಾಲೇಜು ಎಲೆಕ್ಷನ್‌ ವೇಳೆ ನಾನು ಸತೀಶ್‌ಗೆ ಬೋರ್ಡ್‌ ಬರೆಯುವುದನ್ನು ಕಲಿಸುತ್ತಿದ್ದೆ. ಸತೀಶ್‌ ಜಾರಕಿಹೊಳಿ ಏನು ದೊಡ್ಡ ಲೀಡರಾ? ಆತನ ಲೀಡರ್‌ಶಿಪ್‌ ಕೊಲ್ಯಾಫ್ಸ್‌ ಆಗುತ್ತಿದೆ. ಏಳು ವರ್ಷ ಆರಾಂ ಇರುವುದು ಒಳ್ಳೆಯದು. ಈಗ ಎರಡು ವರ್ಷ, ಮುಂದಿನ ಐದು ವರ್ಷ ಕಾಂಗ್ರೆಸ್‌ ಪಕ್ಷಕ್ಕೆ ಕೆಲಸ ಇಲ್ಲ. ಯಮಕನಮರಡಿ ಕ್ಷೇತ್ರದಲ್ಲಿ ಶಾಸಕರಾಗಿ ಪುನಾರಾಯ್ಕೆಯಾಗಿ ಬರಲಿ. ಎಲ್ಲಹಂತದಲ್ಲಿಫೇಲ್‌ ಆಗಿದ್ದಾನೆ. ಅದಕ್ಕೆ ಹತಾಶೆಯಿಂದ ಮಾತನಾಡುತ್ತಿದ್ದಾನೆ. ಆತ ಆರ್ಟಿಫಿಶಿಯಲ್ ರಾಜಕಾರಣಿ'' ಎಂದು ಸತೀಶ್‌ ವಿರುದ್ಧ ರಮೇಶ್‌ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಜನ ಸೇರಿಸಲು ನಿರ್ಬಂಧ ಇಲ್ಲವೇ?

''ಈಗಿನ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾನೂನು ಉಲ್ಲಂಘನೆ ಮಾಡುವಲ್ಲಿನಂಬರ್‌ ಒನ್‌. ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿಮದುವೆ, ಜಾತ್ರೆ ಆಯೋಜಿಸಲು ನಿರ್ಬಂಧ ಹಾಕುತ್ತಾರೆ. ಆದರೆ, 3-4 ಲಕ್ಷ ಜನರನ್ನು ಸೇರಿಸಿ ಬಿಜೆಪಿಯವರು ಕಾರ್ಯಕ್ರಮ ಮಾಡುತ್ತಿದ್ದಾರೆ. ನಿಯಮ ಮಾಡುವವರೇ ಮುರಿಯುತ್ತಿದ್ದಾರೆ. ಹೀಗಾದರೆ ನಿಯಮಗಳನ್ನು ತೆಗೆದು ಹಾಕುವುದು ಉತ್ತಮ'' ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ